Don't Miss!
- News Rain: ಬರದಿಂದ ತತ್ತರಿಸಿದ ಮಲೆನಾಡು: ಕೊಪ್ಪ ಮೇರುತಿ ಶಿಖರದಲ್ಲಿ ವರುಣನಿಗೆ ಹೋಮ-ಹವನ
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಡಬ್ಬಿಂಗ್' ವಿರುದ್ಧ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಾ 'ಧೀರ'.!
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಪರ-ವಿರೋಧ ಚರ್ಚೆಗಳು ಬಹಳ ವರ್ಷಗಳಿಂದ ನಡೆಯುತ್ತಿದೆ. ಕನ್ನಡದ ನಟರು ಹಾಗೂ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧ ಹೋರಾಟ ನಡೆಸಿದರೆ, ಇನ್ನೂ ಕೆಲವರು 'ಡಬ್ಬಿಂಗ್ ಬರಲಿ ಬಿಡಿ..' ಎನ್ನುತ್ತಿದ್ದಾರೆ.
ಹೀಗಿರುವಾಗ, ತಮಿಳು ನಟ ಅಜಿತ್ ಕುಮಾರ್ ಅಭಿನಯದ 'ಎನೈ ಅರಿಂದಾಲ್' ಸಿನಿಮಾ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಆಗಿ ಬಿಡುಗಡೆಯಾಗಿತ್ತು. ಈ ಚಿತ್ರದ ವಿರುದ್ಧ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ನಡೆದಿತ್ತು.
ಇದೀಗ, ಮತ್ತೊಂದು ತಮಿಳು ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಡಬ್ಬಿಂಗ್ ವಿರೋಧಿಸಿದ್ದಕ್ಕೆ ಕನ್ನಡ ನಟ ಜಗ್ಗೇಶ್, ಸಾರಾ ಗೋವಿಂದು, ವಾಟಳ್ ನಾಗರಾಜ್ ಅವರಿಗೆ 'ಸಿಸಿಐ'ನಿಂದ ನೋಟಿಸ್ ಬೇರೆ ಬಂದಿದೆ. ಈ ಎಲ್ಲಾ ಬೆಳವಣಿಗೆಗಳನ್ನ ಗಮಿನಿಸಿದ್ರೆ, ಡಬ್ಬಿಂಗ್ ವಿರುದ್ಧ ಮತ್ತೊಂದು ಮಹಾಯುದ್ಧ ಆಗುವ ಸೂಚನೆ ಸಿಗುತ್ತಿದೆ....ಮುಂದೆ ಓದಿ.....
ಮತ್ತೊಂದು ಡಬ್ಬಿಂಗ್ ಸಿನಿಮಾ
ಕಾಲಿವುಡ್ ನಟ ಅಜಿತ್ ನಟನೆಯ 'ಆರಂಭಂ' ಚಿತ್ರ ಸದ್ಯ ಕನ್ನಡಕ್ಕೆ ಡಬ್ ಆಗಿದ್ದು, 'ಧೀರ' ಎನ್ನುವ ಟೈಟಲ್ ನಲ್ಲಿ ಸಿನಿಮಾ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.
ಮತ್ತೆ ಡಬ್ಬಿಂಗ್ ವಿರುದ್ಧ ಹೋರಾಟ.!
'ಸತ್ಯಜೀತ್ ಐಪಿಎಸ್' ಚಿತ್ರದ ಸಂಧರ್ಭದಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಮತ್ತೆ ತಮಿಳು ಭಾಷೆಯ ಡಬ್ಬಿಂಗ್ ಸಿನಿಮಾ ಕನ್ನಡಕ್ಕೆ ಕಾಲಿಡಲಿದ್ದು, ಈ ಬಾರಿಯೂ ಅದೇ ರೀತಿಯ ಹೋರಾಟ ನಡೆಯಲಿದ್ಯಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಡಬ್ಬಿಂಗ್ ಜನರಿಗೆ ಬೇಕಂದ್ರೆ ತಡೆಯಲು ನಾನ್ಯಾರು: ಶಿವಣ್ಣ
ಹೋರಾಟಗಾರರಿಗೆ ಸಿಸಿಐ ಕಡಿವಾಣ
ಈ ಬಾರಿ ಡಬ್ಬಿಂಗ್ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುವ ಸಾಧ್ಯತೆ ಕಡಿಮೆ ಇದೆ. ಯಾಕಂದ್ರೆ ಡಬ್ಬಿಂಗ್ ಹೋರಾಟಕ್ಕೆ ಸದ್ಯ ಸಿಸಿಐ (Competition Commission of India) ಕಡಿವಾಣ ಹಾಕಿದೆ.
ನೋಟಿಸ್ ಜಾರಿ
ಡಬ್ಬಿಂಗ್ ಚಿತ್ರಗಳಿಗೆ ವಿರೋಧಿಸಿದ ಕಾರಣಕ್ಕೆ ನಟ ಜಗ್ಗೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್, ಮತ್ತು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಸೇರಿದಂತೆ ಹಲವರಿಗೆ ಸಿಸಿಐ ನೋಟಿಸ್ ಜಾರಿ ಮಾಡಿದೆ.
'ಡಬ್ಬಿಂಗ್, ರೀಮೇಕ್ ಬ್ಯಾನ್ ಮಾಡಿ' ಎಂದ ನಟ ಅನಂತ್ ನಾಗ್
ಜಗ್ಗೇಶ್ ಹೇಳಿಕೆ
ಸಿಸಿಐ ನೋಟಿಸ್ ನೀಡಿರುವ ಬಗ್ಗೆ ಹೇಳಿಕೆ ನೀಡಿರುವ ನಟ ಜಗ್ಗೇಶ್ ''ನಾನೋಬ್ಬ ಕನ್ನಡಿಗ, ವೈಯಕ್ತಿಯವಾಗಿ ನನಗೆ ಅಭಿವ್ಯಕ್ತಿ ಸ್ವಾತಂತ್ಯ ಇದೆ. ಈ ಹಿನ್ನಲೆಯಲ್ಲಿ ಡಬ್ಬಿಂಗ್ ಬೇಡ ಅಂತ ಹೇಳಿದ್ದೆ. ಈ ನೋಟಿಸ್ ಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ'' ಎಂದಿದ್ದಾರೆ.