ಮಣಿರತ್ನಂ ನಿರ್ದೇಶನದ ಈ ಚಿತ್ರ ಎಪಿ ಅರ್ಜುನ್‌ಗೆ ಇಷ್ಟ ಆಗ್ಲಿಲ್ಲ

ಅಂಬಾರಿ, ಅದ್ಧೂರಿ, ಐರಾವತ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಎಪಿ ಅರ್ಜುನ್‌ಗೆ ಮಣಿರತ್ನಂ ಅವರ ಚಿತ್ರವೊಂದು ಬಹಳ ನಿರಾಸೆ ಮಾಡಿತ್ತಂತೆ. ಮಣಿರತ್ನಂ ಅವರ ಎಲ್ಲಾ ಚಿತ್ರಗಳನ್ನು ನೋಡುತ್ತಿದ್ದ ಅರ್ಜುನ್‌ಗೆ 'ಕಡಲ್' ಎಂಬ ಸಿನಿಮಾ ಇಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೆಆರ್‌ಜಿ ಕನೆಕ್ಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಸಿಂಪಲ್ ಸುನಿ ಮತ್ತು ಎಪಿ ಅರ್ಜುನ್ ಅವರ ಜಂಟಿ ಸಂದರ್ಶನ ಮಾಡಲಾಗಿದೆ. ಈ ವೇಳೆ ಅರ್ಜುನ್‌ಗೆ ''ಚಿತ್ರಮಂದಿರದಲ್ಲಿ ನಿಮಗೆ ಬೋರ್ ಹೊಡೆಸಿದ ಸಿನಿಮಾ ಯಾವುದು?'' ಎಂಬ ಪ್ರಶ್ನೆ ಕೇಳಲಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ಎಪಿ ಅರ್ಜುನ್ ''ಮಣಿರತ್ನಂ ಅವರ ಕಡಲ್ ಸಿನಿಮಾ ತುಂಬಾ ಬೋರ್ ಆಗಿತ್ತು, ಅವರ ದೊಡ್ಡ ಅಭಿಮಾನಿ ನಾನು, ಅವರು ನಿರ್ದೇಶನ ಮಾಡಿರುವ ಎಲ್ಲಾ ಚಿತ್ರ ನೋಡಿದ್ದೇನೆ. ಆದರೆ, ಕಡಲ್ ಸಿನಿಮಾ ಬಹಳ ನಿರಾಸೆ ಉಂಟು ಮಾಡಿತು'' ಎಂದಿದ್ದಾರೆ.

AP Arjun Did not Like Kadal Movie Directed By Maniratnam

ಕಡಲ್ ಸಿನಿಮಾ ಬಗ್ಗೆ

ಮಣಿರತ್ನಂ ನಿರ್ದೇಶನ ಕಡಲ್ ಚಿತ್ರದಲ್ಲಿ ಗೌತಮ್ ಕಾರ್ತಿಕ್, ಅರ್ಜುನ್ ಸರ್ಜಾ, ಅರವಿಂದ್ ಸ್ವಾಮಿ, ತುಳಸಿ ನಾಯರ್, ಲಕ್ಷ್ಮಿ ಮಂಚು ಸೇರಿದಂತೆ ಹಲವರು ನಟಿಸಿದ್ದರು.

'ಕಿಸ್' ಚಿತ್ರದ ನಾಯಕ ವಿರಾಟ್ ಜೊತೆ ಎಪಿ ಅರ್ಜುನ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. 2019ರಲ್ಲಿ ತೆರೆಕಂಡಿದ್ದ 'ಕಿಸ್' ಅರ್ಜುನ್ ಅವರು ಕೊನೆಯದಾಗಿ ನಿರ್ದೇಶಿಸಿದ್ದ ಚಿತ್ರ. ಅದಾದ ಬಳಿಕ ಅನ್ನಪೂರ್ಣ ಅವರೊಂದಿಗೆ 2020ರ ಮೇ ತಿಂಗಳಲ್ಲಿ ವಿವಾಹವಾದರು.

Recommended Video

Yash ಗೆ ತುಂಬಾ Attitude‌ ಸಿನಿಮಾದಲ್ಲಿ ಯಶಸ್ಸು ಸಿಗಲ್ಲ ಅಂದಿದ್ರು Ramya | Fillmibeat Kannada

More from Filmibeat

English summary
Sandalwood Director AP Arjun did not Like Kadal Movie Directed By Maniratnam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X