twitter
    For Quick Alerts
    ALLOW NOTIFICATIONS  
    For Daily Alerts

    ಮಣಿರತ್ನಂ ನಿರ್ದೇಶನದ ಈ ಚಿತ್ರ ಎಪಿ ಅರ್ಜುನ್‌ಗೆ ಇಷ್ಟ ಆಗ್ಲಿಲ್ಲ

    |

    ಅಂಬಾರಿ, ಅದ್ಧೂರಿ, ಐರಾವತ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಎಪಿ ಅರ್ಜುನ್‌ಗೆ ಮಣಿರತ್ನಂ ಅವರ ಚಿತ್ರವೊಂದು ಬಹಳ ನಿರಾಸೆ ಮಾಡಿತ್ತಂತೆ. ಮಣಿರತ್ನಂ ಅವರ ಎಲ್ಲಾ ಚಿತ್ರಗಳನ್ನು ನೋಡುತ್ತಿದ್ದ ಅರ್ಜುನ್‌ಗೆ 'ಕಡಲ್' ಎಂಬ ಸಿನಿಮಾ ಇಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಕೆಆರ್‌ಜಿ ಕನೆಕ್ಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಸಿಂಪಲ್ ಸುನಿ ಮತ್ತು ಎಪಿ ಅರ್ಜುನ್ ಅವರ ಜಂಟಿ ಸಂದರ್ಶನ ಮಾಡಲಾಗಿದೆ. ಈ ವೇಳೆ ಅರ್ಜುನ್‌ಗೆ ''ಚಿತ್ರಮಂದಿರದಲ್ಲಿ ನಿಮಗೆ ಬೋರ್ ಹೊಡೆಸಿದ ಸಿನಿಮಾ ಯಾವುದು?'' ಎಂಬ ಪ್ರಶ್ನೆ ಕೇಳಲಾಯಿತು.

    'ಕಿಸ್' ನಾಯಕನ ಜೊತೆ ಮತ್ತೊಮ್ಮೆ ಲವ್ ಸ್ಟೋರಿ ಹೇಳಲು ಸಜ್ಜಾದ ಎಪಿ ಅರ್ಜುನ್ 'ಕಿಸ್' ನಾಯಕನ ಜೊತೆ ಮತ್ತೊಮ್ಮೆ ಲವ್ ಸ್ಟೋರಿ ಹೇಳಲು ಸಜ್ಜಾದ ಎಪಿ ಅರ್ಜುನ್

    ಈ ಪ್ರಶ್ನೆಗೆ ಉತ್ತರಿಸಿದ ಎಪಿ ಅರ್ಜುನ್ ''ಮಣಿರತ್ನಂ ಅವರ ಕಡಲ್ ಸಿನಿಮಾ ತುಂಬಾ ಬೋರ್ ಆಗಿತ್ತು, ಅವರ ದೊಡ್ಡ ಅಭಿಮಾನಿ ನಾನು, ಅವರು ನಿರ್ದೇಶನ ಮಾಡಿರುವ ಎಲ್ಲಾ ಚಿತ್ರ ನೋಡಿದ್ದೇನೆ. ಆದರೆ, ಕಡಲ್ ಸಿನಿಮಾ ಬಹಳ ನಿರಾಸೆ ಉಂಟು ಮಾಡಿತು'' ಎಂದಿದ್ದಾರೆ.

    AP Arjun Did not Like Kadal Movie Directed By Maniratnam

    ಕಡಲ್ ಸಿನಿಮಾ ಬಗ್ಗೆ

    ಮಣಿರತ್ನಂ ನಿರ್ದೇಶನ ಕಡಲ್ ಚಿತ್ರದಲ್ಲಿ ಗೌತಮ್ ಕಾರ್ತಿಕ್, ಅರ್ಜುನ್ ಸರ್ಜಾ, ಅರವಿಂದ್ ಸ್ವಾಮಿ, ತುಳಸಿ ನಾಯರ್, ಲಕ್ಷ್ಮಿ ಮಂಚು ಸೇರಿದಂತೆ ಹಲವರು ನಟಿಸಿದ್ದರು.

    Recommended Video

    Yash ಗೆ ತುಂಬಾ Attitude‌ ಸಿನಿಮಾದಲ್ಲಿ ಯಶಸ್ಸು ಸಿಗಲ್ಲ ಅಂದಿದ್ರು Ramya | Fillmibeat Kannada

    'ಕಿಸ್' ಚಿತ್ರದ ನಾಯಕ ವಿರಾಟ್ ಜೊತೆ ಎಪಿ ಅರ್ಜುನ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. 2019ರಲ್ಲಿ ತೆರೆಕಂಡಿದ್ದ 'ಕಿಸ್' ಅರ್ಜುನ್ ಅವರು ಕೊನೆಯದಾಗಿ ನಿರ್ದೇಶಿಸಿದ್ದ ಚಿತ್ರ. ಅದಾದ ಬಳಿಕ ಅನ್ನಪೂರ್ಣ ಅವರೊಂದಿಗೆ 2020ರ ಮೇ ತಿಂಗಳಲ್ಲಿ ವಿವಾಹವಾದರು.

    English summary
    Sandalwood Director AP Arjun did not Like Kadal Movie Directed By Maniratnam.
    Wednesday, May 19, 2021, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X