Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ
ಮೇಘನಾ ರಾಜ್-ಚಿರಂಜೀವಿ ಸರ್ಜಾ ದಂಪತಿಯ ಮಗು ನೋಡಲು ಚೆನ್ನೈನಿಂದ ನಟ ಅರ್ಜುನ್ ಸರ್ಜಾ ಇಂದು ಬೆಂಗಳೂರಿಗೆ ಬಂದಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಮಗು ನೋಡಿದ ಬಳಿಕ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡರು.
Recommended Video
''20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಹರ್ಷಗೊಂಡರು.
ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದ ನಟ ಅರ್ಜುನ್ ಸರ್ಜಾ
''ನಾಲ್ಕೈದು ತಿಂಗಳ ಹಿಂದೆ ನಮ್ಮ ಕುಟುಂಬದಲ್ಲಿ ದೊಡ್ಡ ಅನಾಹುತ ಆಗಿತ್ತು. ಆ ನೋವಿನಲ್ಲಿದ್ದ ನಮ್ಮ ಮನೆಯಲ್ಲಿ ಈಗ ಸಂಭ್ರಮ ಹುಟ್ಟಿದೆ. ಮಗು ಹುಟ್ಟಿದೆ ಎನ್ನುವುದಕ್ಕಿಂತ ಪ್ರತಿಯೊಬ್ಬರಲ್ಲೂ ಸಂತೋಷ ಹುಟ್ಟಿದೆ ಎಂದು ಹೇಳಬಹುದು, ಈ ಸಂತಸ ನೋಡಲು ಚಿರು ಇಲ್ಲ ಎಂಬ ದುಃಖ ಇದೆ'' ಎಂದರು.
''ದೇವರೇ ಇಲ್ಲ ಎಂದು ಪೂಜೆ ಮಾಡಬಾರದು ಎನ್ನುವ ಪರಿಸ್ಥಿತಿಗೆ ನಾವು ಹೋಗಿದ್ವಿ. ಆದರೆ, ದೇವರು ಇದ್ದಾನೆ ಎನ್ನುವುದದು ಸಾಬೀತಾಗಿದೆ. ಮಗುವಿನ ಜಾತಕ ಬಹಳ ವಿಶೇಷವಾಗಿದೆ. ನಮಗೆ ಜೂನಿಯರ್ ಚಿರು ಬರ್ತಾನೆ ಅಂತ ಅನಿಸುತ್ತಿತ್ತು. ತುಂಬಾ ಸಂತೋಷ. ಚಿರುನೇ ಬಂದು ಬಿಟ್ಟ'' ಎಂದು ಖುಷಿಯಾದರು.
''ಮೂವತ್ತಾರು ವರ್ಷದ ಹಿಂದೆ ಚಿರು ಹುಟ್ಟಿದಾಗಲೂ ನಾನು ಚೆನ್ನೈನಲ್ಲಿದೆ. ಈಗ ಅವನ ಮಗು ಹುಟ್ಟಿದೆ. ಬಹುಶಃ 20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಅರ್ಜುನ್ ಸರ್ಜಾ ಹೇಳಿದರು.
ಅಕ್ಟೋಬರ್ 22 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರು.