Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಕಾಲಕ್ಕೆ ಗಾನಸುಧೆ ಹರಿಸಿದ ಬೆಳವಾಡಿ ಅಮ್ಮ-ಮಗಳು
ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಆತಂಕ, ಎಲ್ಲರಿಗೂ ಗಾಬರಿ, ಭಯ. ಇಂಥಹಾ ಸಮಯದಲ್ಲಿ ನಟಿ ಸುಧಾ ಬೆಳವಾಡಿ ಮತ್ತು ಮಗಳು ಸಂಯುಕ್ತಾ ಹೊರನಾಡು ಸುಂದರವಾದ ಹಾಡೊಂದನ್ನು ಪ್ರಸ್ತುತ ಪಡಿಸಿದ್ದಾರೆ.
Recommended Video
ನಟಿ ಸುಧಾ ಬೆಳವಾಡಿ ಮತ್ತು ನಾಯಕ ನಟಿ ಸಂಯುಕ್ತಾ ಹೊರನಾಡು ಇಬ್ಬರೂ ಮನೆಯಲ್ಲೇ ಕೂತು ಏಕರಾಗದಲ್ಲಿ ಸುಂದರವಾದ, ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ಹಾಡೊಂದನ್ನು ಹಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ತಾಳುವುದಾ ನೀ ಕಲಿಮಗು, ಬಾಳುವುದಾ ನೀ ಕಲಿ ಮಗು..' ಎಂದು ಆರಂಭವಾಗುವ ಹಾಡನ್ನು ಅಮ್ಮ-ಮಗಳಿಬ್ಬರೂ ಸುಂದರವಾಗಿ, ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡು ಕೇಳಲು ಇಂಪಾಗಿ, ಸಾಹಿತ್ಯ ಅರ್ಥವತ್ತಾಗಿ ಇದೆ.
|
ಮನಸಿನ ಸ್ಲೇಟನು ಖಾಲಿ ಇಡು
'ಕಳೆದುಹೋದುದಕೆ ಕೊರಗ ಬಿಡು ಉಳಿದಿದೆ ಎಷ್ಟೋ ಹರುಷ ಪಡು ಕಳೆಯುವ ಕೂಡುವ ಲೆಕ್ಕವ ಅಳಿಸಿ, ಮನಸಿನ ಸ್ಲೇಟನು ಖಾಲಿ ಇಡು' ಎಂಬ ಅರ್ಥವತ್ತಾದ ಸಾಲುಗಳನ್ನು ಹಾಡು ಒಳಗೊಂಡಿದೆ.
'ತಾಳುವ ಧೀರ, ಆಳುವ ಊರ'
'ತಾಳುವುದಾ ನೀ ಕಲಿಮಗು, ಬಾಳುವುದಾ ನೀ ಕಲಿ ಮಗು, ತಾಳುವ ಧೀರ, ಆಳುವ ಊರ, ಎನ್ನುವುದಾ ನೀ ನೆನಪಿಡು..' ಎಂದು ತಾಳ್ಮೆಯ ಅವಶ್ಯಕತೆ ಬಗ್ಗೆ ಹಾಡಿನಲ್ಲಿ ಪ್ರಸ್ತಾಪ ಮಾಡಿದ್ದಾರೆ ಸುಧಾ ಮತ್ತು ಸಂಯುಕ್ತಾ.
'ನೆಚ್ಚಿದ ಗೆಳೆಯರ ನಂಟ ಬಿಡು'
'ನೆಚ್ಚದ ಗೆಳೆಯರ ನಂಟ ಬಿಡು, ಚುಚ್ಚಲು, ಗೆಳೆಯ ನಕ್ಕು ಬಿಡು, ಮೆಚ್ಚಿದರಾಯಿತು ಮೇಲಿನ ದೈವ, ಹಚ್ಚಿಕೊಳ್ಳದೇ ಇದ್ದುಬಿಡು' ಎಂಬ ಸಾಳಿನ ಮೂಲಕ, ಯಾರನ್ನೂ ನೆಚ್ಚಿಕೊಳ್ಳಬೇಡ, ನಗುವು ಹಾಗೂ ದೇವರ ಮೇಲಿನ ನಂಬಿಕೆಯೊಂದು ಜೊತೆಗಿರಲಿ ಎಂದು ಸಾಂತ್ವನವನ್ನು ಹಾಡು ಒಳಗೊಂಡಿದೆ.
20 ಸಾವಿರ ಮಂದಿ ವೀಕ್ಷಿಸಿದ್ದಾರೆ
ಸಂಯುಕ್ತಾ ಹೊರನಾಡು ಅವರ ಇನ್ಸ್ಟಾಗ್ರಾಂ ನಲ್ಲಿ ಹಾಡಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಡನ್ನು ಸುಮಾರು 20 ಸಾವಿರ ಮಂದಿ ವೀಕ್ಷಿಸಿದ್ದಾರೆ ಮತ್ತು ಮೆಚ್ಚಿಕೊಂಡಿದ್ದಾರೆ.