Don't Miss!
- News Karnataka Rain: ರಾಜ್ಯಕ್ಕೆ ಶೇ.20ರಷ್ಟು ಮಳೆ ಕೊರತೆ: ಏಪ್ರಿಲ್ 25 ದಿನದಲ್ಲಿ ಸುರಿದ ಮಳೆ ವರದಿ ಇಲ್ಲಿದೆ
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನೂಪ್ ಗೆ ಪುರುಸೊತ್ತು ಇಲ್ಲ.! ಆರ್.ಚಂದ್ರುಗೆ ಟೈಮ್ ಸಿಗುತ್ತಿಲ್ಲ.!
'ಲಕ್ಷ್ಮಣ' ಸಿನಿಮಾ ಬಿಡುಗಡೆಗೆ ಇನ್ನೊಂದು ವಾರ ಟೈಮ್ ಇದೆ. ಚಿತ್ರಕ್ಕೆ ಉತ್ತಮ ಪ್ರಚಾರ ಕೊಟ್ಟು, ಕರ್ನಾಟಕದ ಮೂಲೆ ಮೂಲೆಯಲ್ಲೂ ರೀಚ್ ಆಗುವಂತೆ ಆರ್.ಚಂದ್ರು ಹಲವಾರು ಪ್ಲಾನ್ ಗಳನ್ನ ಮಾಡಿಕೊಂಡಿದ್ದಾರೆ. ಆದ್ರೆ, ಅವರಿಗೆ ಸದ್ಯ ಒಂದು ಸಮಸ್ಯೆ ಕಾಡುತ್ತಿದೆ. ಅದು ನಾಯಕ ಅನೂಪ್ ರೇವಣ್ಣ ಅವರ ಸಮಯ.!
'ಲಕ್ಷ್ಮಣ'...ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಸಿನಿಮಾ. 'ಲಕ್ಷ್ಮಣ' ತೆರೆಗೆ ಅಪ್ಪಳಿಸುವ ಮುನ್ನವೇ ಅನೂಪ್ ರೇವಣ್ಣ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಬಿಜಿ ಆಗ್ಬಿಟ್ಟಿದ್ದಾರೆ. [ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!]
ಈಗಾಗಲೇ, ಎಸ್.ನಾರಾಯಣ್ ನಿರ್ದೇಶನದ 'ಪಂಟ' ಚಿತ್ರದ ಚಿತ್ರೀಕರಣದಲ್ಲಿ ಅನೂಪ್ ರೇವಣ್ಣ ಭಾಗಿಯಾಗಿದ್ದಾರೆ. ಅಲ್ಲದೇ, ಮೂರ್ನಾಲ್ಕು ಚಿತ್ರಗಳಿಗೆ ಅನೂಪ್ ಬುಕ್ ಆಗಿದ್ದಾರೆ. ಅವರ ಕಾಲ್ ಶೀಟ್ ಪಡೆಯಲು ಕೆಲ ನಿರ್ಮಾಪಕರೂ ಕಾದು ಕುಳಿತಿದ್ದರೆ, ಕಥೆ ಹೇಳಲು ಹಲವಾರು ನಿರ್ದೇಶಕರು ಕೂಡ ಸರದಿಯಲ್ಲಿದ್ದಾರೆ. [ಹೊಸ ದಾಖಲೆ ಬರೆದ ಹೊಸ ಹುಡುಗ ಅನೂಪ್ 'ಲಕ್ಷ್ಮಣ']
ಇವರೆಲ್ಲರ ಮಧ್ಯೆ ಆರ್.ಚಂದ್ರು ರವರಿಗೆ 'ಲಕ್ಷ್ಮಣ' ಪ್ರಮೋಷನ್ ಸಲುವಾಗಿ ಅನೂಪ್ ರೇವಣ್ಣ ಸಮಯ ಬೇಕಾಗಿದೆ. ಯಾರಿಗೂ 'ನೋ' ಎನ್ನದ ಅನೂಪ್, ಹಗಲು ರಾತ್ರಿ 'ಸಿನಿಮಾ, ಸಿನಿಮಾ' ಎನ್ನುವಂತಾಗಿದೆ. [ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!]
ಮೊದಲನೇ ಸಿನಿಮಾ ಬಿಡುಗಡೆಗೂ ಮುನ್ನವೇ ಅನೂಪ್ ಗೆ ಗಾಂಧಿನಗರದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿರುವ ಬಗ್ಗೆ 'ಲಕ್ಷ್ಮಣ' ಸಾರಥಿ ಆರ್.ಚಂದ್ರು ಹೆಮ್ಮೆ ಪಡುತ್ತಾರೆ.