Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
20 ವರ್ಷದ ನಂತರ ಚಿರು ಮಗನನ್ನು ಹೀರೋ ಆಗಿ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ
ಮೇಘನಾ ರಾಜ್-ಚಿರಂಜೀವಿ ಸರ್ಜಾ ದಂಪತಿಯ ಮಗು ನೋಡಲು ಚೆನ್ನೈನಿಂದ ನಟ ಅರ್ಜುನ್ ಸರ್ಜಾ ಇಂದು ಬೆಂಗಳೂರಿಗೆ ಬಂದಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಮಗು ನೋಡಿದ ಬಳಿಕ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡರು.
Recommended Video
''20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಹರ್ಷಗೊಂಡರು.
ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದ ನಟ ಅರ್ಜುನ್ ಸರ್ಜಾ
''ನಾಲ್ಕೈದು ತಿಂಗಳ ಹಿಂದೆ ನಮ್ಮ ಕುಟುಂಬದಲ್ಲಿ ದೊಡ್ಡ ಅನಾಹುತ ಆಗಿತ್ತು. ಆ ನೋವಿನಲ್ಲಿದ್ದ ನಮ್ಮ ಮನೆಯಲ್ಲಿ ಈಗ ಸಂಭ್ರಮ ಹುಟ್ಟಿದೆ. ಮಗು ಹುಟ್ಟಿದೆ ಎನ್ನುವುದಕ್ಕಿಂತ ಪ್ರತಿಯೊಬ್ಬರಲ್ಲೂ ಸಂತೋಷ ಹುಟ್ಟಿದೆ ಎಂದು ಹೇಳಬಹುದು, ಈ ಸಂತಸ ನೋಡಲು ಚಿರು ಇಲ್ಲ ಎಂಬ ದುಃಖ ಇದೆ'' ಎಂದರು.
''ದೇವರೇ ಇಲ್ಲ ಎಂದು ಪೂಜೆ ಮಾಡಬಾರದು ಎನ್ನುವ ಪರಿಸ್ಥಿತಿಗೆ ನಾವು ಹೋಗಿದ್ವಿ. ಆದರೆ, ದೇವರು ಇದ್ದಾನೆ ಎನ್ನುವುದದು ಸಾಬೀತಾಗಿದೆ. ಮಗುವಿನ ಜಾತಕ ಬಹಳ ವಿಶೇಷವಾಗಿದೆ. ನಮಗೆ ಜೂನಿಯರ್ ಚಿರು ಬರ್ತಾನೆ ಅಂತ ಅನಿಸುತ್ತಿತ್ತು. ತುಂಬಾ ಸಂತೋಷ. ಚಿರುನೇ ಬಂದು ಬಿಟ್ಟ'' ಎಂದು ಖುಷಿಯಾದರು.
''ಮೂವತ್ತಾರು ವರ್ಷದ ಹಿಂದೆ ಚಿರು ಹುಟ್ಟಿದಾಗಲೂ ನಾನು ಚೆನ್ನೈನಲ್ಲಿದೆ. ಈಗ ಅವನ ಮಗು ಹುಟ್ಟಿದೆ. ಬಹುಶಃ 20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಅರ್ಜುನ್ ಸರ್ಜಾ ಹೇಳಿದರು.
ಅಕ್ಟೋಬರ್ 22 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರು.