Don't Miss!
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಪ್ರದರ್ಶನದ ವೇಳೆ ಗಲಾಟೆ
ಇಂದು (ಡಿಸೆಂಬರ್ 27) ಬಿಡುಗಡೆ ಆಗಬೇಕಿದ್ದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿನ್ನೆ ರಾತ್ರಿಯೇ ರಿಲೀಸ್ ಆಗಿದೆ. ಚಿತ್ರದ ಪ್ರದರ್ಶನದ ವೇಳೆ ಗಲಾಟೆಯಾದ ಘಟನೆ ನಡೆದಿದೆ.
ಒರಾಯನ್ ಮಾಲ್ ನಲ್ಲಿ ಚಿತ್ರದ ಪ್ರದರ್ಶನದ ವೇಳೆ ಗಲಾಟೆ ಆಗಿದೆ. ಚಿತ್ರಮಂದಿರದಲ್ಲಿ ಎಸಿ ಹಾಕಿಲ್ಲ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಹಾಗೂ ಮ್ಯಾನೆಜರ್ ನಡುವೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ 9.50ಕ್ಕೆ ಶುರು ಆಗಿದ್ದ ಸಿನಿಮಾ ಮಧ್ಯರಾತ್ರಿ 2 ಗಂಟೆಗೆ ಮುಗಿದಿದೆ.
Avane Srimannarayana Review : ದೃಶ್ಯ ವೈಭವ.. ಸಂಗೀತದ ಸೊಬಗು..
ಇಂಟರ್ ವೆಲ್ ವರೆಗೆ ಎಸಿ ಇಲ್ಲದೆ ಕುಳಿತ್ತಿದ್ದ ಜನ ನಂತರ ಗಲಾಟೆ ಮಾಡಿದ್ದಾರೆ. ಬೇರೆ ಬೇರೆ ಸ್ಕ್ರೀನ್ ಗಳಲ್ಲಿ ಎಸಿ ಹಾಕಿದ್ದು, ಕನ್ನಡ ಸಿನಿಮಾ ಎನ್ನುವ ಕಾರಣಕ್ಕೆ ಇಲ್ಲಿ ಎಸಿ ಹಾಕಿಲ್ಲ ಎಂದು ಜನ ಮ್ಯಾನೆಜರ್ ಅನ್ನು ತರಾಟೆಗೆ ತೆಗೆದುಕೊಂಡರು.
ಈ ಗಲಾಟೆಯ ನಡುವೆ ಸಿನಿಮಾ ಒಂದುವರೆ ಗಂಟೆ ತಡ ಆಗಿದೆ. ಎಸಿಯ ಗಲಾಟೆ ನಡುವೆ ಎಷ್ಟೊಂದು ಜನರಿಗೆ ತೊಂದರೆ ಆಗಿದೆ. ರಾತ್ರಿ ಸಿನಿಮಾ ನೋಡಲು ಬಂದು ಕುಟುಂಬಗಳು ಚಿತ್ರಮಂದಿರಲ್ಲೂ ಕೂರಲು ಆಗದೆ, ಮನೆಗೂ ಹೋಗಲು ಆಗದೆ ಕಂಗಾಲಾಗಿದ್ದರು.
ನಂತರ ಪೊಲೀಸರ ಆಗಮನದಿಂದ ಪರಿಸ್ಥಿತಿ ತಣ್ಣಗಾಯಿತು. ಬಳಿಕ ಪ್ರೇಕ್ಷಕರ ಒತ್ತಾಯಕ್ಕೆ ಮಣಿದು ಹಣ ವಾಪಸ್ ನೀಡಿದ್ದಾರೆ. ಘಟನೆಯಿಂದ ಸಿನಿಮಾ ನೋಡಲು ಬಂದ ಸಾಮಾನ್ಯ ಪ್ರೇಕ್ಷಕರಿಗೆ ತುಂಬ ತೊಂದರೆ ಆಗಿದೆ.