Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್-ರಾಧಿಕಾ 'ಲಗ್ನ ಪತ್ರಿಕೆ'ಗೆ ಕವನ ಬರೆದ್ದಿದ್ದು ಇವರೇ!
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆಗೆ ನಟ ಯಶ್, 'ಲಗ್ನಪತ್ರಿಕೆ' ಹಂಚುತ್ತಿದ್ದಾರೆ. ಈ 'ಲಗ್ನಪತ್ರಿಕೆ' ತುಂಬಾ ಸರಳವಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಯಾವುದೇ ಆಡಂಬರ, ವೈಭವ, ಅದ್ದೂರಿತನವಿಲ್ಲದ 'ಆಮಂತ್ರಣ ಪತ್ರಿಕೆ'ಯಿಂದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಗಮನ ಸೆಳೆಯುತ್ತಿದ್ದಾರೆ.
ಈ 'ಲಗ್ನಪತ್ರಿಕೆ'ಯ ಮತ್ತೊಂದು ವಿಶೇಷ ಅಂದ್ರೆ ಅದರಲ್ಲಿರುವ 'ನುಡಿಮುತ್ತು'ಗಳು. ಈ ಕವನ ಭಾವನಾತ್ಮಕವಾಗಿದ್ದು, ಬಹುಶಃ ಯಶ್ ಹಾಗೂ ರಾಧಿಕಾ ಪಂಡಿತ್ ಅವರೇ ಬರೆದಿರಬಹುದು ಎಂಬ ಅನುಮಾನ ಅನೇಕರಿಗೆ ಕಾಡಿತ್ತು. ಆದ್ರೆ, ಅದನ್ನ ಬರೆದವರೇ ಬೇರೆ.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ? ]
ಎಪಿ ಅರ್ಜುನ್ ಬರೆದ ಪ್ರೀತಿಯ ಕವನ
ಗಣ್ಯರಿಗೆ ನೀಡಲಾಗುತ್ತಿರುವ ಇನ್ವಿಟೇಷನ್ ನಲ್ಲಿರುವ ಸೊಗಸಾದ ಕವನ ಎಲ್ಲರ ಕೇಂದ್ರಬಿಂದುವಾಗಿದೆ. ಈ ಕವನವನ್ನ ರಚಿಸಿದ್ದು ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಎನ್ನುವುದು ವಿಶೇಷ.['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್]
ಆಸೆಯಿಂದ ಬರೆಸಿದರು
ಯಶ್-ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯನ್ನ ಮಾಡಿಸಿದ್ದು, ಕುಟುಂಬಸ್ಥರೇ. ಆದರೆ, ಅದರಲ್ಲಿರುವ ಕವನವನ್ನ ಬರೆಸಿದ್ದು, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಎಪಿ ಅರ್ಜುನ್ ಕೈಬರಹದಲ್ಲಿ ಮೂಡಿರುವ ಈ ಸಾಲುಗಳು ಇಬ್ಬರಿಗೂ ತುಂಬಾ ಮೆಚ್ಚುಗೆಯಾಗಿದೆ.[ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]
ಯಶ್-ರಾಧಿಕಾ ಮದುವೆಗಾಗಿ ಬರೆದ ಸಾಲು
ನಮಸ್ತೆ, ''ಇಲ್ಲಿ ಎಲ್ಲರೂ ಸಂಬಂಧಿಕರೇ...ಇಲ್ಲಿ ಎಲ್ಲವೂ ಅನುಬಂಧವೇ....ಸಹನೆ ಮರವನು ತಬ್ಬಿದ ಜೀವಲತೆಯಲಿ. ನಲುಮೆ ಹೂ ಅರಳಿದೆ....! ಹಸನ ಬಾಳ ನಂದನವನಕಿಂದು ನಿತ್ಯನೂತನ ಚಿರವಸಂತ ಬಂದಿದೆ...! ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತಾ ನಿಮ್ಮದೇ....ತಾಳಿ ಬಿಗಿಯುವುದಾದರೂ ಹೇಗೆ ಹೇಳಿ ನೀವೆಲ್ಲ ಬಾರದೇ?!!.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ' ]
ಸರ್ವರಿಗೂ ಪ್ರೀತಿಯ ಸ್ವಾಗತ
''ಸಂಬಂಧಕ್ಕಿಂತ ಕುಟುಂಬಕ್ಕಿಂತ ದೊಡ್ಡದು ಯಾವುದೂ ಇಲ್ಲ. ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರಾವ ಹೆಮ್ಮೆ ಬೇಕಿಲ್ಲ. ನಿಮ್ಮ ಪ್ರೀತ್ಯಾದರಗಳಿಗಿಂತ ಮಿಗಿಲಾದದ್ದು ಬೇರಾವುದು ಇಲ್ಲ. ಇಲ್ಲಿ ಬರೆದುದಕ್ಕಿಂತ ಬರೆಯದ ಪದಗಳೇ ಜಾಸ್ತಿ..! ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಪೂರ್ತಿ....! ದಯಮಾಡಿ ಸಕಲರೂ ನಮ್ಮ ಮದುವೆಗೆ ತಪ್ಪದೇ ಬನ್ನಿ ನಮ್ಮನ್ನ ಹರಿಸಿ ಅಷ್ಟೇ'' -ಯಶ್, ರಾಧಿಕಾ ಪಂಡಿತ್
ಹೃದಯಾಕಾರದ ಬೆರೆಳಚ್ಚು
'ಆಹ್ವಾನ ಪತ್ರಿಕೆ' ಕೊನೆಯಲ್ಲಿ, ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು, ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರವಾಗಿ ಮುದ್ರಿಸಿದ್ದಾರೆ. ಇದು ಲಗ್ನಪತ್ರಿಕೆಗೆ ಹೊಸ ಮೆರುಗು ನೀಡಿದೆ.