twitter
    For Quick Alerts
    ALLOW NOTIFICATIONS  
    For Daily Alerts

    ಸಿಂಬುಗೆ ಉಡುಗೊರೆ ಕಳುಹಿಸಿದ 'ಕನ್ನಡಮ್ಮ': ಗಿಫ್ಟ್ ನೋಡಿ ಭಾವುಕರಾದ ನಟ

    By Bharath Kumar
    |

    Recommended Video

    ಸಿಂಬುಗೆ ಸಿಕ್ಕ ಉಡುಗೊರೆಯಲ್ಲಿ ಏನಿತ್ತು..? | Filmibeat Kannada

    ತಮಿಳು ನಟ ಸಿಂಬು ಕಾವೇರಿ ನೀರು ವಿಚಾರದಲ್ಲಿ ಕನ್ನಡಿಗರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ನೀರಿನ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದ್ದ ತಮಿಳುಗರಿಗೆ ಕನ್ನಡ ಜನರ ಸ್ಥಿತಿ-ಗತಿಯನ್ನ ತಿಳಿಸುವ ಮೂಲಕ ಮಾನವೀಯತೆ ಮೆರೆದಿದ್ದರು.

    ಇದು ಸಹಜವಾಗಿ ಕರ್ನಾಟಕ ಜನರ ಮನಸ್ಸು ಗೆದ್ದಿತ್ತು. ಇಂತಹ ನಟನಿಗೆ ಕರ್ನಾಟಕದ ತಾಯಿಯೊಬ್ಬರು ಒಂದು ವಿಶೇಷವಾದ ಉಡುಗೊರೆಯನ್ನ ಕಳುಹಿಸಿಕೊಟ್ಟಿದ್ದಾರೆ.

    ಕನ್ನಡಮ್ಮ ಕಳುಹಿಸಿದ ಉಡುಗೊರೆಯನ್ನ ಸಾವಿರಾರು ತಮಿಳು ಜನರ ಮಧ್ಯೆ ಸ್ವೀಕರಿಸಿದ ತಮಿಳು ನಟ ಸಿಂಬು ಆ ತಾಯಿಗೆ ಹೃದಯಪೂರ್ವಕ ಧನ್ಯವಾದಗಳನ್ನ ಹೇಳಿ ಭಾವುರಾಗಿರುವ ಘಟನೆ ನಡೆದಿದೆ. ಅಷ್ಟಕ್ಕೂ, ಈ ಘಟನೆ ನಡೆದಿದ್ದು ಎಲ್ಲಿ, ಯಾವಾಗ.? ಆ ಉಡುಗೊರೆಯಲ್ಲಿ ಏನಿತ್ತು.? ಎಂದು ತಿಳಿಯಲು ಮುಂದೆ ಓದಿ....

    ನೀರು ಕೇಳಿದ್ದ ನಟ ಸಿಂಬು

    ನೀರು ಕೇಳಿದ್ದ ನಟ ಸಿಂಬು

    ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯೊಳಗೆ ಕರ್ನಾಟಕ ಜನರು, 'ಒಂದು ಲೋಟದಲ್ಲಿ ತಮಿಳಿರಿಗೆ ನೀರು ಕೊಡಿ' ಎಂದು ನಟ ಸಿಂಬು ಕೇಳಿಕೊಂಡಿದ್ದ ಘಟನೆ ನೆನಪಿರಬಹುದು. ಸಿಂಬು ಅವರ ಈ ಮಾತಿಗೆ ಬೆಲೆ ಕೊಟ್ಟ ಕನ್ನಡಿಗರು ಬಾಟಲ್, ಲೋಟ, ಬಿಂದಿಗೆ ಹೀಗೆ ನೀರು ಕೊಟ್ಟು ಮಾನವೀಯತೆ ಮೆರೆದಿದ್ದರು. ಇದು ತಮಿಳುನಾಡಿನಲ್ಲಿ ಹೊಸ ಕ್ರಾಂತಿ ಹುಟ್ಟುಹಾಕಿತ್ತು.

    ನೀರು ಕೊಟ್ಟರೂ ಬೇಸರ ಮಾಡಿಕೊಂಡ ತಮಿಳು ನಟ ಸಿಂಬು: ಕಾರಣವೇನು.?ನೀರು ಕೊಟ್ಟರೂ ಬೇಸರ ಮಾಡಿಕೊಂಡ ತಮಿಳು ನಟ ಸಿಂಬು: ಕಾರಣವೇನು.?

