ಕುತೂಹಲ ಮೂಡಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮತ್ತು ಸುದೀಪ್ ಭೇಟಿ
Recommended Video
ಕಿಚ್ಚ ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ಇದ್ದಾರೆ. ಇದರ ಜೊತೆಗೆ ಚಿಕ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಫ್ಯಾನ್ಸ್ ವಾರ್, ಪೈರಸಿಯ ಸಮಸ್ಯೆಯ ನಡುವೆಯೂ ಸುದೀಪ್ ಇವತ್ತು ಅಪರೂಪದ ವ್ಯಕ್ತಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಹೌದು, ಸುದೀಪ್ ಮನೆಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.
ದಿಢೀರನೆ ಕಿಚ್ಚನ ಮನೆಗೆ ಭಾಸ್ಕರ್ ರಾವ್ ಎಂಟ್ರಿ ಕೊಟ್ಟಿರುವುದು ಕುತೂಹಲ ಮೂಡಿಸಿದೆ. ಇದ್ದಕ್ಕಿದ್ದ ಹಾಗೆ ಕಿಚ್ಚನ ಮನೆಗೆ ಯಾಕೆ ಪೊಲೀಸ್ ಕಮಿಷನರ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಅಧಿಕೃತವಾಗಿ ಗೊತ್ತಿಲ್ಲ. ಆದ್ರೆ ಈ ಬಗ್ಗೆ ಸ್ವತಹ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆಯೆ ಕಿಚ್ಚನ ಮನೆ ಸುತ್ತಮುತ್ತ ಪೊಲೀಸ್ ಸೆಕ್ಯೂರಿಟಿ ಟೈಟ್ ಆಗಿತ್ತು. ಇದನ್ನ ನೋಡಿದ ಅನೇಕರು ಏನಿರ ಬಹುದು ಎನ್ನುವ ಕುತೂಹಲವನ್ನು ವ್ಯಕ್ತಪಡಿಸಿದ್ದರು. ಆದ್ರೀಗ ಭಾಸ್ಕರ್ ರಾವ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಫ್ಯಾನ್ಸ್ ವಾರ್ ತಾರಕ್ಕೇರಿದೆ. ಇದರ ನಡುವೆ ಕಿಚ್ಚನ ಮನೆಯ ಸುತ್ತಮುತ್ತ ಪೊಲೀಸ್ ಸೆಕ್ಯೂರಿಟಿ ನೋಡಿ ಅನೇಕರು ಒಮ್ಮೆ ಶಾಕ್ ಆಗಿದ್ದರು. ಕೆಲವು ಸಮಯಗಳ ಕಾಲ ಸುದೀಪ್ ಮತ್ತು ಕುಟುಂಬದ ಜೊತೆ ಭಾಸ್ಕರ್ ರಾವ್ ಮಾತುಕತೆ ನಡೆಸಿದ್ದಾರೆ.

ಸುದೀಪ್ ಮತ್ತು ಅವರ ತಂದೆ ಭಾಸ್ಕರ್ ರಾವ್ ಜೊತೆ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಆದ್ರೆ ಇಬ್ಬರ ಭೇಟಿಯ ಹಿಂದಿನ ಉದ್ದೇಶ ಮಾತ್ರ ಬಹಿರಂಗವಾಗಿಲ್ಲ.


Click it and Unblock the Notifications











