Don't Miss!
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಯೋಗ್ಯ'ನ ಹೋರಾಟಕ್ಕೆ ಸಂದ ಜಯ: ಹೈದರಾಬಾದ್ ನಲ್ಲಿ ಕನ್ನಡ ಚಿತ್ರ ಪ್ರದರ್ಶನ
ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಚೊಚ್ಚಲ ಸಿನಿಮಾ... ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರಕ್ಕೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಬಿಡುಗಡೆ ಆದ ಒಂಬತ್ತು ದಿನಗಳಲ್ಲಿ ಹತ್ತು ಕೋಟಿ ಕಲೆಕ್ಷನ್ ಮಾಡಿದೆ.
ಭರಪೂರ ಮನರಂಜನೆ ನೀಡುತ್ತಿರುವ 'ಅಯೋಗ್ಯ' ಚಿತ್ರದ ಶೋಗಳು ಕರ್ನಾಟಕದಲ್ಲಿ ಕಮ್ಮಿ ಆಗಿವೆ. ಅದಕ್ಕೆ ಕಾರಣ, ಪರಭಾಷಾ ಚಿತ್ರಗಳ ಹಾವಳಿ. ಇಲ್ಲಿ ತಲೆ ಬಿಸಿ ಇದ್ದದ್ದೇ ಎಂದು ಬೇರೆ ರಾಜ್ಯಗಳಲ್ಲಿ 'ಅಯೋಗ್ಯ' ಚಿತ್ರವನ್ನ ಬಿಡುಗಡೆ ಮಾಡಲು ಚಿತ್ರತಂಡ ಮುಂದಾದಾಗ ಅಲ್ಲಿ ಎದುರಿಸಿದ್ದು ಅವಮಾನ.!
ಹೈದರಾಬಾದ್ ನಲ್ಲಿ ಕೇವಲ ಎರಡು ಶೋಗಳನ್ನು ಪ್ರದರ್ಶನ ಮಾಡಲು ಅಲ್ಲಿನ ಫಿಲ್ಮ್ ಚೇಂಬರ್ ಪರ್ಮಿಶನ್ ಕೊಡ್ಬೇಕಂತೆ.
ಕನ್ನಡ ಚಿತ್ರಗಳಿಗೆ ಅನ್ಯಾಯ: ಕೆರಳಿದ ನೀನಾಸಂ ಸತೀಶ್.!
ಇದನ್ನೆಲ್ಲ ನೋಡಿ ಬೇಸೆತ್ತ ಚಿತ್ರತಂಡ, ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಿತು. ಸಮಸ್ಯೆ ಅರಿತ ವಾಣಿಜ್ಯ ಮಂಡಳಿ ಅಧ್ಯಕ್ಷರು, ತೆಲುಗಿನ ಫಿಲ್ಮ್ ಚೇಂಬರ್ ಗೆ ಫೋನ್ ಮಾಡಿ ವಿವಾದವನ್ನ ಬಗೆಹರಿಸಿದರು.
ಬಾಕ್ಸ್ ಆಫೀಸ್ ನಲ್ಲಿ 'ಅಯೋಗ್ಯ'ನ ನಾಗಾಲೋಟ: 10 ಕೋಟಿ ಕ್ಲಬ್ ಸೇರಿದ ಚಿತ್ರ
ಪಿ.ವಿ.ಆರ್ ನಲ್ಲಿ 'ಅಯೋಗ್ಯ'ನಿಗೆ ಒಂಬತ್ತು ಶೋ ನೀಡಲು ಅಲ್ಲಿನ ವಾಣಿಜ್ಯ ಮಂಡಳಿ ಒಪ್ಪಿಕೊಂಡಿದ್ಯಂತೆ. ಅಲ್ಲದೇ, 10-15 ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 'ಅಯೋಗ್ಯ' ಪ್ರದರ್ಶನ ಮಾಡುವುದಾಗಿ ಅಲ್ಲಿನ ವಾಣಿಜ್ಯ ಮಂಡಳಿ ಭರವಸೆ ನೀಡಿದ್ಯಂತೆ.
ವಿಮರ್ಶೆ : ಈ ಮಂಡ್ಯದ ಗಂಡು ಅಯೋಗ್ಯ ಅಲ್ಲ 'ಯೋಗ್ಯ'
''ಇದು ನಮ್ಮ ಗೆಲುವು. ಕನ್ನಡಿಗರ ಗೆಲುವು. ನಮ್ಮ ವಾಣಿಜ್ಯ ಮಂಡಳಿ ಅಧ್ಯಕ್ಷರು ಅಲ್ಲಿಯವರ ಬಳಿ ಮಾತನಾಡಿದರು. ಅವರು ನಮಗೆ ಶೋ ಕೊಡಲು ಒಪ್ಪಿಕೊಂಡಿದ್ದಾರೆ'' ಎಂದು ಸಂತಸದಿಂದಲೇ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ನಿರ್ದೇಶಕ ಮಹೇಶ್ ಮಾತನಾಡಿದರು.
ಒಟ್ನಲ್ಲಿ, 'ಅಯೋಗ್ಯ'ನಿಗೆ ಆಗುತ್ತಿದ್ದ ಅನ್ಯಾಯವನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಡೆದಿದೆ.