twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಸರ್ಜಾ ಹೊಸ ಚಿತ್ರ ಸಂಗೊಳ್ಳಿ ರಾಯಣ್ಣ

    By Staff
    |

    Arjun sarja marks re entry into Kannada
    ದಕ್ಷಿಣ ಭಾರತದಲ್ಲಿ ಆಕ್ಷನ್ ಕಿಂಗ್ ಎಂದೇ ಜನಪ್ರಿಯರಾಗಿರುವ ಅರ್ಜುನ್ ಸರ್ಜಾ ಸುದೀರ್ಘ ಸಮಯದ ನಂತರ ಮತ್ತೊಂದು ಕನ್ನಡ ಚಿತ್ರವೊಂದನ್ನುಕೈಗೆತ್ತಿಕೊಂಡಿದ್ದಾರೆ. ಬೆಂಗಳೂರು ಮೂಲದ ಅರ್ಜುನ್ ಸರ್ಜಾ ಬಾಲ ಕಲಾವಿದನಾಗಿ 'ಸಿಂಹದ ಮರಿ ಸೈನ್ಯ' ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ನಂತರ ಅವರು ತಮಿಳು, ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾದರು. ಈಗಲೂ ಬೇಡಿಕೆಯುಳ್ಳ ಬೆರಳೆಣಿಕೆಯ ನಟರಲ್ಲಿ ಅರ್ಜುನ್ ಸರ್ಜಾ ಸಹ ಒಬ್ಬರು.

    ಕನ್ನಡದಲ್ಲಿ ಅವರು ನಟಿಸಲಿರುವ ಚಿತ್ರಕ್ಕೆ 'ಸಂಗೊಳ್ಳಿ ರಾಯಣ್ಣ' ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಜಯಪ್ರದ ನಟಿಸಲಿದ್ದಾರಂತೆ. ಸಂಗೊಳ್ಳಿ ರಾಯಣ್ಣ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ಪ್ರಸ್ತುತ ಅರ್ಜುನ್ ಸರ್ಜಾ ಕನ್ನಡದಲ್ಲಿ 'ವಾಯುಪುತ್ರ'ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಅಂದ್ರಿತಾ ರೇ, ಅರ್ಜುನ್ ಸರ್ಜಾ ಸೋದರಳಿಯ ಚಿರಂಜೀವಿ ಮತ್ತು ಅಂಬರೀಶ್ ಕಾಣಿಸಲಿದ್ದಾರೆ.

    1984ರಲ್ಲಿ ತೆರೆಕಂಡ 'ಮಳೆ ಬಂತು ಮಳೆ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅರ್ಜುನ್ ಬದಲಾಗಿದ್ದರು. ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬುನಿರ್ದೇಶಿಸಿದ್ದರು. ಅರ್ಜುನ್ ಹೆಂಡತಿ ಆಶಾ ರಾಣಿ ಅವರು ಶಿವರಾಜ್ ಕುಮಾರ್ ಜತೆಯಲ್ಲಿ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದರು. ಸಾಲು ಸಾಲು ರೀಮೇಕ್ ಚಿತ್ರಗ ಚಿತ್ರಗಳ ನಡುವೆ ಸ್ವಾತಂತ್ರ ಹೋರಾಟಗಾರ, ಕಿತ್ತೂರಿನ ಹುಲಿ ಸಂಗೊಳ್ಳಿರಾಯಣ್ಣನ ಮತ್ತೊಮ್ಮೆ ಕನ್ನಡ ಬೆಳ್ಳಿ ಪರದೆಗೆ ತರುತ್ತಿರುವುದು ಮೆಚ್ಚತಕ್ಕಂತಹ ವಿಷಯ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Thursday, June 4, 2009, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X