Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುತೂಹಲ ಮೂಡಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮತ್ತು ಸುದೀಪ್ ಭೇಟಿ
Recommended Video
ಕಿಚ್ಚ ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ಇದ್ದಾರೆ. ಇದರ ಜೊತೆಗೆ ಚಿಕ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಫ್ಯಾನ್ಸ್ ವಾರ್, ಪೈರಸಿಯ ಸಮಸ್ಯೆಯ ನಡುವೆಯೂ ಸುದೀಪ್ ಇವತ್ತು ಅಪರೂಪದ ವ್ಯಕ್ತಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಹೌದು, ಸುದೀಪ್ ಮನೆಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.
ದಿಢೀರನೆ ಕಿಚ್ಚನ ಮನೆಗೆ ಭಾಸ್ಕರ್ ರಾವ್ ಎಂಟ್ರಿ ಕೊಟ್ಟಿರುವುದು ಕುತೂಹಲ ಮೂಡಿಸಿದೆ. ಇದ್ದಕ್ಕಿದ್ದ ಹಾಗೆ ಕಿಚ್ಚನ ಮನೆಗೆ ಯಾಕೆ ಪೊಲೀಸ್ ಕಮಿಷನರ್ ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಅಧಿಕೃತವಾಗಿ ಗೊತ್ತಿಲ್ಲ. ಆದ್ರೆ ಈ ಬಗ್ಗೆ ಸ್ವತಹ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.
ದರ್ಶನ್-ಸುದೀಪ್ ಸ್ನೇಹವನ್ನ ಒಂದಾಗಿಸಲು ಇರುವ ಮಾರ್ಗಗಳು
ಇಂದು ಬೆಳ್ಳಂಬೆಳಗ್ಗೆಯೆ ಕಿಚ್ಚನ ಮನೆ ಸುತ್ತಮುತ್ತ ಪೊಲೀಸ್ ಸೆಕ್ಯೂರಿಟಿ ಟೈಟ್ ಆಗಿತ್ತು. ಇದನ್ನ ನೋಡಿದ ಅನೇಕರು ಏನಿರ ಬಹುದು ಎನ್ನುವ ಕುತೂಹಲವನ್ನು ವ್ಯಕ್ತಪಡಿಸಿದ್ದರು. ಆದ್ರೀಗ ಭಾಸ್ಕರ್ ರಾವ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಫ್ಯಾನ್ಸ್ ವಾರ್ ತಾರಕ್ಕೇರಿದೆ. ಇದರ ನಡುವೆ ಕಿಚ್ಚನ ಮನೆಯ ಸುತ್ತಮುತ್ತ ಪೊಲೀಸ್ ಸೆಕ್ಯೂರಿಟಿ ನೋಡಿ ಅನೇಕರು ಒಮ್ಮೆ ಶಾಕ್ ಆಗಿದ್ದರು. ಕೆಲವು ಸಮಯಗಳ ಕಾಲ ಸುದೀಪ್ ಮತ್ತು ಕುಟುಂಬದ ಜೊತೆ ಭಾಸ್ಕರ್ ರಾವ್ ಮಾತುಕತೆ ನಡೆಸಿದ್ದಾರೆ.
ಸುದೀಪ್ ಮತ್ತು ಅವರ ತಂದೆ ಭಾಸ್ಕರ್ ರಾವ್ ಜೊತೆ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಆದ್ರೆ ಇಬ್ಬರ ಭೇಟಿಯ ಹಿಂದಿನ ಉದ್ದೇಶ ಮಾತ್ರ ಬಹಿರಂಗವಾಗಿಲ್ಲ.