Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೆತ್ತನಗೆರೆ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ
ರಿಯಲಿಸ್ಟಿಕ್ ಸಿನಿಮಾಗಳ ಹಣೆಬರಹವೇ ಇಷ್ಟು. ನೈಜಕಥೆ ಆಧಾರಿತ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಅದ್ರಲ್ಲೂ ರೌಡಿಸಂ ಬೇಸ್ಡ್ ಸಿನಿಮಾಗಳನ್ನ ರೆಡಿ ಮಾಡೋದು ಅಂದ್ರೆ ಕತ್ತಿ ಮೇಲೆ ನಡೆದಂತೆಯೇ ಸರಿ.
ಇಂತಹ ಪರಿಸ್ಥಿತಿಯನ್ನ ಈಗ ಎದುರಿಸುತ್ತಿರುವುದು 'ಬೆತ್ತನಗೆರೆ' ಚಿತ್ರತಂಡ. ರಿಯಲ್ ರೌಡಿ 'ಬೆತ್ತನಗೆರೆ' ಸೀನನ ರಕ್ತಚರಿತ್ರೆ ಆಧಾರಿತ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ತಂಟೆ-ತಕರಾರು ಎದುರಿಸುತ್ತಲೇ ಇದೆ. ['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]
ಸೆನ್ಸಾರ್ ಅಂಗಳದಿಂದ ದಾಖಲೆ ಪ್ರಮಾಣದ ಕಟ್ಸ್ ಪಡೆದಿರುವ 'ಬೆತ್ತನಗೆರೆ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಬೆಳ್ಳಿಪರದೆ ಮೇಲೆ ಸಿನಿಮಾ ರಾರಾಜಿಸುವ ಮುನ್ನ 'ಮೊದಲು ನಮಗೆ ಸಿನಿಮಾ ತೋರ್ಸಿ' ಅಂತ ರಿಯಲ್ 'ಬೆತ್ತನಗೆರೆ' ಹುಡುಗ್ರು ಚಿತ್ರತಂಡದವರಿಗೆ ತಾಕೀತು ಮಾಡಿದ್ದಾರಂತೆ. ಮುಂದೆ ಓದಿ....
''ಮೊದ್ಲು ನಾವ್ ಸಿನಿಮಾ ನೋಡ್ಬೇಕ್.!''
''ಬೆತ್ತನಗೆರೆ' ಚಿತ್ರವನ್ನ ಮೊದಲು ನಮಗೆ ತೋರ್ಸಿ, ನಾವ್ ಅದನ್ನ ಮೊದಲು ನೋಡ್ಬೇಕ್.!'' ಹೀಗಂತ 'ಬೆತ್ತನಗೆರೆ' ಚಿತ್ರತಂಡಕ್ಕೆ ತಾಕೀತು ಮಾಡಿದ್ದಾರೆ ಬೆತ್ತನಗೆರೆ ಸೀನನ ಸಹೋದರ ಅಂಡ್ ಗ್ಯಾಂಗ್.
ಸಿನಿಮಾದಲ್ಲಿ ಏನಿದೆ ಅನ್ನುವ ಅನುಮಾನ?
'ಬೆತ್ತನಗೆರೆ' ಸಿನಿಮಾದಲ್ಲಿ ಸೀನನನ್ನ ಹೇಗೆ ತೋರಿಸಲಾಗಿದೆ. ಸೀನ ಮತ್ತು ಶಂಕ್ರನ ನಡುವಿನ ಅನುಬಂಧದ ಚಿತ್ರಣ ಹೇಗೆ ಮೂಡಿಬಂದಿದೆ. ಯಾರ ಬಗ್ಗೆ ಚಿತ್ರದಲ್ಲಿ ಅವಹೇಳನ ಮಾಡಲಾಗಿದೆ ಅನ್ನುವ ಬಗ್ಗೆ ಬೆತ್ತನಗೆರೆ ಸೀನನ ಸಹೋದರನಿಗೆ ಅನುಮಾನ ಮೂಡಿದೆ. ಹೀಗಾಗಿ ''ಮೊದಲು ಸಿನಿಮಾ ನಮಗೆ ತೋರ್ಸಿ, ನಮಗೆ ಅಭ್ಯಂತರ ಇಲ್ಲವಾದರೆ ಬಿಡುಗಡೆ ಮಾಡಿಕೊಳ್ಳಿ'' ಅಂತ 'ಬೆತ್ತನಗೆರೆ' ಚಿತ್ರದ ನಿರ್ದೇಶಕ ಮೋಹನ್ ಗೆ ಬೆತ್ತನಗೆರೆ ಸೀನನ ಸಹೋದರ ಹೇಳಿದ್ದಾರಂತೆ.
