ಅರ್ಜುನ್ ಜನ್ಯ ಪಾಲಿಗೆ ಇಂದು ಅದೃಷ್ಟದ ದಿನ, ಯಾಕೆ?
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಇಂದು ಅದೃಷ್ಟದ ದಿನ ಅಂತೆ. ಈ ವಿಷಯವನ್ನು ಸ್ವತಃ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಂದು ಅರ್ಜುನ್ ಜನ್ಯ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಅವರ ಖುಷಿಗೆ ಕಾರಣ ಆಗಿರುವುದು ಎರಡು ಸಿನಿಮಾಗಳು. ಕನ್ನಡದಲ್ಲಿ ಇಂದು ಎರಡು ಹೊಸ ಸಿನಿಮಾಗಳು ಸೆಟ್ಟೇರಿದೆ. ಒಂದು ಕಡೆ ಶಿವಣ್ಣನ 'ಕವಚ' ಸಿನಿಮಾ ಮತ್ತು ಅಂಬರೀಶ್ ನಟನೆಯ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮುಹೂರ್ತ ನೆರವೇರಿದೆ.

ಅಂದಹಾಗೆ, ಈ ಎರಡು ಸಿನಿಮಾಗಳಿಗೆ ಅರ್ಜುನ್ ಜನ್ಯ ಅವರೇ ಸಂಗೀತ ನಿರ್ದೇಶಕರಾಗಿದ್ದಾರೆ. ಈ ಹಿಂದೆ 'ಭಜರಂಗಿ', 'ವಜ್ರಕಾಯ' ಚಿತ್ರಗಳಲ್ಲಿ ಶಿವಣ್ಣ ಜೊತೆ ಅರ್ಜುನ್ ಕೆಲಸ ಮಾಡಿದ್ದಾರೆ. ಆದರೆ ಅಂಬರೀಶ್ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಜನ್ಯ ಮ್ಯೂಸಿಕ್ ನೀಡುತ್ತಿದ್ದಾರೆ.
More from Filmibeat
English summary
Arjun Janya is composing music to 'Kavacha' and 'Ambi Ninge Vayassaytho' movie. 'ಕವಚ' ಮತ್ತು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ನೀಡಲಿದ್ದಾರೆ.


Click it and Unblock the Notifications











