Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗರಹಾವು ಚಿತ್ರ ಕಣ್ತುಂಬಿಕೊಂಡ ಚಾಮಯ್ಯ ಮೇಷ್ಟ್ರು ಫ್ಯಾಮಿಲಿ
'ನಾಗರಹಾವು' ಸಿನಿಮಾ ಎಷ್ಟರ ಮಟ್ಟಿಗೆ ಸುದ್ದಿ ಮಾಡುತ್ತಿದೆ ಎಂದರೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಚಿತ್ರಗಳೇ ಎರಡು ಮೂರು ದಿನಕ್ಕೆ ಥಿಯೇಟರ್ ನಿಂದ ಖಾಲಿ ಮಾಡಿರುವ ಉದಾಹರಣೆಗಳು ಸಾಕಷ್ಟಿದೆ. ಆದರೆ 'ನಾಗರಹಾವು' ಸಿನಿಮಾ ಮಾತ್ರ ಅಭಿಮಾನಿಗಳ ಮನಸ್ಸನ್ನು ಎರಡನೇ ಸಲವೂ ಗೆದ್ದುಕೊಂಡಿದೆ.
ಕನ್ನಡ ಸಿನಿಮಾ ಕಲಾವಿದರು ಚಿತ್ರವನ್ನ ನೋಡಿ ಖುಷಿ ಪಡುತ್ತಿದ್ದಾರೆ. ಇದೇ ಸಮಯದಲ್ಲಿ 'ನಾಗರಹಾವು' ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರ ನಿರ್ವಹಿಸಿದ್ದ ಅಶ್ವಥ್ ಅವರ ಕುಟುಂಬಸ್ಥರು ಮೈಸೂರಿನಲ್ಲಿ 'ನಾಗರಹಾವು' ಸಿನಿಮಾವನ್ನು ನೋಡಿದ್ದಾರೆ.
'ನಾಗರಹಾವು' ಸಿನಿಮಾವನ್ನು ಕಲ್ಪನಾ ರಿಜೆಕ್ಟ್ ಮಾಡಿದ್ದರು!
"ಇಹ ಲೋಕವನ್ನು ನನ್ನ ತಂದೆ ತ್ಯಜಿಸಿ ವರ್ಷಗಳಾದವು ಎಂಟು, ಆದರೆ ಇನ್ನೂ ಎಲ್ಲರ ಮನದಲ್ಲಿ ಚಾಮಯ್ಯ ಮೇಷ್ಟರ ಬಿಡದ ನಂಟು, ಚಾಮಯ್ಯ ತೆರೆಯ ಮೇಲೆ ಬಂದಾಗ ಕಂಡ ವೀಕ್ಷಕರು ಈಗಲೂ ಶಿಳ್ಳೆ ಹೊಡೆದು ಬರಮಾಡಿಕೊಂಡಿದ್ದು ಉಂಟು, ಆಹಾ! ಸಾರ್ಥಕವಾಯಿತು ಈ ಜನ್ಮ! ನಾಗರಹಾವು ಚಿತ್ರದ ತಂಡಕ್ಕೆ ನಮಿಸಿ, ವೀಕ್ಷಸಿದ ನಮ್ಮ ಸಂಸಾರ" ಎಂದು ಫೋಟೋ ಸಮೇತವಾಗಿ ತಮ್ಮ ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ನಟ ಶಂಕರ್ ಅಶ್ವಥ್.
ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಜಗ್ಗೇಶ್ ಸಿನಿಮಾ ನೋಡಿ ಸಂತಸ ವ್ಯಕ್ತ ಪಡಿಸಿದ್ದು ಕನ್ನಡ ಸಿನಿಮಾರಂಗದ ಸಾಕಷ್ಟು ನಿರ್ದೇಶಕರು ಕೂಡ ಚಿತ್ರವನ್ನು ನೋಡಿದ್ದಾರೆ.