'ಬೆಳ್ಳಿ ಕಿರಣ' ಜೊತೆ ಗಣ್ಯರ ಬೆಳ್ಳಿ ಮಾತುಗಳು
ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರ ನಡೆಸುವ 'ಬೆಳ್ಳಿ ಸಿನಿಮಾ ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಜುಲೈ 16ರ ಶನಿವಾರದಂದು ಕೆ.ಶಿವರುದ್ರಯ್ಯ ನಿರ್ದೇಶನದ 'ಬೆಳ್ಳಿ ಕಿರಣ' ಸಿನಿಮಾ ಪ್ರದರ್ಶನಗೊಳ್ಳಲಿದೆ.
'ಬೆಳ್ಳಿ ಕಿರಣ' ಚಿತ್ರದ ಪ್ರದರ್ಶನದ ನಂತರ ಚಿತ್ರದ ನಿರ್ದೇಶಕ ಕೆ.ಶಿವರುದ್ರಯ್ಯ ಅವರ ಜೊತೆ ಬೆಳ್ಳಿ ಮಾತು ಸಂವಾದ ಏರ್ಪಡಿಸಲಾಗಿದೆ. ಅಂದಹಾಗೆ ಈ ಸಂಭ್ರಮದ ಕಾರ್ಯಕ್ರಮ ಇದೇ ಶನಿವಾರ (ಜುಲೈ 16) ಸಂಜೆ 4 ಘಂಟೆಗೆ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಜರುಗಲಿದೆ.[ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ]

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಎಸ್. ಜಿ. ಸಿದ್ದರಾಮಯ್ಯ ಮತ್ತು ಡಾ ಷರೀಫ್ ಸಿ. ನಿರ್ಮಾಪಕರಾದ ಎಂ. ಗುರುರಾಜ್ ಸೇಟ್ ಮತ್ತು ಎ. ಎಸ್. ವೆಂಕಟೇಶ್. ಲೇಖಕ ಬಿ. ಆರ್. ಲಕ್ಷ್ಮಣ ರಾವ್, ಕನ್ನಡ ನಟ ದಿಲೀಪ್ ರಾಜ್ ಹಾಗೂ ನಟಿ ಅನುಶ್ರೀ ಪಾಲ್ಗೊಳ್ಳಲಿದ್ದಾರೆ.['ಸಂಭಾವನೆ' ವಿಚಾರದ ಬಗ್ಗೆ ಸಿಡಿದೆದ್ದ ನಟಿ ಸುಧಾರಾಣಿ]
ಎಂದಿನಂತೆ 'ಬೆಳ್ಳಿ ಸಿನಿಮಾ-ಬೆಳ್ಳಿ ಮಾತು' ಸಮಾರಂಭದ ಅಧ್ಯಕ್ಷತೆಯನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್. ವಿ. ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ.['ಕನ್ನಡ ಚಿತ್ರಗಳ ಚೈತ್ರಕಾಲ' ವಿಶೇಷ ಕಾರ್ಯಕ್ರಮಕ್ಕೆ ನೀವೂ ಬನ್ನಿ]


Click it and Unblock the Notifications











