Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಹುಪರಾಕ್' ನಿರ್ದೇಶಕ ಸುನಿ ಸಂದರ್ಶನ
ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಬಳಿಕ ಸುನಿ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರ ಬಹುಪರಾಕ್. ಸಿಂಪಲ್ ಚಿತ್ರ ಡೈಲಾಗ್ ಪ್ರಧಾನವಾಗಿತ್ತು. ಆದರೆ ಈ ಚಿತ್ರ ಕಂಪ್ಲೀಟ್ ಡಿಫರೆಂಟ್ ಅಂತಾರೆ ಸುನಿ.
ಸುವಿನ್ ಸಿನಿಮಾಸ್ ಲಾಂಛನದಲ್ಲಿ ಹೇಮಂತ್, ಸುರೇಶ್ ಭೈರಸಂದ್ರ ಹಾಗೂ ಅಭಿ ನಿರ್ಮಿಸಿರುವ, ಉಮೇಶ್ ಬಣಕಾರ್ ಅರ್ಪಿಸುವ 'ಬಹುಪರಾಕ್' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಸುನಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದಾರೆ. ಮೇಘನಾರಾಜ್, ಭಾವನಾರಾವ್(ಗಾಳಿಪಟ), ಸುಂದರರಾಜ್, ಪ್ರಮಿಳಾಜೋಷಾಯಿ, ಮಾನಸ ಜೋಷಿ, ಸುಕೃತ ವಾಗ್ಲೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬಿ.ಜೆ.ಭರತ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ. ಸಚಿನ್ ಸಂಕಲನ, ಮಾಸ್ಮಾದ ಸಾಹಸ ನಿರ್ದೇಶನ ಬಹುಪರಾಕ್' ಚಿತ್ರಕ್ಕಿದೆ. ಬನ್ನಿ ಈ ಚಿತ್ರದ ಕುರಿತು ಸುನಿ ಏನು ಹೇಳುತ್ತಾರೆ ನೋಡೋಣ.
ಈ ರೀತಿಯ ಚಿತ್ರಕಥೆಗಳಿಗೆ ಡಿಮ್ಯಾಂಡ್ ಇದೆಯಾ?
ಡಿಮ್ಯಾಂಡ್ ಅಂಡ್ ಸಪ್ಲೈ ಎಂಬ ಕಮರ್ಷಿಯಲ್ ವಿಚಾರಕ್ಕೆ ಬಂದಾಗ ಅದು ರೀಮೇಕ್ ಚಿತ್ರಗಳಿಗೆ ಅನ್ವಯಿಸುತ್ತದೆ. ನಾವು ಯಾವಾಗ ಸ್ವಮೇಕ್ ಮಾಡಬೇಕು ಎಂದು ಹೊರಡುತ್ತೇವೋ ಆಗ ಏನಾದರೂ ಹೊಸತನ್ನು ಕೊಡಲು ಬಯಸುತ್ತೇವೆ. ಅದು ನಮ್ಮ ಅಹಂಕಾರವೋ ಏನೋ ಏನಾದರು ಮಾಡಲೇಬೇಕು ಎಂಬ ಛಲ ಬಂದುಬಿಡುತ್ತದೆ.
ಮಾಸ್, ಕ್ಲಾಸ್ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ
ಇಲ್ಲಿ ಏನೆಂದರೆ ಕಮರ್ಷಿಯಲ್ ಆಗಿ ಮಾಡಿದ್ದೇವೆ. ಮಾಸ್, ಕ್ಲಾಸ್, ಕಾಲೇಜಿ ವಿದ್ಯಾರ್ಥಿಗಳಿಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ಇಲ್ಲಿ ಮೂರು ಶೇಡ್ ಗಳುಳ್ಲ ಕಥೆಯಾದರೂ ಚಿತ್ರಮಂದಿರದಿಂದ ಹೊರಬಂದಾಗ ಒಂದೇ ಕಥೆಯಂತೆ ಭಾಸವಾಗುತ್ತದೆ.
