twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀರಾಮುಲು ಪರ ದುನಿಯಾ ವಿಜಯ್ ಪ್ರಚಾರ?

    |

    Duniya Vijay
    ಇಡೀ ದೇಶದ ಕಣ್ಣು ಈಗ ಬಳ್ಳಾರಿಯತ್ತ ತಿರುಗಿದೆ. ಎಲ್ಲರ ಕಣ್ಣೂ ಬಳ್ಳಾರಿಯತ್ತ ಆಗಾಗ ತಿರುಗುತ್ತಲೇ ಇರುತ್ತದೆ ಬಿಡಿ. ಈಗ ವಿಷಯ ಅದಲ್ಲ, ಬಳ್ಳಾರಿಯಲ್ಲಿ ಉಪಚುನಾವಣೆ ನಡೆಯಲಿದೆ. ಅದಕ್ಕೆ ಜಿಜೆಪಿಯಿಂದ ಸಿಡಿದೆದ್ದು ಸ್ವತಂತ್ರ್ಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಶ್ರೀರಾಮುಲು ಕಾರಣ.

    ನಿಜವಾಗಿಯೂ ಬಳ್ಳಾರಿ ಈಗ ಪ್ರತಿಷ್ಠೆಯ ಕಣವಾಗಿದೆ. ಎಲ್ಲಾ ಅಭ್ಯರ್ಥಿಗಳು ಹಾಗೂ ಪಕ್ಷಗಳು ವಿಭಿನ್ನ ಪ್ರಚಾರ ತಂತ್ರ ಅನುಸರಿಸುತ್ತಿವೆ. ಆದರೆ ಸ್ವತಂತ್ರ್ಯ ಅಭ್ಯರ್ಥಿ ಶ್ರೀರಾಮುಲು, ಸ್ಟಾರ್ ಪ್ರಚಾರಕರ ಕೊರತೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿರುವ ಅವರು ಸಾಕಷ್ಟು ನಟ-ನಟಿಯರನ್ನು ಸಂಪರ್ಕಿಸಿದ್ದು ದುನಿಯಾ ವಿಜಯ್ ಪ್ರಚಾರಕ್ಕಿಳಿಯುವ ಸಂಭವವಿದೆ.

    ಎಲ್ಲಾ ಅಭ್ಯರ್ಥಿಗಳ ಕಣ್ಣೂ ಈಗ ಸ್ಟಾರ್ ನಟ-ನಟಿಯರ ಹಿಂದೆ ಬಿದ್ದಿದೆ. ರಾಜಕಾರಣಿಗಳನ್ನು ನೋಡಲು ಸೇರುವದಕ್ಕಿಂತ ಹೆಚ್ಚು ಸಿನಿಮಾ ನಟರನ್ನು ನೋಡಲು ಜನ ಮುಗಿಬೀಳುತ್ತಾರೆ. ಚೆನ್ನಾಗಿರುತ್ತಾರೆ ಎಂಬುದೇ ಕಾರಣವಲ್ಲ, ಜನರ ಕ್ರೇಜ್ ಹಾಗಿದೆ. ಈಗ ಶ್ರೀರಾಮುಲು ಕೂಡ ದುನಿಯಾ ವಿಜಯ್ ಬಳಸಿಕೊಂಡು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ. (ಒನ್ ಇಂಡಿಯಾ ಕನ್ನಡ)

    English summary
    There is news that Duniya Vijay is going to do publicity on the behalf of Sriramulu, Independent candidate of Bellary By Election. 
 
 
    Thursday, November 17, 2011, 11:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X