Don't Miss!
- News Summer Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಸಲಹೆಗಳು
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Automobiles ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಿಂದ ಬರುವ ಸಂಪೂರ್ಣ ಹಣ ಕ್ಯಾನ್ಸರ್ ರೋಗಿಗಳಿಗೆ ದೇಣಿಗೆ
ತಮ್ಮ ಸಿನಿಮಾದಿಂದ ಬರುವ ಸಂಪೂರ್ಣ ಮೊತ್ತವನ್ನು ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ದೇಣಿಗೆ ನೀಡುವೆ ಎಂದು 'ಬೆಂಕಿಯ ಬಲೆ ಪ್ರೀತಿಯ ಕೊಲೆ' ಚಿತ್ರದ ನಿರ್ಮಾಪಕ ಹಾಗೂ ನಟ ಶಿವಾಜಿ ತಿಳಿಸಿದ್ದಾರೆ.
ಬುಧವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ, 'ಬೆಂಕಿಯ ಬಲೆ ಪ್ರೀತಿಯ ಕೊಲೆ' ನೈಜ ಕಥೆಯಾಧಾರಿತ ಚಿತ್ರವಾಗಿದೆ. 2003 ರಲ್ಲಿ ತನ್ನ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಕಿದ್ವಾಯಿ ಆಸ್ಪತ್ರೆಯಲ್ಲಿದ್ದರು. ಅಲ್ಲಿದ್ದ ರೋಗಿ ಸಂಬಂಧಿ ಉಮಾಳ ಪಾತ್ರವೇ ಈ ಕಥೆಯ ಮುಖ್ಯಪಾತ್ರವಾಗಿದ್ದು, ಅವಳ ಕಷ್ಟ ಪಾಡುಗಳೇ ಕಥೆಯ ಜೀವಾಳಾ. ಮಹಿಳಾ ಪ್ರಧಾನ ಚಿತ್ರವಾಗಿದ್ದು, ಉತ್ತಮ ಸಾಮಾಜಿಕ ಸಂದೇಶ ಇದೆ' ಎಂದು ತಿಳಿಸಿದರು.
ಪ್ರೀತಿ, ಪ್ರೋತ್ಸಾಹದಿಂದ 'ಗಂಟುಮೂಟೆ' ತುಂಬಿಸಿದ ಕನ್ನಡ ಜನ
ಚಿತ್ರವು ನವೆಂಬರ್ 17ರಂದು ಪ್ರೀಮಿಯರ್ ಶೋ ಇರಲಿದ್ದು, ನವೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು. ಸುಮಾರು 10 ಲಕ್ಷ ರೂಗಳ ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ದಾಮೋದರ್ ಪ್ರಹ್ಲಾದ್ ಮೋದಿಯವರು ಫೇಸ್ ಬುಕ್ ಲೈವ್ ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ ಎಂದರು.
ನೇರವಾಗಿ ರೋಗಿಗಳ ಕೈಗೆ ಹಣ ನೀಡುವುದರಿಂದ ಬಂದ ಹಣ ಸದುಪಯೋಗವಾಗಲಿದೆ ಎಂದು ಶಿವಾಜಿ ತಿಳಿಸಿದ್ದಾರೆ.
ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!
ಯುವ ಉತ್ಸಾಹಿ ಹೊಸಬರ ತಂಡವೇ ಚಿತ್ರದಲ್ಲಿದ್ದು 2.26 ಗಂಟೆಯ ಚಿತ್ರದಲ್ಲಿ 6 ಹಾಡುಗಳು, 3 ಪೈಟ್ ಇದೆ. ನಾಯಕಿಯಾಗಿ ಪ್ರೀತಿ ಯಶೂ, ನಾಯಕನಾಗಿ ಧನುಷ್,ಖಳ ನಾಯಕನಾಗಿ ಸ್ನೇಹ ಜೀವಿ ಮಂಜೇಶ್, ಲೋಕೇಶ್ ರಾವ್, ಕೊತ್ತಿ ಸೀನಾ,ನಿರಂಜನ್ ಹಾಗೂ ಇತರರು ಇದ್ದಾರೆ ಎಂದರು.
ನಾಯಕಿ ಪ್ರೀತಿಯಶೂ, ನಿರಂಜನ್, ಮೈಸೂರು ಮಂಜು, ವಿರ್ಲೆ ಮಂಜು, ಮಹದೇವ ಮೂರ್ತಿ ಹಾಗೂ ಇತರರು ಗೋಷ್ಠಿಯಲ್ಲಿ ಇದ್ದರು.