Don't Miss!
- News ಅಚ್ಚೇದಿನಗಳಲ್ಲ-ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ ಹರಿಹರನ್ ಅವರನ್ನ ಪ್ರಶ್ನಿಸಿದ ಅರ್ಜುನ್ ಸರ್ಜಾ ಅತ್ತೆ.!
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದನ್ನ ತಿರಸ್ಕರಿಸಿದ ನಟ ಅರ್ಜುನ್ ಸರ್ಜಾ, ಆಕೆಯ ಆರೋಪದಲ್ಲಿ ಸತ್ಯಾಂಶವಿಲ್ಲ. ಸುಮ್ಮನೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಇದೀಗ, ಅರ್ಜುನ್ ಸರ್ಜಾರ ಅವರ ಅತ್ತೆ ಈ ಘಟನೆ ಬಗ್ಗೆ ಮಾತನಾಡಿದ್ದು, ತಮ್ಮ ಅಳಿಯನ ಮೇಲೆ ಕೇಳಿ ಬಂದಿರುವನ್ನ ಆರೋಪವನ್ನ ತಳ್ಳಿಹಾಕಿದ್ದಾರೆ.
'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!
'ಅರ್ಜುನ ಸರ್ಜಾ ಅಂತಹ ವ್ಯಕ್ತಿಯಲ್ಲ. ಯಾರೇ ಏನೇ ಹೇಳಿದ್ರೂ ನಾವ್ ನಂಬಲ್ಲ. ಕಣ್ಣಲ್ಲಿ ನೋಡಿದ್ರೆ ಒಪ್ಪಬಹುದು. ಅವರು ದೇವತಾ ಮಾನವ. ಎಲ್ಲ ರೀತಿಯಲ್ಲಿ ಒಳ್ಳೆಯ ಗುಣ ಅವರಲ್ಲಿದೆ. ನಮ್ಮಗೆ ಏನಾದರೂ ಸಮಸ್ಯೆಯಾದರೂ ನಮ್ಮ ಬಗ್ಗೆ ಎಷ್ಟು ಕಾಳಜಿ ತೋರಿಸುತ್ತಾರೆ'' ಎಂದಿದ್ದಾರೆ.
'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!
ಇನ್ನು ಶ್ರುತಿ ಹರಿಹರನ್ ಅವರ ಆರೋಪವನ್ನ ಪ್ರಶ್ನಿಸಿರುವ ಅವರು 'ಆಗ ಸತ್ತು ಹೋಗಿರುವ ಘಟನೆಗೆ ಈಗ ಜೀವ ಕೊಡ್ತಿದ್ದಾರೆ. ಅವಾಗ ಯಾಕೆ ಸುಮ್ಮನೆ ಇದ್ರು.?' ಎಂದು ಕೇಳಿದ್ದಾರೆ. 'ಚಿತ್ರರಂಗ ಅಂದ್ಮೇಲೆ ಬೆಡ್ ರೂಂ ಸೀನ್ ಇರುತ್ತೆ, ಅಲ್ಲಿ ಕ್ಲೋಸ್ ಆಗಿರಲೇಬೇಕು. ಇದು ತಪ್ಪು ಅಂದ್ಮೇಲೆ ನೀವ್ಯಾಕೆ ಚಿತ್ರರಂಗಕ್ಕೆ ಕಾಲಿಟ್ರಿ.?' ಎಂದು ಸರ್ಜಾ ಅತ್ತೆ ಪ್ರಶ್ನಿಸಿದ್ದಾರೆ.
ಅಳಿಯನ ಬಗ್ಗೆ ಬಂದ ಆಪಾದನೆಗೆ ನಟ ರಾಜೇಶ್ ಗರಂ!
ಈ ಬಗ್ಗೆ ಅರ್ಜುನ್ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರು ಕೂಡ ಪ್ರತಿಕ್ರಿಯಿಸಿದ್ದು, ''ಶ್ರುತಿ ಹರಿಹರನ್ ಅವರು ಪ್ರಚಾರಕ್ಕಾಗಿ ನಮ್ಮ ಅಳಿಯನ ಮೇಲೆ ದೂರುತ್ತಿದ್ದಾರೆ. ಅವರು ಅಂತವರಲ್ಲ, ಆಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡತ್ತೇವೆ ಎಂದಿದ್ದರು.
ಇನ್ನು ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಶ್ರುತಿ ಹರಿಹರನ್, ನಾಳೆ (ಅಕ್ಟೋಬರ್ 21) ಭಾನುವಾರ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಬಹಿರಂಗಪಡಿಸಲಿದ್ದಾರೆ.