ಹಿರಿಯ ನಟಿ ಬಿ ಜಯಶ್ರೀಗೂ 'ಮೀಟೂ' ಅನುಭವ ಆಗಿತ್ತಂತೆ.!
ಸ್ಯಾಂಡಲ್ ವುಡ್ ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಮೀಟೂ ಬಗ್ಗೆ ಹಿರಿಯ ನಟಿ ಬಿ ಜಯಶ್ರೀ ಮಾತನಾಡಿದ್ದಾರೆ. 'ನನಗೂ ಮೀಟೂ ಅನುಭವ ಆಗಿತ್ತು' ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. 'ವಿಸ್ಮಯ' ಚಿತ್ರೀಕರಣದ ವೇಳೆ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಸರ್ಜಾ ಯತ್ನಿಸಿದ್ದರು ಎಂದು ಆರೋಪ ಮಾಡಿದ್ದರು.
ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಇಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಿರಬೇಕಾದರೇ, ಹಿರಿಯ ನಟ ಜಯಶ್ರೀ 'ಮೀಟೂ' ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ.

''ನನಗೆ ಮೀಟೂ ಅನುಭವ ಆಗಿದೆ, ಅದು ನನಗೆ ಗೊತ್ತು. ನಿಮ್ಮ ಹತ್ರ ನಾನು ಯಾಕೆ ಹೇಳಿಕೊಳ್ಳಬೇಕು. ಅದು ತಪ್ಪು ಎಂಬುದು ನನ್ನ ಅಭಿಪ್ರಾಯ'' ಎಂದಿದ್ದಾರೆ.
'ಇವತ್ತು ಫೇಸ್ ಬುಕ್ ಇದೆ, ಸೋಶಿಯಲ್ ಮೀಡಿಯಾ ಇದೆ, ಅಭಿವ್ಯಕ್ತಿ ಸ್ವತಂತ್ರ ಇದೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಅದಕ್ಕೂ ಲಕ್ಷ್ಮಣ ರೇಖೆ ಇದೆ. 'ಕಣ್ಣಾಮುಚ್ಚೆ ಕಾಡೇಗೂಡೆ' ಪುಸ್ತಕದಲ್ಲಿ ನನ್ನ ಮೇಲೆ ಆದ ಅನುಭವವನ್ನ ನಾನು ಬರೆದಿದ್ದೇನೆ. ಇದರಿಂದ ನ್ಯಾಯ ಸಿಗಬೇಕು ಎಂದಿಲ್ಲ. ಬಟ್, ಬೇರೆಯವರು ಎಚ್ಚೆತ್ತುಕೊಳ್ಳಲಿ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