ಇನ್ನು ಮುಂದಿನ ನನ್ನ ಚಿತ್ರಗಳಲ್ಲಿ ಮೆಸೇಜ್ ಕೊಡುವ ಅವಶ್ಯಕತೆ ಇರುವುದಿಲ್ಲ
ಇನ್ನು ಮುಂದಿನ ನನ್ನ ಚಿತ್ರಗಳಲ್ಲಿ ಮೆಸೇಜ್ ಕೊಡುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಸಾಕಷ್ಟು ಮೆಸೇಜ್ ಗಳನ್ನು ಈ ಚಿತ್ರದಲ್ಲೇ ಕೊಟ್ಟು ಬಿಟ್ಟಿದ್ದೇನೆ. ಹೇಳಬೇಕು ಎಂಬುದನ್ನು ಗಾಡವಾಗಿ ಹೇಳಿದ್ದೇವೆ.
ಕರ್ನಾಟಕ ಬಿಟ್ಟು ಬೇರೆಲ್ಲೂ ಚಿತ್ರೀಕರಿಸಿಲ್ಲ
ಗಜೇಂದ್ರಗಡ, ಬಾದಾಮಿ, ಬಾಗಲಕೋಟೆ, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದೇವೆ. ಕರ್ನಾಟಕ ಬಿಟ್ಟು ಬೇರೆಲ್ಲೂ ಚಿತ್ರೀಕರಿಸಿಲ್ಲ.
ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದ್ದೇವೆ
ಚಿತ್ರಕ್ಕೆ ನಾನು ಮತ್ತು ಕನ್ನಡಪ್ರಭ ಹರಿ ಅವರು ಬರೆದಿದ್ದೇವೆ. ಉತ್ತರ ಕರ್ನಾಟಕ ಭಾಷೆಯಲ್ಲಿ ಡೈಲಾಗ್ಸ್ ಬರುತ್ತವೆ. ನಾನು ಬರೆದಂತಹ ಡೈಲಾಗ್ಸನ್ನು ಅವರು ಉತ್ತರ ಕರ್ನಾಟಕ ಭಾಷೆಗೆ ಬದಲಾಯಿಸಿದ್ದಾರೆ. ಸಾಮಾನ್ಯವಾಗಿ ಬೇರೆ ಚಿತ್ರಗಳಲ್ಲಿ ಉತ್ತರ ಕರ್ನಾಟಕ ಭಾಷೆಯನ್ನು ಕಾಮಿಡಿ ಸನ್ನಿವೇಶಗಳಿಗೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಆದರೆ ನಾವು ಆ ರೀತಿ ಮಾಡಿಲ್ಲ. ಮೊದಲೇ ಗಂಡು ಭಾಷೆ. ಮಾತನಾಡಿದರೇನೇ ಮೈ ಝುಂ ಎನ್ನುತ್ತದೆ. ಆ ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದ್ದೇವೆ.
ಕಷ್ಟಪಟ್ಟು ಮಾಡಿಲ್ಲ ಇಷ್ಟಪಟ್ಟು ಮಾಡಿದ್ದೇನೆ
ಸಿಂಪಲ್ಲಾಗ್ ಒಂದು ಲವ್ ಸ್ಟೋರಿಯಲ್ಲಿ ಡೈಲಾಗ್ಸ್ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಇಲ್ಲಿ ಆ ರೀತಿಯ ವರಸೆ ಇಲ್ಲ. ಈ ಚಿತ್ರವನ್ನು ಕಷ್ಟಪಟ್ಟು ಮಾಡಿಲ್ಲ ಇಷ್ಟಪಟ್ಟು ಮಾಡಿದ್ದೇನೆ.
ಮನಸ್, ಮಣಿ, ಮೌನಿ ಸುತ್ತ ಸುತ್ತುವ ಚಿತ್ರ
ಮನಸ್, ಮಣಿ, ಮೌನಿ ಎಂಬ ಮೂರು ಪಾತ್ರಗಳು ಬರುತ್ತವೆ. ಮೂರು ಪಾತ್ರಗಳಲ್ಲಿ ಸಾಮಾನ್ಯವಾಗಿರು ಅಂಶಗಳು ಹೇಗೆ ಬದಲಾಗುತ್ತವೆ ಎಂಬುದೆ ಚಿತ್ರದ ಕಥೆ.