Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ
ಚಿರಂಜೀವಿ ಸರ್ಜಾ ಅವರದು ಎತ್ತರದ ನಿಲುವಿನ ದೇಹ. ಇತ್ತೀಚೆಗೆ ಅವರು ತುಂಬಾ ದಪ್ಪಗಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಜಿಮ್ನಲ್ಲಿ ಹೆಚ್ಚು ಹೆಚ್ಚು ಬೆವರು ಸುರಿಸಿ ದೇಹವನ್ನು ಉಬ್ಬಿಸಿಕೊಂಡಿದ್ದರು. ದೈಹಿಕ ಕಸರತ್ತು ಅವರ ಕುಟುಂಬಕ್ಕೆ ಹೊಸತಲ್ಲ. ಏಕೆಂದರೆ ಚಿತ್ರರಂಗದ ಕುಟುಂಬದಿಂದ ಬಂದವರಾದ ಅವರಿಗೆ ದೇಹದಾರ್ಢ್ಯ ಕಾಪಾಡಿಕೊಳ್ಳುವ ಕಲೆ ರಕ್ತಗತವಾಗಿಯೇ ಬಂದಿತ್ತು.
Recommended Video
ಆದರೆ ಮಾವ ಅರ್ಜುನ್ ಸರ್ಜಾ ಅವರಂತೆ ಚಿರಂಜೀವಿ ಕಟ್ಟುನಿಟ್ಟಾಗಿ ದೇಹದ ಫಿಟ್ನೆಸ್ ಕುರಿತು ಗಮನ ಹರಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಅವರ ಮಾವ ಅರ್ಜುನ್ ಸರ್ಜಾ ಕೂಡ ಕೋಪಗೊಂಡಿದ್ದರು ಎಂಬುದನ್ನು ಅವರ ಕುಟುಂಬಕ್ಕೆ ಆಪ್ತರಾಗಿರುವ ಸುಮಲತಾ ಅಂಬರೀಷ್ ತಿಳಿಸಿದ್ದಾರೆ. ಮುಂದೆ ಓದಿ...
ಅಂಬರೀಷ್ ಎಂದರೆ ಚಿರುಗೆ ಪ್ರಾಣ
ಚಿರು ಮತ್ತು ಮೇಘನಾ ಇಬ್ಬರು ಅಭಿಷೇಕ್ಗೆ ಚಿಕ್ಕಂದಿನಿಂದಲೂ ಬಹಳ ಆತ್ಮೀಯರು. ಮೂವರೂ ಒಟ್ಟಿಗೆ ಜಿಮ್ಗೆ ಹೋಗುತ್ತಿದ್ದರು. ಆಗಾಗ್ಗೆ ಮನೆಗೆ ಬರುತ್ತಿದ್ದರು. ಅಂಬರೀಷ್ ಎಂದರೆ ಚಿರುಗೆ ಪ್ರಾಣ. ಅವರ ಎದುರು ಆತ ಕೂರುತ್ತಿರಲಿಲ್ಲ. ಅವರ ತಲೆ ಕೈ ಕಾಲುಗಳಿಗೆ ಮಸಾಜ್ ಮಾಡುತ್ತಿದ್ದನು.
ಚಿರಂಜೀವಿ ಸರ್ಜಾ ಕೈಯಲ್ಲಿದ್ದ ನಾಲ್ಕು ಸಿನಿಮಾಗಳು ಇವು
ಅರ್ಜುನ್ ಬಯ್ಯುತ್ತಿದ್ದರು
ಚಿರಂಜೀವಿ ಬಹಳ ಕೂಲ್ ಹುಡುಗ. ಯಾವುದರ ಬಗ್ಗೆಯೂ ಸೀರಿಯಸ್ ಆಗುತ್ತಿರಲಿಲ್ಲ. ಫಿಟ್ನೆಸ್ ಬಗ್ಗೆ ಸೀರಿಯಸ್ಸಾಗಿ ಇರು ಎಂದು ಅರ್ಜುನ್ ಬಯ್ಯುತ್ತಿದ್ದರು ಎಂದು ಸುಮಲತಾ ನೆನಪಿಸಿಕೊಂಡಿದ್ದಾರೆ. ಈ ಕೆಟ್ಟ ಸುದ್ದಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಮೇಘನಾ ನಾಲ್ಕೈದು ತಿಂಗಳ ಗರ್ಭಿಣಿ ಎಂದು ಕೇಳಿ ದುಃಖ ಹೆಚ್ಚುತ್ತಿದೆ ಎಂದು ಅವರು ಭಾವುಕರಾದರು.
ರಕ್ತಗತವಾಗಿ ಬಂದಿದೆ
'ಫಿಟ್ನೆಸ್ ನಮಗೆ ರಕ್ತಗತವಾಗಿಯೇ ಬಂದಿದೆ ಎಂದು ಚಿರಂಜೀವಿ ಸರ್ಜಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅಜ್ಜ ಶಕ್ತಿ ಪ್ರಸಾದ್, ಮಾವ ಅರ್ಜುನ್ ಸರ್ಜಾ ಮತ್ತು ಅವರ ಸಹೋದರ ಧ್ರುವ ಸರ್ಜಾ ಎಲ್ಲರೂ ಫಿಟ್ನೆಸ್ಗೆ ಗಮನ ಹರಿಸುತ್ತಿದ್ದರು. ಅದರಲ್ಲಿಯೂ ಅವರ ಊಟ, ದಿನಚರಿ, ಫಿಟ್ನೆಸ್ ವರ್ಕೌಟ್ ಹೇಗಿರಬೇಕು ಎಂದು ಅರ್ಜುನ್ ಸರ್ಜಾ ಟಿಪ್ಸ್ ನೀಡುತ್ತಿದ್ದರು.
ಚಿರಂಜೀವಿ-ಮೇಘನಾ ಮದುವೆಗೆ ಸಹಾಯ ಮಾಡಿದ್ದೆ: ಜಗ್ಗೇಶ್
ಮನೆಯಲ್ಲಿಯೇ ಜಿಮ್
ಮನೆಯಲ್ಲಿಯೇ ಜಿಮ್ ಸಲಕರಣೆಗಳಿದ್ದವು. ಆದರೂ ಚಿರಂಜೀವಿ ಆಗಾಗೆ ಜಿಮ್ಗೆ ಹೋಗಿ ವರ್ಕೌಟ್ ಮಾಡುತ್ತಿದ್ದರು. ಟ್ರೇನರ್ ಇದ್ದಾಗ ಹೆಚ್ಚು ಶಿಸ್ತು, ಕಲಿಕೆ ಇರುತ್ತದೆ ಎಂದು ಚಿರಂಜೀವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.