Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಷಯ್ ಕುಮಾರ್ ಗೆ 'ಗುಡ್ ನ್ಯೂಸ್' ಆದ್ರೆ ರಕ್ಷಿತ್ ಶೆಟ್ಟಿಗೆ ಬಿಗ್ ಚಾಲೆಂಜ್
Recommended Video
ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಒಂದೊಂದು ಚಿತ್ರದಲ್ಲೂ ಒಂದೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತ ಗಮನ ಸೆಳೆಯುತ್ತಿರುವ ಅಕ್ಷಯ್ ಬಳಿ ಸಾಕಷ್ಟು ಸಿನಿಮಾಗಳಿವೆ. ಇತ್ತ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದಾರೆ.
ರಕ್ಷಿತ್ ತೆರೆ ಮೇಲೆ ಕಾಣಿಸಿಕೊಳ್ಳದೆ ಸುಮಾರು ಮೂರು ವರ್ಷಗಳಾಗುತ್ತಾ ಬಂತು. ಅದೇನೆ ಇರಲಿ ಅಕ್ಷಯ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿಗೂ ಎಲ್ಲಿಯ ಲಿಂಕು ಅಂತ ಯೋಚಿಸುತ್ತಿದ್ದೀರಾ? ಡಿಸೆಂಬರ್ ಗೆ ಅಕ್ಷಯ್ ಕುಮಾರ್ 'ಗುಡ್ ನ್ಯೂಸ್' ಕೊಡಲು ರೆಡಿಯಾಗಿದ್ದಾರೆ. ಆದರೆ ಅಕ್ಷಯ್ ಕುಮಾರ್ ಈ ಗುಡ್ ನ್ಯೂಸ್ ರಕ್ಷಿತ್ ಗೆ ಬ್ಯಾಡ್ ನ್ಯೂಸ್ ಆಗುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ಡಿಸೆಂಬರ್ 27ಕ್ಕೆ ಅವನೇ ಶ್ರೀಮನ್ನಾರಾಯಣ
ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಸಿನಿಮಾ ಡಿಸೆಂಬರ್ 27ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಚಿತ್ರಾಭಿಮಾನಿಗಳು ಭಾರಿ ಕಾತರ ಮತ್ತು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ. ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ 'ಅವನೇ ಶ್ರೀಮನ್ನಾರಾಯಣ' ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತೀಯ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ.
'ಕನ್ನಡದಲ್ಲಿ ಶ್ರೀಮನ್ನಾರಾಯಣ ಪ್ರಮೋಟ್ ಮಾಡುವ ಅಗತ್ಯವಿಲ್ಲ' ಎಂದವರಿಗೆ ರಕ್ಷಿತ್ ಹೇಳಿದ್ದೇನು?
ಅದೇ ದಿನ ಅಕ್ಷಯ್ ಗುಡ್ ನ್ಯೂಸ್
ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಗುಡ್ ನ್ಯೂಸ್ ಸಿನಿಮಾ ಕೂಡ ಡಿಸೆಂಬರ್ 27ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೆ ಟ್ರೈಲರ್ ಮೂಲಕ ನಿರೀಕ್ಷೆಯ ಮಟ್ಟವನ್ನು ಹೆಚ್ಚಿಸಿರುವ ಗುಡ್ ನ್ಯೂಸ್, ಅವನೇ ಶ್ರೀಮನ್ನಾರಾಯಣ ಪಾಲಿಗೆ ಬ್ಯಾಡ್ ನ್ಯೂಸ್ ಆಗುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಹಿಂದಿಯಲ್ಲೂ ತೆರೆಗೆ ಬರುತ್ತಿರುವುದರಿಂದ ಶ್ರೀಮನ್ನಾರಾಯಣನ ದರ್ಶನಕ್ಕೆ ಕೊಂಚ ಕಷ್ಟ ಆಗುತ್ತಾ ಎನ್ನುವ ಅನುಮಾನ ಮೂಡಿದೆ.
'ಝೀರೋ' ಮುಂದೆ ಗೆದ್ದು ಬೀಗಿದ್ದ 'ಕೆಜಿಎಫ್'
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ರಿಲೀಸ್ ದಿನವೆ ಬಾಲಿವುಡ್ ನಲ್ಲಿ ಬಹು ನಿರೀಕ್ಷೆಯನ್ನು ಮೂಡಿಸಿದ್ದ ಶಾರುಖ್ ಖಾನ್ ಅಭಿನಯದ 'ಝೀರೋ' ಸಿನಿಮಾ ತೆರೆಗೆ ಬಂದಿತ್ತು. ಬಾಲಿವುಡ್ ನ ದೊಡ್ಡ ಸ್ಟಾರ್ ಶಾರುಖ್ ಮುಂದೆ ಕನ್ನಡದ ಕೆಜಿಎಫ್ ಸಿನಿಮಾ ಗೆದ್ದು ಬೀಗಿತ್ತು. ಹಾಗೆ ಈಗ ಕನ್ನಡದ ಅವನೇ ಶ್ರೀಮನ್ನಾರಾಯಣ ದಿನವೆ ಗುಡ್ ನ್ಯೂಸ್ ರಿಲೀಸ್ ಆಗುತ್ತಿದೆ. ಶ್ರೀಮನ್ನಾರಾಯಾಣನ ಆರ್ಭಟದ ಮುಂದೆ ಅಕ್ಷಯ್ ಕುಮಾರ್ ಗೆ ಗುಡ್ ನ್ಯೂಸ್ ಆಗುವ ಬದಲು ಬ್ಯಾಡ್ ನ್ಯೂಸ್ ಆದರು ಅಚ್ಚರಿ ಇಲ್ಲ.
ಬಹು ದಿನಗಳ ನಂತರ ಫೇಸ್ ಬುಕ್ ಲೈವ್ ಬಂದ ರಕ್ಷಿತ್ ಹೇಳಿದ್ದೇನು?
ಸಧ್ಯದಲ್ಲೇ ಅವನೇ ಶ್ರೀಮನ್ನಾರಾಯಣ ಟ್ರೇಲರ್
ಇದೆ ತಿಂಗಳು 21 ರಿಂದ 25ರ ಒಳಗೆ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಆಗಲಿದೆ. ಇನ್ನು ವಿಶೇಷ ಅಂದರೆ ಈಗಾಗಲೆ ರಿಲೀಸ್ ಆಗಿರುವ ಟ್ರೈಲರ್ ಮತ್ತು ಟೀಸರ್ ಗೆ ಸದ್ಯ ರಿಲೀಸ್ ಆಗಲಿರುವ ಟ್ರೈಲರ್ ಗೂ ಒಂದು ಲಿಂಕ್ ಇರಲಿದೆಯಂತೆ. ಈ ಬಗ್ಗೆ ಕೂಡ ರಕ್ಷಿತ್ ಶೆಟ್ಟಿಯೆ ಹೇಳಿದ್ದಾರೆ. ಹಾಗಾಗಿ ಸದ್ಯ ರಿಲೀಸ್ ಆಗಲಿರುವ ಅವನೇ ಶ್ರೀಮನ್ನಾರಾಯಣ ಟ್ರೈಲರ್ ಮೇಲಿಯೂ ನಿರೀಕ್ಷೆ ಹೆಚ್ಚಾಗಿದೆ.
ಅಕ್ಷಯ್ ಕುಮಾರ್-ರೋಹಿತ್ ಶೆಟ್ಟಿ ನಡುವೆ ಮಾರಾಮಾರಿ: ಜಗಳ ಬಿಡಿಸಿದ ಪೊಲೀಸರು.!