Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಬುಗೆ ಉಡುಗೊರೆ ಕಳುಹಿಸಿದ 'ಕನ್ನಡಮ್ಮ': ಗಿಫ್ಟ್ ನೋಡಿ ಭಾವುಕರಾದ ನಟ
Recommended Video
ತಮಿಳು ನಟ ಸಿಂಬು ಕಾವೇರಿ ನೀರು ವಿಚಾರದಲ್ಲಿ ಕನ್ನಡಿಗರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ನೀರಿನ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದ್ದ ತಮಿಳುಗರಿಗೆ ಕನ್ನಡ ಜನರ ಸ್ಥಿತಿ-ಗತಿಯನ್ನ ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದರು.
ಇದು ಸಹಜವಾಗಿ ಕರ್ನಾಟಕ ಜನರ ಮನಸ್ಸು ಗೆದ್ದಿತ್ತು. ಇಂತಹ ನಟನಿಗೆ ಕರ್ನಾಟಕದ ತಾಯಿಯೊಬ್ಬರು ಒಂದು ವಿಶೇಷವಾದ ಉಡುಗೊರೆಯನ್ನ ಕಳುಹಿಸಿಕೊಟ್ಟಿದ್ದಾರೆ.
ಕನ್ನಡಮ್ಮ ಕಳುಹಿಸಿದ ಉಡುಗೊರೆಯನ್ನ ಸಾವಿರಾರು ತಮಿಳು ಜನರ ಮಧ್ಯೆ ಸ್ವೀಕರಿಸಿದ ತಮಿಳು ನಟ ಸಿಂಬು ಆ ತಾಯಿಗೆ ಹೃದಯಪೂರ್ವಕ ಧನ್ಯವಾದಗಳನ್ನ ಹೇಳಿ ಭಾವುರಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ, ಈ ಘಟನೆ ನಡೆದಿದ್ದು ಎಲ್ಲಿ, ಯಾವಾಗ.? ಆ ಉಡುಗೊರೆಯಲ್ಲಿ ಏನಿತ್ತು.? ಎಂದು ತಿಳಿಯಲು ಮುಂದೆ ಓದಿ....
ನೀರು ಕೇಳಿದ್ದ ನಟ ಸಿಂಬು
ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯೊಳಗೆ ಕರ್ನಾಟಕ ಜನರು, 'ಒಂದು ಲೋಟದಲ್ಲಿ ತಮಿಳಿರಿಗೆ ನೀರು ಕೊಡಿ' ಎಂದು ನಟ ಸಿಂಬು ಕೇಳಿಕೊಂಡಿದ್ದ ಘಟನೆ ನೆನಪಿರಬಹುದು. ಸಿಂಬು ಅವರ ಈ ಮಾತಿಗೆ ಬೆಲೆ ಕೊಟ್ಟ ಕನ್ನಡಿಗರು ಬಾಟಲ್, ಲೋಟ, ಬಿಂದಿಗೆ ಹೀಗೆ ನೀರು ಕೊಟ್ಟು ಮಾನವೀಯತೆ ಮೆರೆದಿದ್ದರು. ಇದು ತಮಿಳುನಾಡಿನಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿತ್ತು.
ನೀರು ಕೊಟ್ಟರೂ ಬೇಸರ ಮಾಡಿಕೊಂಡ ತಮಿಳು ನಟ ಸಿಂಬು: ಕಾರಣವೇನು.?
ನೀರಿನ ಜೊತೆ ಉಡುಗೊರೆ ಕೊಟ್ಟ
ಈ ಅಭಿಯಾನದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜನರ ಹೃದಯ ಗೆದ್ದ ನಟ ಸಿಂಬುಗೆ ಕನ್ನಡ ತಾಯಿಯೊಬ್ಬರು ನೀರಿನ ಜೊತೆ ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ. ಒಂದು ಬಾಟಲ್ ನೀರು ಮತ್ತು ನೀರಿನ ಜೊತೆ ಒಂದು 'ಶ್ವೆಟ್ಟರ್'ನ್ನ ಕಳುಹಿಸಿದ್ದಾರೆ. ಬೆಂಗಳೂರು ಮೂಲದ ಆ ತಾಯಿ ಕಳುಹಿಸಿದ ನೀರನ್ನ ಸಿಂಬು ಕುಡಿದು ಖುಷಿ ಪಟ್ಟರು.
''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ
ಧನ್ಯವಾದ ತಿಳಿಸಿದ ಸಿಂಬು
ಬೆಂಗಳೂರಿನಿಂದ ಉಡುಗೊರೆ ಕಳುಹಿಸಿದ್ದ ಆ ತಾಯಿ ''ನೀನು ತುಂಬಾ ಚೆನ್ನಾಗಿ ಮಾತನಾಡಿದ್ದೀಯಾ. ಸಿಂಬು ನೀನು ಒಳ್ಳೆಯ ಕೆಲಸ ಮಾಡಿದ್ದೀಯಾ. ನಿನ್ನ ಜೊತೆ ನಾನು ಇರುತ್ತೇನೆ' ಎಂದು ವಿಡಿಯೋ ಮೂಲಕ ತಿಳಿಸಿದರು. ನಂತರ ಮಾತನಾಡಿದ ಸಿಂಬು ''ಆ ತಾಯಿ ಏನೂ ಮಾತಾಡಿದ್ರು ಎನ್ನುವುದು ನನಗೆ ಗೊತ್ತಾಗಿಲ್ಲ. ಆದ್ರೆ, ಆ ಮನಸ್ಸಿನಲ್ಲಿರುವ ಸಂಗತಿಗಳು ನನಗೆ ಅರ್ಥವಾಯಿತು. ಅವರಿಗೆ ನಾನು ಚಿರಋಣಿ'' ಎಂದರು.
ಕಾವೇರಿ ಬಗ್ಗೆ ತಮಿಳು ನಟ ಸಿಂಬು ಆಡಿದ ಮಾತಿಗೆ ಶಿಳ್ಳೆ ಹೊಡೆದ ಕನ್ನಡಿಗರು!
ಟವಿ ಶೋನಲ್ಲಿ ಪೂರ್ತಿ ಪ್ರಸಾರ
ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಜೋಡಿ ಡ್ಯಾನ್ಸ್ 2 ಗ್ರ್ಯಾಂಡ್ ಫಿನಾಲೆಯಲ್ಲಿ ಈ ವಿಶೇಷವಾದ ಸಂಚಿಕೆ ಮೂಡಿ ಬಂದಿತ್ತು. ಈ ಕಾರ್ಯಕ್ರಮದ ಅತಿಥಿಯಾಗಿದ್ದ ಸಿಂಬು ಅವರಿಗೆ ಈ ಬಾಟಲ್ ನೀರು ಮತ್ತು ಉಡುಗೊರೆಯನ್ನ ನೀಡಿದರು.