Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅವನೇ ಶ್ರೀಮನ್ನಾರಾಯಣ' ಕಲಿಸಿದ ಪಾಠವೇ '777 ಚಾರ್ಲಿ' ಗೆಲುವು- ರಕ್ಷಿತ್ ಶೆಟ್ಟಿ!
ನಟ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ರಿಲೀಸ್ ಆಗಿದೆ. ರಿಲೀಸ್ ಬಳಿಕ ಸಿನಿಮಾ ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಗಳಿಕೆಯನ್ನು ಕೂಡ ಕಂಡಿದೆ. '777 ಚಾರ್ಲಿ' ರಕ್ಷಿತ್ ಶೆಟ್ಟಿ ಸಿನಿಮಾ ಕೆರಿಯರ್ನಲ್ಲಿ ಹಿಟ್ ಲಿಸ್ಟಿಗೆ ಸೇರಿದ ಮತ್ತೊಂದು ಸಿನಿಮಾ.
ಈ ಸಿನಿಮಾ ರಿಲೀಸ್ಗೂ ಮುನ್ನ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ರಿಲೀಸ್ ಬಳಿಕ ನಿರೀಕ್ಷೆಯನ್ನು ಮುಟ್ಟಿದ್ದು, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಟ್ಟಿಹಾಕಿದೆ. ಸಣ್ಣ ಗ್ಯಾಪ್ ಬಳಿಕ ತೆರೆಗೆ ಬಂದ ರಕ್ಷಿತ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್ನಲ್ಲೂ ಕೂಡ ಗೆದ್ದು ಬೀಗಿದೆ.
25 ದಿನದತ್ತ '777 ಚಾರ್ಲಿ' ರನ್ನಿಂಗ್: 19 ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ದೋಚಿದ್ದೆಷ್ಟು?
ಆದರೆ '777 ಚಾರ್ಲಿ' ಚಿತ್ರಕ್ಕೂ ಮೊದಲು ಬಂದ ಸಿನಿಮಾ 'ಅವನೇ ಶ್ರೀಮನ್ನಾರಾಯಣ'. ಆದರೆ ರಕ್ಷಿತ್ ಶೆಟ್ಟಿ ನಿರೀಕ್ಷೆಯನ್ನು ಮುಟ್ಟಿರಲಿಲ್ಲ ಪ್ರೇಕ್ಷಕರ ನಿರೀಕ್ಷೆಯನ್ನು ಕೂಡ ಹೊಸಿ ಮಾಡಿತ್ತು. ಈ ಬಗ್ಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, ಈ ಗೆಲುವಿಗೆ ಆ ಪಾಠಗಳೇ ಕಾರಣ ಎಂದಿದ್ದಾರೆ.
ಅರ್ಧ ವರ್ಷ ಮುಗಿದೇ ಹೋಯ್ತು: 'ಜೇಮ್ಸ್', 'ಕೆಜಿಎಫ್ 2', '777 ಚಾರ್ಲಿ' ಜೊತೆ ಗೆದ್ದೋರು ಯಾರು?!
ಜನಮನಗೆದ್ದ '777 ಚಾರ್ಲಿ' ಚಾರ್ಲಿ!
2022 ರಲ್ಲಿ ತೆರೆಕಂಡು ಹಿಟ್ ಲಿಸ್ಟ್ ಸೇರಿದ ಸಿನಿಮಾಗಳ ಸಾಲಿಗೆ '777 ಚಾರ್ಲಿ' ಸಿನಿಮಾ ಕೂಡ ಸೇರಿಕೊಂಡಿದೆ. ಈ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಸಿನಿಮಾ ಪ್ಯಾನ್ ಇಂಡಿಯಾ ಟೈಟಲ್ ಅಡಿಯಲ್ಲಿ ರಿಲೀಸ್ ಆಗಿದೆ. ಹಲವು ಭಾಷೆಗಳಲ್ಲಿ ತೆರೆಕಂಡ ಚಾರ್ಲಿಗೆ ಜನ ಮನ್ನಣೆ ಸಿಕ್ಕಿದೆ. ಜನಮನ ಗೆದ್ದ '777 ಚಾರ್ಲಿ' ಬಾಕ್ಸಾಫೀಸ್ನಲ್ಲೂ ಕೂಡ ಕಮಾಲ್ ಮಾಡಿದೆ. 75 ಕೋಟಿಗೂ ರೂ. ಅಧಿಕ ಮೊತ್ತವನ್ನು ಕಲೆ ಹಾಕಿದ ಚಾರ್ಲಿಯ ಗಳಿಕೆ ಮುಂದುವರೆದಿದೆ.
ಮುಗ್ಗರಿಸಿದ 'ಅವನೇ ಶ್ರೀಮನ್ನಾರಾಯಣ'!
ಈ ಹಿಂದೆ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಭಾರೀ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿತ್ತು. ಅಂತೆಯೇ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಕೂಡ ಇತ್ತು. ಹಲವು ದಿನಗಳ ಕಾಲ ಹಲವು ದೊಡ್ಡ ಸೆಟ್ಗಳಲ್ಲಿ ಚಿತ್ರೀಕರಿಸಲಾದ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಬಳಿಕ ನಿರೀಕ್ಷೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಬಾಕ್ಸಾಫೀಸ್ನಲ್ಲಿ ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಸಾಧಿಸಲಿಲ್ಲ.
ಹಿಂದಿನ ಸಿನಿಮಾದ ಪಾಠವೇ ಚಾರ್ಲಿ ಗೆಲುವು!
ಇನ್ನು ಚಾರ್ಲಿ ಯಶಸ್ಸಿನ ಬಗ್ಗೆ ಇತ್ತೀಚೆಗೆ ಮಾತನಾಡಿರುವ ರಕ್ಷಿತ್ ಶೆಟ್ಟಿ, 'ಅವನೇ ಶ್ರೀಮನ್ನಾರಾಯಣ' ನೆನಪಿಸಿಕೊಂಡಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದಿಂದ ಕಲಿತ ಪಾಠ ಇಂದು ಚಾರ್ಲಿ ಆಗಲು ಸಾಧ್ಯವಾಗಿದೆ. ಆ ಚಿತ್ರದ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಇಲ್ಲಿ ಮಾಡಿಲ್ಲ. ಆ ಸಿನಿಮಾ ಸೋಲು ಎಂದು ಒಪ್ಪಿಕೊಳ್ಳುವುದಿಲ್ಲ. ಅದೊಂದು ದೊಡ್ಡ ಪಾಠ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಚಾರ್ಲಿ ಗೆಲುವಿಗೆ ಆ ತಪ್ಪುಗಳೇ ಕಾರಣ!
ಇನ್ನು ಮಾತು ಮುಂದುವರೆಸಿದ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಸೋತಿದೆ ಎಂದು ಹೇಳುವುದಿಲ್ಲ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಮಾಡುವಾಗ ವ್ಯವಹಾರಿಕವಾಗಿ ಎಡವಿದ್ದೇವೆ. ಸರಿಯಾದ ವ್ಯಾಪಾರ ಮಾಡದೆ ಇದ್ದದ್ದು ಸಿನಿಮಾದ ಮೇಲೆ ಪರಿಣಾಮ ಬೀರಿತ್ತು. ಆದರೆ ಅದೇ ತಪ್ಪುಗಳನ್ನು ಈಗ ಚಾರ್ಲಿ ವಿಚಾರದಲ್ಲಿ ಮಾಡಿದ್ಧಾರೆ. ಈ ಸಿನಿಮಾ ಕೂಡ ಈ ಮಟ್ಟಿಗೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಯಶಸ್ಸು ಕಂಡಿದೆ. ಇನ್ನೂ ಅವರ ಮುಂದಿನ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.