Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಟ್ಟಯ್ಯ v/s ಹಂದಿ ಕಾಯೋಳು' ಚಿತ್ರ ಇದೇ ವಾರ ಬಿಡುಗಡೆ
'ಅಟ್ಟಯ್ಯ v/s ಹಂದಿ ಕಾಯೋಳು' ಎಂದ ತಕ್ಷಣ ಏನಿದು ಸಿನಿಮಾಗೆ ಹೆಸರು ಇಷ್ಟೊಂದು ಡಿಫರೆಂಟ್ ಆಗಿದೆ ಅಂತ ನಿಮಗೆ ಅನಿಸಬಹುದು. ಸಿನಿಮಾದ ಹೆಸರು ಮಾತ್ರವಲ್ಲ ಈ ಸಿನಿಮಾ ಕೂಡ ವಿಭಿನ್ನತೆಯಿಂದ ಕೂಡಿದೆಯಂತೆ.
ಇಂಡಸ್ಟ್ರಿಗೆ ಬಂದ ಹರಿಕೃಷ್ಣ ಪುತ್ರ : ಕೇವಲ 45 ನಿಮಿಷದಲ್ಲಿ ಮೊದಲ ಹಾಡು ರೆಡಿ
ಸುಮಾರು 18 ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಲೋಕೆಂದ್ರ ಸೂರ್ಯ ಅವರು ಜೂನಿಯರ್ ಉಪೇಂದ್ರ ಎಂದೇ ಖ್ಯಾತಿ ಗಳಿಸಿದ್ದಾರೆ. ಅವರ ಕನಸಿನ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ.
ಮಳವಳ್ಳಿಯಲ್ಲಿ ನಡೆದ ಕ್ರೈಂ ಸ್ಟೋರಿ ಚಿತ್ರದ ಕಥೆಯಾಗಿದೆ. ಗದ್ದೆಗಳಿಗೆ ನುಗ್ಗುವ ಹಂದಿಗಳಿಂದ ಶುರುವಾಗುವ ಗಲಾಟೆ ಯಾವ ರೀತಿ ಕ್ರೈಮ್ ಸ್ಟೋರಿಯಾಗಿ ಬದಲಾಗುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕಾಗುತ್ತದೆ.
ಈ ರೀತಿಯ ಕಥೆಯ ಜೊತೆಗೆ ಲವ್ ಸ್ಟೋರಿ ಕೂಡ ಬೆರೆತಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕರಿಗೆ ನಟನೆ ಗೊತ್ತೆ ಇರಲಿಲ್ಲವಂತೆ. ಪಾತ್ರಕ್ಕೆ ನೈಜತೆ ಬೇಕು ಎನ್ನವ ಉದ್ದೇಶದಿಂದ ಹೊಸಬರ ಬಳಿ ನಟನೆಯನ್ನು ತೆಗೆಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಎನ್ ಎಸ್ ಡಿ ವಿಧ್ಯಾರ್ಥಿಗಳು ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಎರಡು ಹಾಡುಗಳು ಇದ್ದು, ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಹಾಡಿನ ಸಾಹಿತ್ಯದಲ್ಲಿ ಸಂಭವಾಮಿ ಎಂಬ ಪದವನ್ನು ಸೆನ್ಸಾರ್ ಬೋರ್ಡ್ ಮ್ಯೂಟ್ ಮಾಡಿದೆ. ಹಾಡು ಕೇಳಲು ಸಖತ್ ಮಜಾವಾಗಿದೆ.
ಮಹದೇವಯ್ಯ, ಚೈತ್ರಾ, ಅರ್ಜುನ ಕೃಷ್ಣ, ತಾತಗುಣಿ ಕೆಂಪೇಗೌಡ, ವಿನಯ್ ಕೂರ್ಗ್, ಎಂ.ಸಿ. ನಾಗರಾಜ್, ಗುಣಶೇಖರ್ ಚಿತ್ರದಲ್ಲಿದ ಕಲಾವಿದರಾಗಿದ್ದಾರೆ. ಒಂದು ಒಳ್ಳೆಯ ಪ್ರಯತ್ನದ ಈ ಸಿನಿಮಾ ಇದೇ ಶುಕ್ರವಾರ ಅಂದರೆ, ಫೆಬ್ರವರಿ 1 ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗುತ್ತಿದೆ.