Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವಕಾಶ ಕೇಳಿ ಹೋಗಿದ್ದ 'ಅಯೋಗ್ಯ' ಮಹೇಶ್ಗೆ ಸಾಹಿತಿ ಹೇಳಿದ್ದು ಇಷ್ಟ ಆಗಲಿಲ್ಲ!
ಪಂಚಲಿಂಗೇಶ್ವರ ಬಸ್ ಹತ್ಕೊಂಡು ಬೆಂಗಳೂರಿಗೆ ಬಂದ ಮಹೇಶ್ ಕುಮಾರ್ ಇಂದು ಕನ್ನಡ ಚಿತ್ರರಂಗದಲ್ಲಿ ಒಬ್ಬ ಯಶಸ್ವಿ ನಿರ್ದೇಶಕನಾಗಿದ್ದು, ಸ್ಟಾರ್ ನಟರ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
Recommended Video
ಸತೀಶ್ ನೀನಾಸಂ ಜೊತೆ 'ಅಯೋಗ್ಯ' ಎಂಬ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಕೊಟ್ಟ ಮಹೇಶ್ ಈಗ ಶ್ರೀಮುರಳಿ ಜೊತೆ 'ಮದಗಜ' ಸಿನಿಮಾ ಮಾಡ್ತಿದ್ದಾರೆ. ಈಗ ಸ್ಟಾರ್ ನಿರ್ದೇಶಕ ಎನಿಸಿಕೊಳ್ಳುತ್ತಿರುವ ಮಹೇಶ್, ಗಾಂಧಿನಗರದಲ್ಲಿ ಹತ್ತು ವರ್ಷಕ್ಕು ಹೆಚ್ಚು ಕಾಲ ಕಷ್ಟಪಟ್ಟು, ಊಟಕ್ಕೆ ಇಲ್ಲದೆ ಪರದಾಡಿ, ಪುಟ್ಪಾತ್ನಲ್ಲಿ ಮಲಗಿದ್ದರು ಅಂದ್ರೆ ನಂಬಲೇಬೇಕು. ಈ ಕುರಿತು ಸ್ವತಃ ಮಹೇಶ್ ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಸಿನಿಮಾ ನಿರ್ದೇಶಕ ಆಗ್ಬೇಕು ಆಸೆ
ಎಸ್ಎಸ್ಎಲ್ಸಿ ಫೇಲ್ ಆಗಿ ನಂತರ ಮತ್ತೆ ಪರೀಕ್ಷೆ ಕಟ್ಟಿ ಪಾಸ್ ಆಗಿ, ಆಮೇಲೆ ಡಿಪ್ಲೋಮಾ ಮಾಡಿ, ಸಕ್ಕರೆ ಕಂಪನಿಯಲ್ಲಿ ಕೆಲಸಕ್ಕೆ ಸಹ ಸೇರಿಕೊಂಡಿದ್ದ ಮಹೇಶ್ಗೆ ಸಿನಿಮಾ ನಿರ್ದೇಶಕ ಆಗ್ಬೇಕು ಎಂಬ ಆಸೆ ಬಿಟ್ಟುಬಿಡದಂತೆ ಕಾಡುತ್ತದೆ. ಈ ಉದ್ದೇಶದಿಂದ ಮನೆಯವರಿಗೆ ಇಷ್ಟ ಇಲ್ಲ ಅಂದ್ರೂ ಒಪ್ಪಿಸಿ ಒಂದು ದಿನ ರಾತ್ರಿ 5 ಗಂಟೆಗೆ ಪಂಚಲಿಂಗೇಶ್ವರ ಬಸ್ ಹಿಡಿದು ಬೆಂಗಳೂರಿಗೆ ಬರ್ತಾರೆ ಮಹೇಶ್ ಕುಮಾರ್.
'ಪ್ರೇಮ್ ಕಹಾನಿ' ಸೋಲು ಕಲಿಸಿದ ಬದುಕಿನ ಪಾಠ: 'ಕಾರ್ ಇದೆ, ಪೆಟ್ರೋಲ್ಗೆ ದುಡ್ಡಿಲ್ಲ'
ಖ್ಯಾತ ಸಾಹಿತಿ ಮನೆಗೆ ಹೋಗ್ತಾರೆ
ಬೆಂಗಳೂರಿಗೆ ಬಂದ ಬಳಿಕ (ತರಂಗದಲ್ಲಿ ವಿಳಾಸ ಸಂಗ್ರಹಿಸಿ) ಮಲ್ಲೇಶ್ವರಂದಲ್ಲಿರುವ ಖ್ಯಾತ ಸಾಹಿತಿಯೊಬ್ಬರ ಮನೆಗೆ ಮಹೇಶ್ ಹೋಗ್ತಾರೆ. ಅಂದಿನ ಸಮಯಕ್ಕೆ ಎಲ್ಲ ಸೂಪರ್ ಹಿಟ್ ಹಾಡುಗಳಿಗೆ ಇವರೇ ಸಾಹಿತ್ಯ ಬರೆಯುತ್ತಿದ್ದರು. ಅವರನ್ನು ಭೇಟಿ ಮಾಡಿದ ''ಸಹಾಯಕ ನಿರ್ದೇಶಕನಾಗಬೇಕು, ಮಂಡ್ಯದಿಂದ ಬಂದಿದ್ದೇನೆ'' ಎಂದು ಕೇಳಿಕೊಳ್ಳುತ್ತಾರೆ. ಆದ್ರೆ, ಆ ಸಾಹಿತಿ ಒಂದು ಒಪ್ಪಂದವನ್ನು ಮಹೇಶ್ ಮುಂದಿಟ್ಟರಂತೆ.
