Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಸ್ತ್ ಮಜಾ ನೀಡುವ 'ಬಡ್ಡಿ ಮಗನ್ ಲೈಫು' ಟ್ರೇಲರ್
''ಕೈ ಕಾಲ್ ಮುರಿದು ದೇವಸ್ಥಾನದ ಮುಂದೆ ಕೂರಿಸ್ತಿನಿ.. ಬಿಕ್ಷೆ ಬೇಡದರೂ ಬಡ್ಡಿ ಕಟ್ಲಿ..'' ಇದು ಬಡ್ಡಿ ದುಡ್ಡು ನೀಡುವ ಬಡ್ಡಿ ಸೀನಪ್ಪ ಹೇಳುವ ಡೈಲಾಗ್.
'ಬಡ್ಡಿ ಮಗನ್ ಲೈಫು' ಸಿನಿಮಾ ಟ್ರೇಲರ್ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಟ್ರೇಲರ್ ಗೆ ಯೂಟ್ಯೂಬ್ ನಲ್ಲಿ ಮೆಚ್ಚುಗೆ ಮಾತುಗಳು ಸಿಗುತ್ತಿವೆ. ಚಿತ್ರರಂಗದ ಅನೇಕರು ಈ ಪ್ರತಿಭಾವಂತ ಹುಡುಗರ ಪ್ರಯತ್ನವನ್ನು ಪ್ರೊತ್ಸಾಹಿಸುತ್ತಿದ್ದಾರೆ.
ವರ್ಷಾಂತ್ಯದಲ್ಲಿ ಮೂರು ದೊಡ್ಡ ಸಿನಿಮಾಗಳಿಂದ ಸಿಹಿ ಸುದ್ದಿ
ಮೈಸೂರಿನ ಪ್ರತಿಭಾವಂತ ಹುಡುಗರು ಸೇರಿ ಈ ಸಿನಿಮಾ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಇಂಟ್ರೆಸ್ಟಿಂಗ್ ಆಗಿದೆ. ಪ್ರಮುಖವಾಗಿ ಲವಿತ್ ಅವರ ಕ್ಯಾಮರಾ ವರ್ಕ್ ತುಂಬ ಚೆನ್ನಾಗಿದೆ. ಟ್ರೇಲರ್, ಸಿನಿಮಾದ ಮೇಲೆ ಭರವಸೆ ಹುಟ್ಟಿಸಿದೆ. ಪವನ್ ಪ್ರಸಾದ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
ಹೊಸತನದಿಂದ ಟ್ರೇಲರ್ ಕೂಡಿದೆ. ಸಿನಿಮಾದ ಪಾತ್ರಗಳನ್ನು, ಸನ್ನಿವೇಶಗಳನ್ನು ಪರಿಚಯಿಸಿರುವ ರೀತಿ ಎಲ್ಲರ ಗಮನ ಸೆಳೆದಿದೆ. ಟ್ರೇಲರ್ ತುಂಬ ನೀಟ್ ಆಗಿದೆ. ಬಲ ರಾಜ್ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ರಜನಿಕಾಂತ್ ಸಿನಿಮಾದಲ್ಲಿ ನಟಿಸಿದ್ದಾರೆ.
'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ
'ಲೂಸಿಯಾ' ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈಗಾಗಲೇ ನವೀನ್ ಸಜ್ಜು ಹಾಡಿರುವ 'ಏನ್ ಚಂದಾನೋ ತಕೋ..' ಹಾಡು ಸೂಪರ್ ಹಿಟ್ ಆಗಿದೆ.
ಪವನ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಪ್ರಾಮಾಣಿಕ ಪ್ರಯತ್ನದಲ್ಲಿ ಚಿತ್ರತಂಡ ಗೆದ್ದಿದೆ. ಡಿಸೆಂಬರ್ 27ಕ್ಕೆ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಜನರ ಪ್ರತಿಕ್ರಿಯೆಗಾಗಿ ಚಿತ್ರತಂಡ ಕಾಯುತ್ತಿದೆ.