Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಕಾಲಕ್ಕೆ ಗಾನಸುಧೆ ಹರಿಸಿದ ಬೆಳವಾಡಿ ಅಮ್ಮ-ಮಗಳು
ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಆತಂಕ, ಎಲ್ಲರಿಗೂ ಗಾಬರಿ, ಭಯ. ಇಂಥಹಾ ಸಮಯದಲ್ಲಿ ನಟಿ ಸುಧಾ ಬೆಳವಾಡಿ ಮತ್ತು ಮಗಳು ಸಂಯುಕ್ತಾ ಹೊರನಾಡು ಸುಂದರವಾದ ಹಾಡೊಂದನ್ನು ಪ್ರಸ್ತುತ ಪಡಿಸಿದ್ದಾರೆ.
Recommended Video
ನಟಿ ಸುಧಾ ಬೆಳವಾಡಿ ಮತ್ತು ನಾಯಕ ನಟಿ ಸಂಯುಕ್ತಾ ಹೊರನಾಡು ಇಬ್ಬರೂ ಮನೆಯಲ್ಲೇ ಕೂತು ಏಕರಾಗದಲ್ಲಿ ಸುಂದರವಾದ, ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ಹಾಡೊಂದನ್ನು ಹಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ತಾಳುವುದಾ ನೀ ಕಲಿಮಗು, ಬಾಳುವುದಾ ನೀ ಕಲಿ ಮಗು..' ಎಂದು ಆರಂಭವಾಗುವ ಹಾಡನ್ನು ಅಮ್ಮ-ಮಗಳಿಬ್ಬರೂ ಸುಂದರವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡು ಕೇಳಲು ಇಂಪಾಗಿ, ಸಾಹಿತ್ಯ ಅರ್ಥವತ್ತಾಗಿ ಇದೆ.
|
ಮನಸಿನ ಸ್ಲೇಟನು ಖಾಲಿ ಇಡು
'ಕಳೆದುಹೋದುದಕೆ ಕೊರಗ ಬಿಡು ಉಳಿದಿದೆ ಎಷ್ಟೋ ಹರುಷ ಪಡು ಕಳೆಯುವ ಕೂಡುವ ಲೆಕ್ಕವ ಅಳಿಸಿ, ಮನಸಿನ ಸ್ಲೇಟನು ಖಾಲಿ ಇಡು' ಎಂಬ ಅರ್ಥವತ್ತಾದ ಸಾಲುಗಳನ್ನು ಹಾಡು ಒಳಗೊಂಡಿದೆ.
'ತಾಳುವ ಧೀರ, ಆಳುವ ಊರ'
'ತಾಳುವುದಾ ನೀ ಕಲಿಮಗು, ಬಾಳುವುದಾ ನೀ ಕಲಿ ಮಗು, ತಾಳುವ ಧೀರ, ಆಳುವ ಊರ, ಎನ್ನುವುದಾ ನೀ ನೆನಪಿಡು..' ಎಂದು ತಾಳ್ಮೆಯ ಅವಶ್ಯಕತೆ ಬಗ್ಗೆ ಹಾಡಿನಲ್ಲಿ ಪ್ರಸ್ತಾಪ ಮಾಡಿದ್ದಾರೆ ಸುಧಾ ಮತ್ತು ಸಂಯುಕ್ತಾ.
'ನೆಚ್ಚಿದ ಗೆಳೆಯರ ನಂಟ ಬಿಡು'
'ನೆಚ್ಚದ ಗೆಳೆಯರ ನಂಟ ಬಿಡು, ಚುಚ್ಚಲು, ಗೆಳೆಯ ನಕ್ಕು ಬಿಡು, ಮೆಚ್ಚಿದರಾಯಿತು ಮೇಲಿನ ದೈವ, ಹಚ್ಚಿಕೊಳ್ಳದೇ ಇದ್ದುಬಿಡು' ಎಂಬ ಸಾಳಿನ ಮೂಲಕ, ಯಾರನ್ನೂ ನೆಚ್ಚಿಕೊಳ್ಳಬೇಡ, ನಗುವು ಹಾಗೂ ದೇವರ ಮೇಲಿನ ನಂಬಿಕೆಯೊಂದು ಜೊತೆಗಿರಲಿ ಎಂದು ಸಾಂತ್ವನವನ್ನು ಹಾಡು ಒಳಗೊಂಡಿದೆ.
20 ಸಾವಿರ ಮಂದಿ ವೀಕ್ಷಿಸಿದ್ದಾರೆ
ಸಂಯುಕ್ತಾ ಹೊರನಾಡು ಅವರ ಇನ್ಸ್ಟಾಗ್ರಾಂ ನಲ್ಲಿ ಹಾಡಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಡನ್ನು ಸುಮಾರು 20 ಸಾವಿರ ಮಂದಿ ವೀಕ್ಷಿಸಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ.