Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಸ್ಟ್ ಗೆ ತಯಾರಾದ ದರ್ಶನ್: ಕಮಲ್, ಅಕ್ಷಯ್ ಕೊಡ್ತಾರೆ ಸರ್ಪ್ರೈಸ್.!
Recommended Video
ಆಗಸ್ಟ್ ತಿಂಗಳು ಬಂತಂದ್ರೆ ಸ್ವಾತಂತ್ಯ ದಿನಾಚರಣೆಯನ್ನ ಆಚರಿಸಲು ಇಡೀ ದೇಶವೇ ಕಾಯುತ್ತಿರುತ್ತೆ. ಈ ವಿಶೇಷ ತಿಂಗಳಿನಲ್ಲಿ ಸ್ಯಾಂಡಲ್ ವುಡ್ ನಲ್ಲೂ ಸಂಭ್ರಮ ಜೋರಾಗಿರುತ್ತೆ. ಹಾಗಾಗಿ, ಹೊಸ ಚಿತ್ರಗಳ ಪೋಸ್ಟರ್, ಟ್ರೈಲರ್, ಟೀಸರ್ ಅಥವಾ ಬೇರೆ ಕಾರ್ಯಕ್ರಮಗಳು ಇದ್ದೇ ಇರುತ್ತೆ.
ಈಗಾಗಲೇ ಚಂದನವನದಲ್ಲಿ ಕೆಲವು ದೊಡ್ಡ ಸಿನಿಮಾ ಆಗಸ್ಟ್ ತಿಂಗಳಲ್ಲಿ, ಅದರಲ್ಲೂ ಆಗಸ್ಟ್ 15ರ ವಿಶೇಷವಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಸಜ್ಜಾಗುತ್ತಿದೆ. ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಯ ಚಿತ್ರಗಳು ಕೂಡ ಈ ವಿಶೇಷವಾದ ದಿನಕ್ಕೆ ತಯಾರಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಡೆಯಿಂದ ಎರಡು ಗುಡ್ ನ್ಯೂಸ್ ಇದೆ. ಕಮಲ್ ಹಾಸನ್ ಅವರಿಂದ ಒಂದು ಉಡುಗೊರೆ ಇದೆ. ಅಕ್ಷಯ್ ಕುಮಾರ್ ಕೂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ. ಹಾಗಿದ್ರೆ, ಆಗಸ್ಟ್ ತಿಂಗಳ ಸ್ಪೆಷಲ್ ಬೆಳವಣಿಗೆಗಳೇನಿದೆ.? ಮುಂದೆ ಓದಿ.....
'ಒಡೆಯರ್' ಲಾಂಚ್
ಸದ್ಯದ ಮಾಹಿತಿ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಆಗಸ್ಟ್ 16 ರಂದು ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ಎಂಡಿ ಶ್ರೀಧರ್ ನಿರ್ದೇಶನದಲ್ಲಿ ಆರಂಭವಾಗಲಿರುವ 'ಒಡೆಯರ್' ಆಗಸ್ಟ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿದೆಯಂತೆ. ಆ ದಿನ ನಿರ್ಮಾಪಕ ಸಂದೇಶ ನಾಗರಾಜ್ ಅವರ ಹುಟ್ಟುಹಬ್ಬವೂ ಇದೆ.
ದರ್ಶನ್ 'ಒಡೆಯರ್' ಸಿನಿಮಾ ಲಾಂಚ್ ಗೆ ನಿಗದಿ ಆಯ್ತು ದಿನಾಂಕ
'ಕುರುಕ್ಷೇತ್ರ' ಬರೋ ಸಾಧ್ಯತೆ.!
ದರ್ಶನ್ ಅಭಿನಯಿಸಲಿರುವ 52ನೇ ಚಿತ್ರದ ಮುಹೂರ್ತ ಒಂದು ಕಡೆಯಾದರೇ, ಅದಕ್ಕೂ ಮುಂಚೆಯೇ ದರ್ಶನ್ ಅವರ 50ನೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆಯಂತೆ. ಈಗಾಗಲೇ ಶೂಟಿಂಗ್ ಮುಗಿಸಿರುವ 'ಕುರುಕ್ಷೇತ್ರ' ಆಗಸ್ಟ್ ಎರಡನೇ ವಾರ ಅಥವಾ ಮೂರನೇ ವಾರಕ್ಕೆ ಬಿಡುಗಡೆಯಾಗಲಿದೆ ಎನ್ನುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್, ದುರ್ಯೋಧನನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಅಕ್ಷಯ್ ಕುಮಾರ್ 'ಗೋಲ್ಡ್'
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಸಿನಿಮಾ ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಒಬ್ಬ ಬೆಂಗಾಲಿ ಹಾಕಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕು ಎಂಬ ಕನಸು ಹೊಂದಿದ್ದ ಈ ಆಟಗಾರನ ಸುತ್ತ ಚಿತ್ರದ ಕಥೆ ಇದೆ. ಹೀಗಾಗಿ ಆಗಸ್ಟ್ 15ರಂದು ಈ ಸಿನಿಮಾ ಬಂದ್ರೆ ಉತ್ತಮ ಎಂದು ನಿರ್ಧರಿಸಿರುವ ಚಿತ್ರತಂಡ ಅದೇ ದಿನ ತೆರೆಗೆ ತರುತ್ತಿದ್ದಾರೆ.
'ಗೋಲ್ಡ್' ಪೋಸ್ಟರ್ ನೋಡಿ ಬೌಲ್ಡ್ ಆದ ಬಾಲಿವುಡ್
'ವಿಶ್ವರೂಪಂ' ತೋರಿಸಲಿದ್ದಾರೆ ಕಮಲ್
ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದಲ್ಲಿ ತಯಾರಾಗಿರುವ 'ವಿಶ್ವರೂಪಂ-2' ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ದೇಶಭಕ್ತಿ ಮತ್ತು ದೇಶದ್ರೋಹದ ಕಥಾಹಂದರದಲ್ಲಿ ಸಿದ್ಧವಾಗಿರುವ ಈ ಸಿನಿಮಾವನ್ನ ಸ್ವತಃ ಕಮಲ್ ಹಾಸನ್ ನಟಿಸಿ, ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ.
ರಜನಿಕಾಂತ್ ನಂತರ ಕಮಲ್ ಹಾಸನ್ ಗೂ ಕಾದಿದ್ಯಾ ಸಂಕಷ್ಟ.?
ಸತ್ಯಮೇವ ಜಯತೇ
ಜಾನ್ ಅಬ್ರಾಹಂ ಅಭಿನಯದ 'ಸತ್ಯಮೇವ ಜಯತೇ' ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ. ಮಿಲಪ್ ಜವಾರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.