twitter
    For Quick Alerts
    ALLOW NOTIFICATIONS  
    For Daily Alerts

    ಬೆಂಕಿ ಅವಘಡ : ಮಂಗಳೂರು ಆಸ್ಪತ್ರೆಯಲ್ಲಿ ಅರ್ಜುನ್ ಜನ್ಯಗೆ ಚಿಕಿತ್ಸೆ

    By Naveen
    |

    ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಆದ ಬೆಂಕಿ ಅವಘಡದಿಂದ ಪಾರಾಗಿದ್ದಾರೆ. ಮಂಗಳೂರಿನ ಮಾಲ್ ಒಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಘಟನೆ ಸಂಭವಿಸಿದೆ.

     ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಈ ಒಂದು ಆಸೆ ಈಡೇರಿಲ್ಲ.! ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಈ ಒಂದು ಆಸೆ ಈಡೇರಿಲ್ಲ.!

    ಕಾರ್ಯಕ್ರಮದಲ್ಲಿ ವೇದಿಕೆಗೆ ಅರ್ಜುನ್ ಜನ್ಯಾ ಬೈಕ್ ಮೇಲೆ ಬರುವ ಪ್ಲಾನ್ ಇತ್ತು. ಅದೇ ರೀತಿ ಬೈಕ್ ಗೆ ಕ್ರೆಕರ್ಸ್ ಅಳವಡಿಸಲಾಗಿತ್ತು. ಆದರೆ ಆಕಸ್ಮಿಕವಾಗಿ ಅದರ ಬೆಂಕಿ ಅರ್ಜುನ್ ಜನ್ಯ ಅವರಿಗೆ ತಾಕಿದೆ. ಈ ಬೆಂಕಿ ಅವಘಡದಿಂದ ಅವರಿಗೆ ಸಣ್ಣ ಪುಟ್ಟ ಗಾಯಗಳಿದ್ದು ಸ್ವಲ್ಪದರಲ್ಲಿ ಅರ್ಜುನ್ ಜನ್ಯ ಪಾರಾಗಿದ್ದಾರೆ. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರೆಕರ್ಸ್ ಬೆಂಕಿ ಭುಜಕ್ಕೆ ಮತ್ತು ಕೈಗೆ ತಾಗುಲಿದ ಪರಿಣಾಮ ಸುಟ್ಟ ಗಾಯಗಳಾಗಿವೆ.

    Arjun Janya escaped from fire accident

    ಮಂಗಳೂರಿನ ಹೃದಯ ಭಾಗದಲ್ಲಿರುವ ಫೊರಂ ಫಿಜಾ ಮಾಲ್ ನಲ್ಲಿ ನಿನ್ನೆ ಸಂಜೆ ಮೆಕ್ ಡಾವಲ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆಯುವ ವೇಳೆ ಈ ಅವಗಡ ಸಂಭವಿಸಿದೆ.

    ಇನ್ನು ಇಷ್ಟಾದರೂ ಬೈಕ್ ನಿಂದ ಇಳಿದ ಅರ್ಜುನ್ ಜನ್ಯ ನೇರವಾಗಿ ವೇದಿಕೆಗೆ ಹತ್ತಿ ಹಾಡು ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದರು. ಜೊತೆಗೆ ತಮ್ಮ ವೃತ್ತಿಪರತೆಯನ್ನು ಮೆರೆದರು. ಕಾರ್ಯಕ್ರಮದ ‌ಬಳಿಕ ಸುಟ್ಟಗಾಯಗಳಿಗೆ ಅರ್ಜುನ್ ಜನ್ಯಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    English summary
    Kannada music director Arjun Janya escaped from fire accident. The incident happened in a music programme organised Forum Fiza mall Mangaluru.
    Saturday, December 23, 2017, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X