Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿದೆ ಅಣ್ಣಾವ್ರ 'ಭಾಗ್ಯವಂತರು'
ಡಾ.ರಾಜ್ಕುಮಾರ್, ಸರೋಜಾ ದೇವಿ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಭಾಗ್ಯವಂತರು' ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಪ್ರೇಕ್ಷಕರ ಮುಂದು ಬರುತ್ತಿದೆ.
ಹೌದು, 1977 ರಲ್ಲಿ ಬಿಡುಗಡೆ ಆಗಿದ್ದ 'ಭಾಗ್ಯವಂತರು' ಸಿನಿಮಾ ಇದೀಗ ಹೊಸ ತಂತ್ರಜ್ಞಾನಗಳಿಗೆ ಒಳಪಟ್ಟು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ವಿತರಕರೂ, ಸಿನಿಮಾ ನಿರ್ಮಾಪಕರೂ ಆಗಿರುವ ಮುನಿರಾಜು ಎಂಬುವರು 'ಭಾಗ್ಯಂವತರು' ಸಿನಿಮಾಕ್ಕೆ ಆಧುನಿಕ ತಂತ್ರಜ್ಞಾನದ ಟಚ್ ಕೊಡಿಸಿ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿಸುತ್ತಿದ್ದಾರೆ.
ದ್ವಾರಕೀಶ್ ನಿರ್ಮಿಸಿ, ಭಾರ್ಗವ ನಿರ್ದೇಶಿಸಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ರಾಜ್ಕುಮಾರ್ ಅವರ ಅನೇಕ ಐಕಾನಿಕ್ ಸಿನಿಮಾಗಳಲ್ಲಿ ಭಾಗ್ಯವಂತರೂ ಸಹ ಒಂದು.
'ನನಗೆ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರುಗಳ ಮೇಲೆ ವಿಪರೀತ ಗೌರವ. ಅವರೇ ನನಗೆ ಭಾಗ್ಯವಂತರು, ಹಾಗಾಗಿ ಈ ಸಿನಿಮಾ ಮತ್ತೆ ಬಿಡುಗಡೆ ಮಾಡುತ್ತಿದ್ದೇನೆ' ಎಂದಿದ್ದಾರೆ ಮುನಿರಾಜು.
ಹೊಸ ತಂತ್ರಜ್ಞಾನದೊಂದಿಗೆ ಕೆಲವು ಮಾಲ್ಗಳಲ್ಲಿ ಸೇರಿದಂತೆ ರಾಜ್ಯದ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಗೊಳಿಸುವ ಯೋಜನೆ ಮುನಿರಾಜು ಗೆ ಇದೆ.
ಮುನಿರಾಜು ಅವರು, 'ಆಪರೇಷನ್ ಡೈಮಂಡ್ ರಾಕೆಟ್', 'ನಾನೊಬ್ಬ ಕಳ್ಳ', 'ರಾಜ ನನ್ನ ರಾಜ', 'ದಾರಿ ತಪ್ಪಿದ ಮಗ' ಇನ್ನೂ ಹಲವು ಸಿನಿಮಾಗಳಿಗೆ ವಿತರಕರಾಗಿ ಕೆಲಸ ಮಾಡಿದ್ದಾರೆ. ತಮ್ಮ ಮುನೇಶ್ವರ ಫಿಲಮ್ಸ್ ಪ್ರೊಡಕ್ಷನ್ ವತಿಯಿಂದ 'ಭಾಗ್ಯವಂತರು' ಸಿನಿಮಾ ಮರುಬಿಡುಗಡೆ ಮಾಡುತ್ತಿದ್ದಾರೆ.
ರಾಜ್ಕುಮಾರ್ ಅವರ ಹಲವು ಸಿನಿಮಾಗಳು ಮರುಬಿಡುಗಡೆ ಆಗಿ ಜನರನ್ನು ಸೆಳೆದಿವೆ. ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ ಸಿನಿಮಾಗಳಿಗೆ ಬಣ್ಣ ತುಂಬಿ ಮರುಬಿಡುಗಡೆ ಮಾಡಲಾಗಿತ್ತು.