Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಣಿರತ್ನಂ ನಿರ್ದೇಶನದ ಈ ಚಿತ್ರ ಎಪಿ ಅರ್ಜುನ್ಗೆ ಇಷ್ಟ ಆಗ್ಲಿಲ್ಲ
ಅಂಬಾರಿ, ಅದ್ಧೂರಿ, ಐರಾವತ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಎಪಿ ಅರ್ಜುನ್ಗೆ ಮಣಿರತ್ನಂ ಅವರ ಚಿತ್ರವೊಂದು ಬಹಳ ನಿರಾಸೆ ಮಾಡಿತ್ತಂತೆ. ಮಣಿರತ್ನಂ ಅವರ ಎಲ್ಲಾ ಚಿತ್ರಗಳನ್ನು ನೋಡುತ್ತಿದ್ದ ಅರ್ಜುನ್ಗೆ 'ಕಡಲ್' ಎಂಬ ಸಿನಿಮಾ ಇಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕೆಆರ್ಜಿ ಕನೆಕ್ಟ್ಸ್ ಯೂಟ್ಯೂಬ್ ಚಾನಲ್ನಲ್ಲಿ ಸಿಂಪಲ್ ಸುನಿ ಮತ್ತು ಎಪಿ ಅರ್ಜುನ್ ಅವರ ಜಂಟಿ ಸಂದರ್ಶನ ಮಾಡಲಾಗಿದೆ. ಈ ವೇಳೆ ಅರ್ಜುನ್ಗೆ ''ಚಿತ್ರಮಂದಿರದಲ್ಲಿ ನಿಮಗೆ ಬೋರ್ ಹೊಡೆಸಿದ ಸಿನಿಮಾ ಯಾವುದು?'' ಎಂಬ ಪ್ರಶ್ನೆ ಕೇಳಲಾಯಿತು.
'ಕಿಸ್' ನಾಯಕನ ಜೊತೆ ಮತ್ತೊಮ್ಮೆ ಲವ್ ಸ್ಟೋರಿ ಹೇಳಲು ಸಜ್ಜಾದ ಎಪಿ ಅರ್ಜುನ್
ಈ ಪ್ರಶ್ನೆಗೆ ಉತ್ತರಿಸಿದ ಎಪಿ ಅರ್ಜುನ್ ''ಮಣಿರತ್ನಂ ಅವರ ಕಡಲ್ ಸಿನಿಮಾ ತುಂಬಾ ಬೋರ್ ಆಗಿತ್ತು, ಅವರ ದೊಡ್ಡ ಅಭಿಮಾನಿ ನಾನು, ಅವರು ನಿರ್ದೇಶನ ಮಾಡಿರುವ ಎಲ್ಲಾ ಚಿತ್ರ ನೋಡಿದ್ದೇನೆ. ಆದರೆ, ಕಡಲ್ ಸಿನಿಮಾ ಬಹಳ ನಿರಾಸೆ ಉಂಟು ಮಾಡಿತು'' ಎಂದಿದ್ದಾರೆ.
ಕಡಲ್ ಸಿನಿಮಾ ಬಗ್ಗೆ
ಮಣಿರತ್ನಂ ನಿರ್ದೇಶನ ಕಡಲ್ ಚಿತ್ರದಲ್ಲಿ ಗೌತಮ್ ಕಾರ್ತಿಕ್, ಅರ್ಜುನ್ ಸರ್ಜಾ, ಅರವಿಂದ್ ಸ್ವಾಮಿ, ತುಳಸಿ ನಾಯರ್, ಲಕ್ಷ್ಮಿ ಮಂಚು ಸೇರಿದಂತೆ ಹಲವರು ನಟಿಸಿದ್ದರು.
Recommended Video
'ಕಿಸ್' ಚಿತ್ರದ ನಾಯಕ ವಿರಾಟ್ ಜೊತೆ ಎಪಿ ಅರ್ಜುನ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. 2019ರಲ್ಲಿ ತೆರೆಕಂಡಿದ್ದ 'ಕಿಸ್' ಅರ್ಜುನ್ ಅವರು ಕೊನೆಯದಾಗಿ ನಿರ್ದೇಶಿಸಿದ್ದ ಚಿತ್ರ. ಅದಾದ ಬಳಿಕ ಅನ್ನಪೂರ್ಣ ಅವರೊಂದಿಗೆ 2020ರ ಮೇ ತಿಂಗಳಲ್ಲಿ ವಿವಾಹವಾದರು.