Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಐರಾವತ' ದರ್ಶನ್ ಮನೆ ಮುಂದೆ ಜೆಸಿಬಿ ಘರ್ಜನೆ ಸದ್ಯಕ್ಕಿಲ್ಲ!
ರಾಜಕಾಲುವೆ ಒತ್ತುವರಿ ಹೆಸರಿನಲ್ಲಿ ಬೆಂಗಳೂರಿನ ಹಲವೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜೆಸಿಬಿ ಘರ್ಜನೆ ಮಾಡಿದ ರೀತಿ ನೋಡಿದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೂ ಜೆಸಿಬಿ ನುಗ್ಗುವುದು ಖಚಿತ ಅಂತ್ಲೇ ಎಲ್ಲರೂ ಭಾವಿಸಿದ್ರು.
ಕಷ್ಟ ಪಟ್ಟು ದುಡಿದ ಹಣದಲ್ಲಿ ಮನೆ ಕಟ್ಟಿ, ಯಾರೋ ಮಾಡಿದ ಎಡವಟ್ಟಿಗೆ ಬೆಲೆ ತೆರಬೇಕಾದರೂ, 'ಬಿಬಿಎಂಪಿ ಯವರಿಗೆ ಸಹಕರಿಸುತ್ತೇನೆ' ಅಂತ್ಹೇಳಿ ದರ್ಶನ್ ಉದಾರತೆ ಮೆರೆದಿದ್ದರು.
ಇದೀಗ ಬಂದಿರುವ ಮಾಹಿತಿ ಪ್ರಕಾರ, ದರ್ಶನ್ ಮನೆ ಮುಂದೆ ಜೆಸಿಬಿ ಬಂದು ನಿಲ್ಲಬೇಕಾದರೆ ಕನಿಷ್ಟ ಅಂದ್ರೂ ಒಂದು ವಾರ ಬೇಕು. ಬಾರದೇ ಹೋದರೂ ಅಚ್ಚರಿ ಇಲ್ಲ.! [ನಟ ದರ್ಶನ್ ಗೂ ಬಿಬಿಎಂಪಿ ರಾಜಕಾಲುವೆ ಒತ್ತುವರಿ ಬಿಸಿ ತಟ್ಟಿತೆ.?]
ಇಷ್ಟು ದಿನ ಕಂದಾಯ ಇಲಾಖೆಯ ವರದಿಯೇ ಅಂತಿಮ ಅಂತ ಜನ ಸಾಮಾನ್ಯರ ಮನೆಗಳನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಕೆಡವಿದ ಬಿಬಿಎಂಪಿ ಇದೀಗ ಗಣ್ಯರ ಮನೆ ನೆಲಸಮ ಮಾಡಲು ಜಂಟಿ ಸರ್ವೆ ವರದಿ ಎದುರುನೋಡುತ್ತಿದೆ. [ರಾಜಕಾಲುವೆ ಒತ್ತುವರಿ ತೆರವಿನಲ್ಲೂ ಪ್ರಭಾವದ ಒಳಸುಳಿ]
ಒರಾಯನ್ ಮಾಲ್, ಮಾನ್ಯತಾ ಟೆಕ್ ಪಾರ್ಕ್, ಶಾಮನೂರು ಶಿವಶಂಕರಪ್ಪ ರವರಿಗೆ ಸೇರಿದ ಎಸ್.ಎಸ್.ಆಸ್ಪತ್ರೆ ಕೂಡ ರಾಜಕಾಲುವೆ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗೊತ್ತಾಗಿದ್ದೇ ತಡ, ಕಾರ್ಯಚರಣೆಗೆ ಬಿಬಿಎಂಪಿ ಫುಲ್ ಸ್ಟಾಪ್ ಇಟ್ಟಿದೆ.
ಯಾಕ್ ಸರ್ ಹೀಗೆ ಅಂತ ಕೇಳಿದ್ರೆ, 'ಜಂಟಿ ಸರ್ವೆ ವರದಿ ಬಂದ್ಮೇಲೆ ಮುಂದಿನ ನಡೆ' ಅಂತ ಹೇಳ್ತಿದ್ದಾರೆ. [ಬಿಬಿಎಂಪಿ ತೆರವು ಕಾರ್ಯಾಚರಣೆ ಬಂದ್ ಮಾಡಿದ್ದೇಕೆ?]
ಜಂಟಿ ಸರ್ವೆ ಶುರು ಆಗುವುದು ಯಾವಾಗ? ಮುಗಿಯುವುದು ಯಾವಾಗ? ದೇವರೇ ಬಲ್ಲ.! ಒಂದಂತೂ ಸ್ಪಷ್ಟ, ದರ್ಶನ್ ಮನೆ ಮುಂದೆ ಜೆಸಿಬಿ ಘರ್ಜನೆ ಸದ್ಯಕ್ಕೆ ಇಲ್ಲ.