Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಆವೃತ್ತಿಯೊಂದಿಗೆ ಕಲರ್ ಫುಲ್ 'ರಂಗಿತರಂಗ' ರೀ ರಿಲೀಸ್
ಕನ್ನಡ ಚಿತ್ರರಂಗಕ್ಕೆ ಕೋಲ್ಮಿಂಚಾಗಿ ಪರಿಣಮಿಸಿದ ಭಂಡಾರಿ ಸಹೋದರರ 'ರಂಗಿತರಂಗ' ಸಿನಿಮಾ ಕಳೆದ ವರ್ಷ ತೆರೆಕಂಡು ಇಡೀ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿತ್ತು.
ಇದೀಗ ಅದೇ ಕಲರ್ ಫುಲ್ 'ರಂಗಿತರಂಗ' ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ. ಈಗಾಗಲೇ 50 ವಾರಗಳನ್ನು ಪೂರೈಸಿರುವ 'ರಂಗಿತರಂಗ' ಸಿನಿಮಾ ಜುಲೈ 1 ರಂದು ಮರು ಬಿಡುಗಡೆ ಆಗುತ್ತಿದೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]
ಒರಿಜಿನಲ್ ಕಾಪಿಯಿಂದ ಸುಮಾರು 10 ನಿಮಿಷಗಳಷ್ಟು ಟ್ರಿಮ್ ಮಾಡಿ ಹಾಗೂ ಕೆಲವು ಹೊಸ ದೃಶ್ಯಗಳನ್ನು ಚಿತ್ರಕ್ಕೆ ಸೇರಿಸಿಕೊಂಡಿರುವ ಚಿತ್ರದ ಹೊಸ ಆವೃತ್ತಿಯನ್ನು ವಿಶ್ವದಾದ್ಯಂತ ಮರು-ಬಿಡುಗಡೆ ಮಾಡಲು ನಿರ್ದೇಶಕ ಅನುಪ್ ಭಂಡಾರಿ ಅವರು ಯೋಜನೆ ಹಾಕಿಕೊಂಡಿದ್ದಾರೆ.
ಭಾರತ, ಅಮೇರಿಕ, ಯು.ಕೆ, ಸಿಂಗಪೂರ್, ಆಸ್ಟ್ರೇಲಿಯಾ ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ 'ರಂಗಿತರಂಗ' ಮರು ಬಿಡುಗಡೆ ಆಗುತ್ತಿದೆ. ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ 'ರಂಗಿತರಂಗ' ಸಿನಿಮಾ ಈಗಲೂ ಬೆಂಗಳೂರಿನ ಐನಾಕ್ಸ್ ಮಂತ್ರಿ ಸ್ಕೈರ್ ಮತ್ತು ಬನ್ನೇರುಘಟ್ಟ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ.[ಜುಲೈ 3 ರಂದು 'ರಂಗಿತರಂಗ' ಭರ್ಜರಿ ಓಪನ್ನಿಂಗ್]
ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಜುಲೈ 3 ರಂದು ಅನುಪ್ ಭಂಡಾರಿ ಪ್ರೊಡಕ್ಷನ್ಸ್ ನಲ್ಲಿ ಮೂಡಿಬರುತ್ತಿರುವ ಭಂಡಾರಿ ಸಹೋದರರ ಎರಡನೇ ಚಿತ್ರದ ಟೈಟಲ್ ಅನೌನ್ಸ್ ಆಗುತ್ತಿದೆ.
ಅನುಪ್ ಭಂಡಾರಿ ನಿರ್ದೇಶನದಲ್ಲಿ ಜುಲೈ 3 ರಂದು ತೆರೆಕಂಡಿದ್ದ 'ರಂಗಿತರಂಗ' ಚಿತ್ರದಲ್ಲಿ ನಿರುಪ್ ಭಂಡಾರಿ ನಾಯಕ ನಟನಾಗಿ ಮಿಂಚಿದ್ದು, ನಟಿಯರಾದ ಆವಂತಿಕಾ ಶೆಟ್ಟಿ, ಮತ್ತು ರಾಧಿಕಾ ಚೇತನ್ ಕಾಣಿಸಿಕೊಂಡಿದ್ದರು. ನಟ ಸಾಯಿ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದರು.