Don't Miss!
- News Karnataka Lok Sabha Election 2024: ಏ.26ಕ್ಕೆ ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿ, ಪೈಪೋಟಿ ಬಗ್ಗೆ ಮಾಹಿತಿ
- Lifestyle ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿವಿಡಿ ರೂಪದಲ್ಲಿ ಅವಾರ್ಡ್ ವಿನ್ನಿಂಗ್ ಕನ್ನಡ ಚಿತ್ರಗಳು
ಪ್ರಶಸ್ತಿ ಪುರಸ್ಕೃತ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕ ವರ್ಗವನ್ನು ತಲುಪುತ್ತಿಲ್ಲ. ಚಿತ್ರಮಂದಿರದಲ್ಲಿ ಯಾಕೆ ಬಿಡುಗಡೆಯಾಗಲ್ಲ. ಆ ರೀತಿಯ ಚಿತ್ರಗಳನ್ನು ನೋಡುವುದು ಬಲು ದುರ್ಲಭ ಎಂಬ ಮಾತುಗಳು ಹಾಗೂ ಈ ರೀತಿಯ ಸಿನಿಮಾಗಳ ಇತಿಮಿತಿಗಳ ನಡುವೆ ಟೋಟಲ್ ಕನ್ನಡ ಸಂಸ್ಥೆ ಒಂದಷ್ಟು ಉತ್ತಮ ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಹೊರತರುತ್ತಿದೆ.
ಈ ಬಾರಿ ನಾಲ್ಕು ಕನ್ನಡ ಸಿನಿಮಾಗಳನ್ನು ಡಿವಿಡಿ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಪಿ ಶೇಷಾದ್ರಿ ನಿರ್ದೇಶನದ 'ಬೆಟ್ಟದ ಜೀವ' ಹಾಗೂ 'ಭಾರತ್ ಸ್ಟೋರ್ಸ್', ಗಿರೀಶ್ ಕಾಸರವಳ್ಳಿ ಅವರ 'ಕೂರ್ಮಾವತಾರ', ಕೆಎನ್ ಟಿ ಶಾಸ್ತ್ರಿ ಅವರ 'ಸರಸಮ್ಮನ ಸಮಾಧಿ' ಚಿತ್ರಗಳು ಡಿವಿಡಿ ರೂಪದಲ್ಲಿ ಲಭ್ಯ. [ಪಿ ಶೇಷಾದ್ರಿ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ]
ಡಿವಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಆಗಮಿಸಲಿದ್ದಾರೆ. ಕಾರ್ಯಕ್ರಮವನ್ನು ಹರಿಹರಪುರ ಮಂಜುನಾಥ್ ನಿರೂಪಿಸಲಿದ್ದಾರೆ. ಸ್ಥಳ: ಬಿಪಿ ವಾಡಿಯಾ ಸಭಾಂಗಣ, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-04. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99862 22402 (ಒನ್ಇಂಡಿಯಾ ಕನ್ನಡ)