Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಡಿಯೂರಪ್ಪ' ಚಿತ್ರದ ಕುತೂಹಲಕ್ಕೆ ತೆರೆ ಎಳೆದ ಮಾಜಿ ಸಿಎಂ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಸಿನಿಮಾ ಬರಲಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಅಲ್ಲದೆ ಈ ಸಿನಿಮಾದಲ್ಲಿ ನಟ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಅಂತ ನಿನ್ನೆಯಿಂದ ಸಿಕ್ಕಾಪಟ್ಟೆ ಟಾಕ್ ಶುರುವಾಗಿತ್ತು. ಈಗ ಈ ಚಿತ್ರದ ಬಗ್ಗೆ ಸ್ವತಃ ಯಡಿಯೂರಪ್ಪ ಅವರು ಮಾತನಾಡಿದ್ದಾರೆ.
ಯಡಿಯೂರಪ್ಪ ತಮ್ಮ ಜೀವನದ ಬಗ್ಗೆ ಸಿನಿಮಾ ಬರುವ ವಿಷಯದ ಬಗ್ಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಅವರು-ಇವರು ಹೇಳುತ್ತಿದ್ದ ಕಥೆಗಳಿಗೆ ಬ್ರೇಕ್ ಬಿದ್ದಿದೆ. ಅಷ್ಟಕ್ಕೂ, ಯಡಿಯೂರಪ್ಪ ಅವರು ಏನ್ ಹೇಳಿದ್ರು? ಸಿನಿಮಾ ಬರುತ್ತಾ ಅಥವಾ ಇಲ್ವೋ? ಮುಂದೆ ಓದಿ...
ನನ್ನ ಗಮನಕ್ಕೆ ಬಂದಿದೆ
''ನನ್ನ ಬಗ್ಗೆ ಸಿನಿಮಾ ಬರಲಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಈ ವಿಷಯ ನನ್ನ ಗಮನಕ್ಕೆ ಬಂದಿದೆ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಒತ್ತಾಯ ಮಾಡುತ್ತಿದ್ದಾರೆ
''ನಿಮ್ಮ ಬಗ್ಗೆ ಸಿನಿಮಾ ಮಾಡಲು ಅವಕಾಶ ಕೊಡಿ ಅಂತ ಈಗಾಗಲೇ ಕೆಲವರು ನನ್ನ ಬಳಿ ಬಂದು ಒತ್ತಾಯ ಮಾಡಿದ್ದಾರೆ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.
ಸಿನಿಮಾದ ಅಗತ್ಯ ಇಲ್ಲ
''ನನ್ನ ಬಗ್ಗೆ ಸಿನಿಮಾ ಬರುವ ಅಗತ್ಯ ನನಗೆ ಇಲ್ಲ. ಅಲ್ಲದೆ ಸಿನಿಮಾದ ಬಗ್ಗೆ ನನಗೆ ಆಸಕ್ತಿಯೂ ಇಲ್ಲ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.
ಒಪ್ಪಿಗೆ ಕೊಡುವುದಿಲ್ಲ
''ನನ್ನ ಬಗ್ಗೆ ಸಿನಿಮಾ ಮಾಡುವುದಕ್ಕೆ ಯಾರಿಗೂ ಒಪ್ಪಿಗೆ ಕೊಡುವುದಿಲ್ಲ. ಅಲ್ಲದೆ ಈಗ ನಾವು ಚುನಾವಣೆಯ ತಯಾರಿಯಲ್ಲಿ ಇದ್ದೇವೆ.'' - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.
ನಿರ್ದೇಶಕರ ಮಾತು
ನಿರ್ದೇಶಕ ಎಂ.ಎಸ್.ರಮೇಶ್ ಈ ಚಿತ್ರದ ಬಗ್ಗೆ ಹಬ್ಬಿದ್ದು 'ಸುಳ್ಳು ಸುದ್ದಿ' ಅಂತ 'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಮಾತನಾಡಿ ತಿಳಿಸಿದ್ದರು.
ಗಾಸಿಪ್ ಅಷ್ಟೇ
ಈ ಮೂಲಕ ಯಡಿಯೂರಪ್ಪ ಅವರ ಬಗ್ಗೆ ಸಿನಿಮಾ ಬರಲಿದೆ ಎಂಬ ಸುದ್ದಿ ಕೇವಲ ಗಾಸಿಪ್ ಅಷ್ಟೇ. ನಿರ್ದೇಶಕ ಎಂ.ಎಸ್.ರಮೇಶ್ ಮತ್ತು ಯಡಿಯೂರಪ್ಪ ಇಬ್ಬರು ಈ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದು, ಇಲ್ಲಿಗೆ ಇದು ಮುಗಿದ ಅಧ್ಯಾಯ.