Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರುಣ್ ಸಾಗರ್ ಗೋದಾಮಿಗೆ ಬೆಂಕಿ: ಕಲಾಕೃತಿಗಳು ಭಸ್ಮ
ಕನ್ನಡದ ಖ್ಯಾತ ಕಲಾ ನಿರ್ದೇಶಕ ಮತ್ತು ನಟ ಅರುಣ್ ಸಾಗರ್ ಅವರ ಕಲಾ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಸುಟ್ಟು ಭಸ್ಮವಾಗಿದೆ.
ನಗರದ ಉತ್ತರಹಳ್ಳಿಯಲ್ಲಿರುವ ಅರುಣ್ ಸಾಗರ್ ಅವರ 'ಆರ್ಟ್ ಗೋಡೌನ್'ನಲ್ಲಿ ಫೆಬ್ರವರಿ 15 ರಂದು ಸಂಜೆ ಸುಮಾರು 5.30ಕ್ಕೆ ಈ ಅವಘಡ ನಡೆದಿದ್ದು, ಚಿತ್ರಗಳಿಗೆ ಬಳಸಿದ್ದ ಮತ್ತು ಬಳಸಬೇಕಾಗಿದ್ದ ಅಪೂರ್ವ ಕಲಾಕೃತಿಗಳು ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಬೆಂಕಿಯನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸುವಷ್ಟರಲ್ಲಿ ಇಡೀ ಗೋಡೌನ್ ಪೂರ್ತಿ ಸುಟ್ಟು ಕರಕಲಾಗಿತ್ತು ಎಂದು ತಿಳಿದುಬಂದಿದೆ.
ಸುಮಾರು 17 ವರ್ಷದ ಹಿಂದೆ ಈ ಗೋಡೌನ್ ಆರಂಭಿಸಲಾಗಿತ್ತು. ಇದುವರೆಗೂ ಯಾವುದೇ ತರಹದ ಅವಘಡ ನಡದಿಲ್ಲ. ಈ ಅನಾಹುತ ಹೇಗಾಯಿತು ಎನ್ನುವುದು ಇನ್ನೂ ಗೊತ್ತಿಲ್ಲ. ಬಹಳ ನೋವಾಗುತ್ತಿದೆ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರಬಹುದು, ನನಗೆ ಯಾರೂ ಬೆಂಕಿ ಇಟ್ಟಿರುವ ಬಗ್ಗೆ ಅನುಮಾನವಿಲ್ಲ ಎಂದು ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನೂ ಗೋದಾಮಿನಲ್ಲಿ ಹೊಸದಾಗಿ ಚಿತ್ರಗಳಿಗೆ ಸೆಟ್ ಹಾಕಲು ಬಳಸಬೇಕಿದ್ದ ಮರದ ಕಟ್ಟಿಗೆಗಳು, ಮದುವೆ ಮನೆಗಳಲ್ಲಿ ಸೆಟ್ ಹಾಕಬೇಕಿದ್ದ ವಸ್ತುಗಳು, ಈಗಾಗಲೇ ಬಳಸಿದ್ದ ಅನೇಕ ವಸ್ತುಗಳು ಇದ್ದವು. ಮತ್ತು ಗೋಕರ್ಣದಲ್ಲಿ ಒಂದು ಕಲಾ ಶಾಲೆ ನಿರ್ಮಾಣ ಮಾಡಲು, ಸಿದ್ದ ಮಾಡಿಟ್ಟಿದ್ದ ಸಾಮಾಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿದೆ. ಇದರಿಂದ ಸುಮಾರು 70-80 ಲಕ್ಷ ನಷ್ಟವಾಗಿದೆ ಎಂದು ಅರುಣ್ ಸಾಗರ್ ತಿಳಿಸಿದ್ದಾರೆ. ಸದ್ಯ, ಸುಬ್ರಮಣ್ಯಪುರ ಪೊಲೀಸರು ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದಾರೆ.