Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜಮೌಳಿ' ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?
'ಬಾಹುಬಲಿ' ಚಿತ್ರದ ಮೆಗಾ ಸಕ್ಸಸ್ ನಂತರ ನಿರ್ದೇಶಕ ರಾಜಮೌಳಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಇಡೀ ಭಾರತ ಚಿತ್ರರಂಗವನ್ನ ಕಾಡುತ್ತಿತ್ತು. ಇದೀಗ, ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ರಾಜಮೌಳಿ ಮುಂದಿನ ಸಿನಿಮಾ ಘೋಷಣೆ ಆಗಿದೆ.
ಡಾರ್ಲಿಂಗ್ ಪ್ರಭಾಸ್ ಜೊತೆ ಸುಮಾರು 5 ವರ್ಷ ಸಿನಿಮಾ ಮಾಡಿ ಚಿತ್ರಜಗತ್ತನ್ನೇ ಗೆದ್ದ ರಾಜಮೌಳಿ, ಈಗ ಯಾವ ನಟನ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಚರ್ಚೆಗೆ ಕೂಡ ಉತ್ತರ ಸಿಕ್ಕಿದೆ.
ಹಾಗಿದ್ರೆ, 'ಬಾಹುಬಲಿ' ಚಿತ್ರದ ನಂತರ ಸ್ಟಾರ್ ಮೇಕರ್ ರಾಜಮೌಳಿಯ ಮುಂದಿನ ಸಿನಿಮಾ ಯಾವುದು ಮತ್ತು ಯಾವ ನಟನ ಜೊತೆ ಎಂದು ಮುಂದೆ ಓದಿ.....
ಸಾಮಾಜಿಕ ಕುರಿತು ಸಿನಿಮಾ
'ಬಾಹುಬಲಿ' ಅಂತಹ ಸಿನಿಮಾ ಮಾಡಿ ಸಿನಿಪ್ರಪಂಚದ ಗಮನ ಸೆಳೆದ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನ ಸಾಮಾಜಿಕ ಕಾಳಜಿಯ ಕುರಿತು ಸಿನಿಮಾ ಮಾಡಲಿದ್ದಾರೆ.
'ಪದ್ಮಾವತಿ' ಟ್ರೈಲರ್ ನೋಡಿ ರಾಜಮೌಳಿ ಕಾಮೆಂಟ್ ಮಾಡಿದ್ದು ಯಾರಿಗೆ?
ದಾನಯ್ಯ ನಿರ್ಮಾಪಕ
ರಾಜಮೌಳಿ ತಮ್ಮ ಮುಂದಿನ ಚಿತ್ರದ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ್ದು, ''ನನ್ನ ಮುಂದಿನ ಸಿನಿಮಾ ಯಾವ ಭಾಷೆ ಮತ್ತು ಯಾವ ನಟನ ಜೊತೆ ಮಾಡಲಿದ್ದೇನೆ ಎಂಬುದು ಗೊತ್ತಿಲ್ಲ. ಆದ್ರೆ, ದಾನಯ್ಯ ಅವರು ಆ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ'' ಎಂದು ಬಾಹುಬಲಿ ನಿರ್ದೇಶಕ ಸ್ಪಷ್ಟಪಡಿಸಿದ್ದಾರೆ.
ಆಸ್ಕರ್ ಗೆ 'ಬಾಹುಬಲಿ' ಆಯ್ಕೆಯಾಗದ ಬಗ್ಗೆ ರಾಜಮೌಳಿ ಹೇಳಿದ್ದೇ ಬೇರೆ.!
ಪ್ರನ್ಸ್ ಮಹೇಶ್ ಜೊತೆ ಸಿನಿಮಾ
ನಿರ್ಮಾಪಕ ದಾನಯ್ಯ ಅವರ ಜೊತೆ ಮುಂದಿನ ಸಿನಿಮಾ ಘೋಷಣೆ ಮಾಡಿಕೊಂಡಿರುವ ರಾಜಮೌಳಿ, ಅದರ ಬೆನ್ನಲ್ಲೆ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ. ಈ ಚಿತ್ರವನ್ನ ಕೆ.ಎಲ್ ನಾರಾಯಣ್ ನಿರ್ಮಾಣ ಮಾಡಲಿದ್ದು, 2019ಕ್ಕೆ ಶುರುವಾಗಬಹುದು ಎನ್ನಲಾಗಿದೆ.
'ಬಾಹುಬಲಿ' ಸ್ಟಂಟ್ ಕಾಪಿ ಮಾಡಲು ಹೋಗಿ ಪ್ರಾಣ ಬಿಟ್ಟ ಉದ್ಯಮಿ.!
ರಾಜಮೌಳಿ ಮುಂದಿನ ಚಿತ್ರಕ್ಕೆ ನಾಯಕ ಯಾರು?
ಸದ್ಯ, ಕಥೆ ಮತ್ತು ನಿರ್ಮಾಪಕರನ್ನ ಅಂತಿಮಗೊಳಿಸಿಕೊಂಡಿರುವ ರಾಜಮೌಳಿ ನಾಯಕ ಯಾರಾಗಬಹುದು ಎಂಬ ಸಣ್ಣ ಸುಳಿವು ಕೂಡ ಬಿಟ್ಟುಕೊಟ್ಟಿಲ್ಲ. ಈ ಅವಕಾಶ ಯಾರಿಗೆ ಸಿಗುತ್ತೆ ಅಂತ ಕಾದುನೋಡಬೇಕಿದೆ.
ದಾನಯ್ಯ ಯಾರು?
ತೆಲುಗಿನ ಸ್ಟಾರ್ ನಿರ್ಮಾಪಕರಾಗಿರುವ ದಾನಯ್ಯ ಈ ಹಿಂದೆ 'ಬ್ರೂಸ್ ಲೀ', 'ನಾಯಕ್', 'ದೇಶಮುದುರು', 'ಜುಲಾಯ್', 'ಓಯ್', 'ದುಬಾಯ್ ಶೀನು' ಚಿತ್ರಗಳು ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಸದ್ಯ, ಮಹೇಶ್ ಬಾಬು ಅಭಿನಯಿಸುತ್ತಿರುವ 'ಭರತ್ ಅನೆ ನೇನು' ಚಿತ್ರಕ್ಕೂ ಇವರೇ ನಿರ್ಮಾಪಕರು.
'ಮಹಾಭಾರತ' ಚಿತ್ರ ಸದ್ಯಕ್ಕಿಲ್ಲ
'ಬಾಹುಬಲಿ' ಸಕ್ಸಸ್ ನಂತರ ರಾಜಮೌಳಿ 'ಮಹಾಭಾರತ' ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದ್ರೆ, ಈಗಿನ ಸಮಯದಲ್ಲಿ ಈ ಸಿನಿಮಾ ಮಾಡುವುದಿಲ್ಲ ಎಂದು ಸ್ವತಃ ರಾಜಮೌಳಿ ಅವರೇ ಹೇಳಿಕೊಂಡಿದ್ದಾರೆ.