ಆಪೋಸಿಟ್ ಗ್ಯಾಂಗ್ ನಿಂದಲೂ ಫೋನ್ ಕಾಲ್
ಬೆತ್ತನಗೆರೆ ಸೀನನ ವಿರುದ್ಧ ಕತ್ತಿ ಮಸೆಯುತ್ತಿದ್ದ ಆಪೋಸಿಟ್ ಗ್ಯಾಂಗ್ ನವರೂ ಕೂಡ 'ನಮಗೆ ಸಿನಿಮಾ ತೋರ್ಸಿ' ಅಂತ 'ಬೆತ್ತನಗೆರೆ' ನಿರ್ಮಾಪಕ-ನಿರ್ದೇಶಕರ ಬೆನ್ನುಬಿದ್ದು ಫೋನ್ ಕಾಲ್ ಮಾಡುತ್ತಿದ್ದಾರಂತೆ.
ವಾರದೊಳಗೆ ಸ್ಕ್ರೀನಿಂಗ್
ಎರಡು ಗ್ಯಾಂಗ್ ನವರಿಗೆ 'ಬೆತ್ತನಗೆರೆ' ಸಿನಿಮಾ ತೋರಿಸೋಕೆ ನಿರ್ದೇಶಕರು ಸಜ್ಜಾಗುತ್ತಿದ್ದಾರೆ. ಇನ್ನೊಂದು ವಾರದೊಳಗೆ ಸ್ಕ್ರೀನಿಂಗ್ ಅರೇಂಜ್ ಮಾಡ್ತೀವಿ ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಮೋಹನ್ ತಿಳಿಸಿದ್ದಾರೆ.
ಇಬ್ಬರೂ ಒಪ್ಪಿದರೆ ಸಿನಿಮಾ ರಿಲೀಸ್?
''ಬೆತ್ತನಗೆರೆ' ಸಿನಿಮಾ ರಿಲೀಸ್ ಮಾಡುವುದಕ್ಕೆ ಯಾವುದೇ ತಕರಾರು ಇಲ್ಲ. ಎರಡು ಗ್ಯಾಂಗ್ ನವರು ಸಿನಿಮಾ ನೋಡಬೇಕು ಅಂತ ಕೂತಿದ್ದಾರೆ. ಸಿನಿಮಾ ನೋಡಿದ್ಮೇಲೆನೇ ರಿಲೀಸ್ ಸಾಧ್ಯ. ಎರಡು ಗ್ಯಾಂಗ್ ನವರು ಸಿನಿಮಾ ನೋಡಿ ಎನ್ ಹೇಳ್ತಾರೋ, ನೋಡೋಣ'' ಅಂತಾರೆ 'ಬೆತ್ತನಗೆರೆ' ಚಿತ್ರದ ನಿರ್ದೇಶಕ ಮೋಹನ್.
'ಬೆತ್ತನಗೆರೆ' ಚಿತ್ರದಲ್ಲೇನಿದೆ?
ಬೆತ್ತನಗೆರೆ ಸೀನನ ರಕ್ತಸಿಕ್ತ ಅಧ್ಯಾಯವೇ 'ಬೆತ್ತನಗೆರೆ' ಸಿನಿಮಾ. ಬೆತ್ತನಗೆರೆ ಸೀನ ಪಾತ್ರದಲ್ಲಿ ಸುಮಂತ್ ಶೈಲೇಂದ್ರ ಬಾಬು ಕಾಣಿಸಿಕೊಂಡಿದ್ದರೆ, ಬೆತ್ತನಗೆರೆ ಶಂಕ್ರ ಪಾತ್ರದಲ್ಲಿ 'ಸಿಲ್ಕ್' ಖ್ಯಾತಿಯ ಅಕ್ಷಯ್ ಇದ್ದಾರೆ. ವಿಶೇಷ ಪಾತ್ರದಲ್ಲಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡ ಅಭಿನಯಿಸಿದ್ದಾರೆ.