ಎರಡು ವರ್ಷ ಕೆಲಸ ಮಾಡು
ಅವಕಾಶ ಕೇಳಿ ಬಂದ ಮಹೇಶ್ ಮುಂದೆ ಆ ಸಾಹಿತಿ ಒಂದು ಒಪ್ಪಂದ ಮುಂದಿಡುತ್ತಾರೆ. ಎರಡು ವರ್ಷಗಳ ಕಾಲ ನನ್ನ ಮನೆಯಲ್ಲಿ ಕೆಲಸ ಮಾಡ್ಕೊಂಡು ಇರಬೇಕು, ನನಗೆ ಸಹಾಯಕನಾಗಿ ಇರಬೇಕು, ಮನೆ ಕೆಲಸ ಮಾಡಬೇಕು, ತರಕಾರಿ ಹಾಗೂ ಇತರೆ ವಸ್ತುಗಳು ತಂದು ಕೊಡಬೇಕು. ತಿಂಗಳಿಗೆ 5 ಸಾವಿರ ಸಂಬಳನೂ ಕೊಡ್ತೀನಿ, ಎರಡು ವರ್ಷದ ಆದ್ಮೇಲೆ ಒಬ್ಬ ಡೈರೆಕ್ಟರ್ನ ಪರಿಚಯ ಮಾಡಿಕೊಡ್ತೀನಿ ಅಂದರು.
'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?
ಬೇಡ ಎಂದು ಹಿಂತಿರುಗಿದ ಮಹೇಶ್
ಆ ಸಾಹಿತಿ ಹೇಳಿದಂತೆ ಒಪ್ಪಿಕೊಳ್ಳಲು ನನಗೆ ಇಷ್ಟ ಇರಲಿಲ್ಲ. ಎರಡು ವರ್ಷ ಕೆಲಸ ಮಾಡಿದ್ಮೇಲೆ ಪರಿಚಯ ಮಾಡಿಕೊಟ್ಟಿಲ್ಲ ಅಂದ್ರೆ ಅಥವಾ ಎರಡು ವರ್ಷ ಸುಮ್ಮನೆ ವ್ಯರ್ಥ ಆಗಿಬಿಡುತ್ತೆ ಎಂಬ ಗೊಂದಲದಿಂದಲೇ ಅವರ ಬಳಿ ಹೋಗಲಿಲ್ಲ. ನಂತರ ಕೆಲವು ದಿನ ಬೆಂಗಳೂರಿನಲ್ಲಿ ಸುತ್ತಾಡಿದ ಬಳಿಕ ಮೋಟರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರಂತೆ.
ನಿರ್ಮಾಪಕರೊಬ್ಬರು ಪರಿಚಯ
ಹೀಗೆ ಒಂದು ದಿನ ಆ ಶೋ ರೂಂನಲ್ಲಿ ಬೈಕ್ ಖರೀದಿ ಮಾಡಲು ಬಂದ ನಿರ್ಮಾಪಕರೊಬ್ಬರು (ಅವಿನಾಶ್ ಭಾರದ್ವಜ್) ಪರಿಚಯ ಆದರು. ನನ್ನ ಬಗ್ಗೆ ಹೇಳಿಕೊಂಡೆ, ಬಳಿಕ ಅವರು ನಾನೊಂದು ಸಿನಿಮಾ ಮಾಡ್ತಿದ್ದೀನಿ, ಮುಹೂರ್ತ ದಿನ ಬಾ ಎಂದು ಹೇಳಿ ನಂಬರ್ ಕೊಟ್ಟರು ಹೋದರು. ಅಲ್ಲಿಗೆ, ಹೋದೆ, ಡೈರೆಕ್ಟರ್ ಪರಿಚಯ ಸಹ ಮಾಡಿಕೊಟ್ಟರು ಜೊತೆಯಲ್ಲಿರುವ ಎಂದರು. ಕ್ಲಾಪ್ ಬಾಯ್ ಆಗಿ ಸೇರಿಸಿಕೊಂಡರು. ಆದ್ರೆ, 20 ದಿನ ಆದ್ಮೇಲೆ ಆ ಸಿನಿಮಾ ನಿಂತು ಹೋಯ್ತು. ಅಷ್ಟೊತ್ತಿಗೆ ನಾನು ಸಂಬಂಧಿಕರ ಮನೆ ಬಿಟ್ಟು ಗಾಂಧಿನಗರದಲ್ಲಿ ದಿನ ಕಳೆಯುತ್ತಿದ್ದೆ. ರಾತ್ರಿ ಪುಟ್ಪಾತ್ನಲ್ಲಿ ಮಲಗುತ್ತಿದ್ದೆ'' ಎಂದು ಹಳೆಯ ನೆನಪು ಬಿಚ್ಚಿಟ್ಟಿದ್ದಾರೆ. (ಕಥೆ ಮುಂದುವರಿಯುತ್ತದೆ)