Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೂಂಡಾಗಿರಿ, ಹಲ್ಲೆ ಆರೋಪ: ನಟ ದುನಿಯಾ ವಿಜಯ್ ಕೊಟ್ಟ ಕ್ಲಾರಿಟಿ
ಇನ್ನೊಬ್ಬರ 'ಗಲಾಟೆ ಸಂಸಾರ'ದಲ್ಲಿ ಮೂಗು ತೂರಿಸಿ 'ಗೂಂಡಾಗಿರಿ' ನಡೆಸಿದ್ದಾರೆ ಎಂಬ ಗಂಭೀರ ಆರೋಪ ನಟ ದುನಿಯಾ ವಿಜಯ್ ವಿರುದ್ಧ ಕೇಳಿಬಂದಿದೆ.
ಎಲ್ಲಾ ಸುದ್ದಿ ವಾಹಿನಿಗಳಲ್ಲೂ ಈ ವಿಚಾರ ಬಿಗ್ ಬ್ರೇಕಿಂಗ್ ನ್ಯೂಸ್ ಆಗ್ತಿದ್ದ ಹಾಗೆ, ಟಿವಿ9 ಸುದ್ದಿ ವಾಹಿನಿ ಜೊತೆ ಮಾತನಾಡಿದ ನಟ ದುನಿಯಾ ವಿಜಯ್, ವಿವಾದದ ಕುರಿತು ಕ್ಲಾರಿಟಿ ನೀಡಿದರು.
'ನಾವೇ ಬಗೆಹರಿಸಿಕೊಳ್ಳುತ್ತೇವೆ'
''ಎಲ್ಲ ಅಭಿಮಾನಿಗಳಿಗೆ, ಮಾಧ್ಯಮಗಳಿಗೆ ಕೇಳಿಕೊಳ್ಳುವುದು ಒಂದೇ, ಇದು ಕುಟುಂಬದ ವಿಚಾರ. ನಾವು ಕೂತು ಬಗೆಹರಿಸಿಕೊಳ್ಳುತ್ತೇವೆ. ಮನುಷ್ಯನ ಸಮಯ ಕೆಟ್ಟಾಗ ಹೀಗಾಗುತ್ತೆ'' - ದುನಿಯಾ ವಿಜಯ್, ನಟ [ಬ್ರೇಕಿಂಗ್ ನ್ಯೂಸ್ : ದುನಿಯಾ ವಿಜಯ್ ವಿರುದ್ಧ 'ಗೂಂಡಾಗಿರಿ' ಆರೋಪ.!?]
ಹಲ್ಲೆ ಮಾಡಿಲ್ಲ
''ನಾನು ಈ ರೀತಿಯ ಕೆಲಸ ಮಾಡುವುದಕ್ಕೆ ಹೋಗಲ್ಲ. ನಾನು ಹಲ್ಲೆ ಮಾಡಿಲ್ಲ, ನಾನು ಮಾತ್ರವಲ್ಲ ಬೇರೆ ಯಾರು ಕೂಡ ಹಲ್ಲೆ ಮಾಡಿಲ್ಲ. ಆದ್ರೆ, ನನ್ನ ಮೇಲೆ ಯಾಕೆ ಈ ತರಹ ಆರೋಪ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ನಾನು ಅವರ ಮನೆಗೆ ಹೋಗಿದ್ದು ನಿಜ. ಆದ್ರೆ, ಹಲ್ಲೆ ಮಾಡಿಲ್ಲ'' - ದುನಿಯಾ ವಿಜಯ್, ನಟ [ಅರೆಸ್ಟ್ ಆದ್ರಾ ನಟ ದುನಿಯಾ ವಿಜಯ್.? ನಿನ್ನೆ ನಡೆದ ಸತ್ಯ ಸಂಗತಿ ಇದು.!]
ಬೇಸರ ಆಗಿದೆ
''ಶಂಕರ್ ಗೌಡ ಹಾಗೂ ಮಾನಸ ಬದುಕಿನ ಬಗ್ಗೆ ನನಗೂ ಕಾಳಜಿ ಇದೆ. ಮಾನಸ ಬದುಕು ಚೆನ್ನಾಗಿರಬೇಕು. ಅವರ ಭವಿಷ್ಯ ಚೆನ್ನಾಗಿರಬೇಕು. ನಾನು, ಉದಯ್, ಸುಂದರ್ ಎಲ್ಲರೂ ಒಂದೇ ಕುಟುಂಬದವರಿದ್ದಂತೆ. ನನ್ನ ಸಮಸ್ಯೆಗೆ ಅವರು ಬರುತ್ತಿದ್ದರು, ಅವರ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತಿದ್ದೆ. ಆದ್ರೆ, ಈ ಆರೋಪದಿಂದ ನನಗೆ ಬೇಸರವಾಗುತ್ತಿದೆ. ನನಗೆ ಯಾಕೆ ಮೇಲಿಂದ ಮೇಲೆ ಈ ತರಹ ಆಗುತ್ತಿದೆ ಅಂತ ಗೊತ್ತಾಗುತ್ತಿಲ್ಲ'' - ದುನಿಯಾ ವಿಜಯ್, ನಟ [ನಿರ್ಮಾಪಕ ಸುಂದರ್.ಪಿ.ಗೌಡ ಅಮಾಯಕ ಎಂದ ನಟ ದುನಿಯಾ ವಿಜಯ್.!]
ನಾನು ಈಗಾಗಲೇ ಕುಗ್ಗಿದ್ದೇನೆ
''ಸುಂದರ್ ಜೈಲಿನಲ್ಲಿ ಇದ್ದಾರೆ. ಅವರನ್ನ ಹೊರಗೆ ಕರೆತರುವ ಕೆಲಸದಲ್ಲಿ ನಾನು ಇದ್ದೀನಿ. ನಾನು ಈಗಾಗಲೇ ಸಾಕಷ್ಟು ಕುಗ್ಗಿದ್ದೇನೆ. ಎಲ್ಲದನ್ನೂ ಭರಿಸುವ ಶಕ್ತಿ ನನಗೆ ಆ ದೇವರು ಕೊಟ್ಟಿದ್ದಾನೆ. ನಾವು ಹಲ್ಲೆ ಮಾಡಿಲ್ಲ. ಸಿಸಿಟಿವಿ ದೃಶ್ಯ ಇದೆ. ಬೇಕಾದರೆ ಚೆಕ್ ಮಾಡಲಿ'' - ದುನಿಯಾ ವಿಜಯ್, ನಟ [ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]
ಬೇರೇನೂ ಮಾತನಾಡಲ್ಲ
''ಸುಂದರ್ ಬರುವವರೆಗೂ ನಾನು ಬೇರೇನೂ ಮಾತನಾಡಲ್ಲ. ಸದ್ಯ, ನಾನು ಆಸ್ಪತ್ರೆಗೆ ಹೋಗುತ್ತೇನೆ. ಮಾನಸ ಅವರ ತಂದೆಯ ಆರೋಗ್ಯವನ್ನ ವಿಚಾರಿಸುತ್ತೇನೆ'' - ದುನಿಯಾ ವಿಜಯ್, ನಟ
ಅಷ್ಟಕ್ಕೂ ಏನಿದು ಗಲಾಟೆ ಮ್ಯಾಟರ್.?
'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್.ಪಿ.ಗೌಡ ಅಣ್ಣ ಶಂಕರ್ ಗೌಡ ಮೂರು ತಿಂಗಳ ಹಿಂದೆ ಮಾನಸ ಎಂಬುವವರನ್ನ ವಿವಾಹವಾಗಿದ್ದರು. ಶಂಕರ್ ಗೌಡ-ಮಾನಸ ನಡುವೆ ಮನಸ್ತಾಪ ಮೂಡಿ ಬಂದ ಹಿನ್ನಲೆ ಇಂದು ಬೆಳಗ್ಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ಅವರ ನಿವಾಸದಲ್ಲಿ ದೊಡ್ಡ ರಂಪಾಟ ನಡೆದಿದೆ.
ಇನ್ನೊಬ್ಬರ ಮನೆ ಜಗಳಕ್ಕೆ ಕಾಲಿಟ್ಟ ದುನಿಯಾ ವಿಜಯ್.!?
ಮಾನಸ ತಾಯಿ ಯಶೋಧಮ್ಮ 'ಪಬ್ಲಿಕ್ ಟಿವಿ'ಗೆ ನೀಡಿರುವ ಹೇಳಿಕೆ ಪ್ರಕಾರ, ಕಳೆದ ಮೂರು ತಿಂಗಳಿನಿಂದಲೂ, ತಮ್ಮ ಪುತ್ರಿ ಮಾನಸಗೆ ಶಂಕರ್ ಗೌಡ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಳಿಯ (ಶಂಕರ್ ಗೌಡ) ದೌರ್ಜನ್ಯ ಪ್ರಶ್ನಿಸಲು ಇಂದು ಬೆಳಗ್ಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಹಿಂಭಾಗದಲ್ಲಿ ಇರುವ ನಿವಾಸಕ್ಕೆ ಮಾನಸ ಪೋಷಕರು (ಜಯರಾಮ್, ಯಶೋಧಮ್ಮ) ಬಂದಿದ್ದಾರೆ. ಆಗ ಮಾವ (ಜಯರಾಮ್) ಮತ್ತು ಅಳಿಯ (ಶಂಕರ್ ಗೌಡ) ನಡುವೆ ಮಾತಿನ ಚಕಮಕಿ ನಡೆದಿದೆ.
ದುನಿಯಾ ವಿಜಯ್ ಮಧ್ಯ ಪ್ರವೇಶ
ಈ ವೇಳೆ ಶಂಕರ್ ಗೌಡ ಸಹಾಯಕ್ಕೆ ನಟ ದುನಿಯಾ ವಿಜಯ್ ಆಗಮಿಸಿದ್ದಾರೆ. ಮಗಳಿಗೆ (ಮಾನಸ) ಆಗಿರುವ ಅನ್ಯಾಯವನ್ನ ದುನಿಯಾ ವಿಜಯ್ ಮುಂದೆ ಪೋಷಕರು (ಜಯರಾಮ್, ಯಶೋಧಮ್ಮ) ತೋಡಿಕೊಂಡರೂ, ಅದಕ್ಕೆ ಸ್ಪಂದಿಸಿ, ನ್ಯಾಯ ಕೊಡಿಸುವ ಬದಲು ಜಯರಾಮ್ ಮೇಲೆ ದುನಿಯಾ ವಿಜಯ್ ಹಲ್ಲೆ ಮಾಡಿದ್ದಾರೆ ಅಂತ ಯಶೋಧಮ್ಮ ಆರೋಪಿಸಿದ್ದಾರೆ.
ಎದೆಗೆ ಒದ್ದರಂತೆ ದುನಿಯಾ ವಿಜಯ್.!
ಮಾನಸ ತಂದೆ ''ಜಯರಾಮ್ ಎದೆಗೆ ನಟ ದುನಿಯಾ ವಿಜಯ್ ಒದ್ದಿದ್ದಾರೆ'' ಅಂತ ಜಯರಾಮ್ ಪತ್ನಿ ಯಶೋಧಮ್ಮ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿರುವ ಜಯರಾಮ್ ರವರನ್ನ ಬುಲ್ ಟೆಂಪಲ್ ರಸ್ತೆಯಲ್ಲಿರುವ ಶೇಖರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.