Don't Miss!
- News RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Sports RCB vs KKR: ಚಿನ್ನಸ್ವಾಮಿಯಲ್ಲಿ ಮತ್ತೊಂದು ರೋಚಕ ಪಂದ್ಯ; ಸಂಭಾವ್ಯ ಆಡುವ 11ರ ಬಳಗ, ಲೈವ್ ಸ್ಟ್ರೀಮಿಂಗ್
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗರಹಾವು ಚಿತ್ರ ಕಣ್ತುಂಬಿಕೊಂಡ ಚಾಮಯ್ಯ ಮೇಷ್ಟ್ರು ಫ್ಯಾಮಿಲಿ
'ನಾಗರಹಾವು' ಸಿನಿಮಾ ಎಷ್ಟರ ಮಟ್ಟಿಗೆ ಸುದ್ದಿ ಮಾಡುತ್ತಿದೆ ಎಂದರೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಚಿತ್ರಗಳೇ ಎರಡು ಮೂರು ದಿನಕ್ಕೆ ಥಿಯೇಟರ್ ನಿಂದ ಖಾಲಿ ಮಾಡಿರುವ ಉದಾಹರಣೆಗಳು ಸಾಕಷ್ಟಿದೆ. ಆದರೆ 'ನಾಗರಹಾವು' ಸಿನಿಮಾ ಮಾತ್ರ ಅಭಿಮಾನಿಗಳ ಮನಸ್ಸನ್ನು ಎರಡನೇ ಸಲವೂ ಗೆದ್ದುಕೊಂಡಿದೆ.
ಕನ್ನಡ ಸಿನಿಮಾ ಕಲಾವಿದರು ಚಿತ್ರವನ್ನ ನೋಡಿ ಖುಷಿ ಪಡುತ್ತಿದ್ದಾರೆ. ಇದೇ ಸಮಯದಲ್ಲಿ 'ನಾಗರಹಾವು' ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರ ನಿರ್ವಹಿಸಿದ್ದ ಅಶ್ವಥ್ ಅವರ ಕುಟುಂಬಸ್ಥರು ಮೈಸೂರಿನಲ್ಲಿ 'ನಾಗರಹಾವು' ಸಿನಿಮಾವನ್ನು ನೋಡಿದ್ದಾರೆ.
'ನಾಗರಹಾವು' ಸಿನಿಮಾವನ್ನು ಕಲ್ಪನಾ ರಿಜೆಕ್ಟ್ ಮಾಡಿದ್ದರು!
"ಇಹ ಲೋಕವನ್ನು ನನ್ನ ತಂದೆ ತ್ಯಜಿಸಿ ವರ್ಷಗಳಾದವು ಎಂಟು, ಆದರೆ ಇನ್ನೂ ಎಲ್ಲರ ಮನದಲ್ಲಿ ಚಾಮಯ್ಯ ಮೇಷ್ಟರ ಬಿಡದ ನಂಟು, ಚಾಮಯ್ಯ ತೆರೆಯ ಮೇಲೆ ಬಂದಾಗ ಕಂಡ ವೀಕ್ಷಕರು ಈಗಲೂ ಶಿಳ್ಳೆ ಹೊಡೆದು ಬರಮಾಡಿಕೊಂಡಿದ್ದು ಉಂಟು, ಆಹಾ! ಸಾರ್ಥಕವಾಯಿತು ಈ ಜನ್ಮ! ನಾಗರಹಾವು ಚಿತ್ರದ ತಂಡಕ್ಕೆ ನಮಿಸಿ, ವೀಕ್ಷಸಿದ ನಮ್ಮ ಸಂಸಾರ" ಎಂದು ಫೋಟೋ ಸಮೇತವಾಗಿ ತಮ್ಮ ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ನಟ ಶಂಕರ್ ಅಶ್ವಥ್.
ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಜಗ್ಗೇಶ್ ಸಿನಿಮಾ ನೋಡಿ ಸಂತಸ ವ್ಯಕ್ತ ಪಡಿಸಿದ್ದು ಕನ್ನಡ ಸಿನಿಮಾರಂಗದ ಸಾಕಷ್ಟು ನಿರ್ದೇಶಕರು ಕೂಡ ಚಿತ್ರವನ್ನು ನೋಡಿದ್ದಾರೆ.