    ನೀರಿನ ಜೊತೆ ಉಡುಗೊರೆ ಕೊಟ್ಟ

    ನೀರಿನ ಜೊತೆ ಉಡುಗೊರೆ ಕೊಟ್ಟ

    ಈ ಅಭಿಯಾನದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಜನರ ಹೃದಯ ಗೆದ್ದ ನಟ ಸಿಂಬುಗೆ ಕನ್ನಡ ತಾಯಿಯೊಬ್ಬರು ನೀರಿನ ಜೊತೆ ವಿಶೇಷವಾದ ಉಡುಗೊರೆಯನ್ನ ನೀಡಿದ್ದಾರೆ. ಒಂದು ಬಾಟಲ್ ನೀರು ಮತ್ತು ನೀರಿನ ಜೊತೆ ಒಂದು 'ಶ್ವೆಟ್ಟರ್'ನ್ನ ಕಳುಹಿಸಿದ್ದಾರೆ. ಬೆಂಗಳೂರು ಮೂಲದ ಆ ತಾಯಿ ಕಳುಹಿಸಿದ ನೀರನ್ನ ಸಿಂಬು ಕುಡಿದು ಖುಷಿ ಪಟ್ಟರು.

    ''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ ''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ

    ಧನ್ಯವಾದ ತಿಳಿಸಿದ ಸಿಂಬು

    ಧನ್ಯವಾದ ತಿಳಿಸಿದ ಸಿಂಬು

    ಬೆಂಗಳೂರಿನಿಂದ ಉಡುಗೊರೆ ಕಳುಹಿಸಿದ್ದ ಆ ತಾಯಿ ''ನೀನು ತುಂಬಾ ಚೆನ್ನಾಗಿ ಮಾತನಾಡಿದ್ದೀಯಾ. ಸಿಂಬು ನೀನು ಒಳ್ಳೆಯ ಕೆಲಸ ಮಾಡಿದ್ದೀಯಾ. ನಿನ್ನ ಜೊತೆ ನಾನು ಇರುತ್ತೇನೆ' ಎಂದು ವಿಡಿಯೋ ಮೂಲಕ ತಿಳಿಸಿದರು. ನಂತರ ಮಾತನಾಡಿದ ಸಿಂಬು ''ಆ ತಾಯಿ ಏನೂ ಮಾತಾಡಿದ್ರು ಎನ್ನುವುದು ನನಗೆ ಗೊತ್ತಾಗಿಲ್ಲ. ಆದ್ರೆ, ಆ ಮನಸ್ಸಿನಲ್ಲಿರುವ ಸಂಗತಿಗಳು ನನಗೆ ಅರ್ಥವಾಯಿತು. ಅವರಿಗೆ ನಾನು ಚಿರಋಣಿ'' ಎಂದರು.

    ಕಾವೇರಿ ಬಗ್ಗೆ ತಮಿಳು ನಟ ಸಿಂಬು ಆಡಿದ ಮಾತಿಗೆ ಶಿಳ್ಳೆ ಹೊಡೆದ ಕನ್ನಡಿಗರು!ಕಾವೇರಿ ಬಗ್ಗೆ ತಮಿಳು ನಟ ಸಿಂಬು ಆಡಿದ ಮಾತಿಗೆ ಶಿಳ್ಳೆ ಹೊಡೆದ ಕನ್ನಡಿಗರು!

    ಟವಿ ಶೋನಲ್ಲಿ ಪೂರ್ತಿ ಪ್ರಸಾರ

    ಟವಿ ಶೋನಲ್ಲಿ ಪೂರ್ತಿ ಪ್ರಸಾರ

    ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಜೋಡಿ ಡ್ಯಾನ್ಸ್ 2 ಗ್ರ್ಯಾಂಡ್ ಫಿನಾಲೆಯಲ್ಲಿ ಈ ವಿಶೇಷವಾದ ಸಂಚಿಕೆ ಮೂಡಿ ಬಂದಿತ್ತು. ಈ ಕಾರ್ಯಕ್ರಮದ ಅತಿಥಿಯಾಗಿದ್ದ ಸಿಂಬು ಅವರಿಗೆ ಈ ಬಾಟಲ್ ನೀರು ಮತ್ತು ಉಡುಗೊರೆಯನ್ನ ನೀಡಿದರು.

    English summary
    Tamil Actor Simbu had recently given a speech requesting Kannadigas to give Water to Tamilians. so, Bangalore Women has Sent Water to Actor simbu.
    Monday, June 18, 2018, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X