ಸ್ಕ್ರಿಪ್ಟ್ ಪೂಜೆ ಮುಗಿಸಿದ 'ಭರಾಟೆ' ಟೀಂ
Recommended Video

'ಭರಾಟೆ' ಶ್ರೀ ಮುರಳಿ ಹಾಗೂ ಭರ್ಜರಿ ಚೇತನ್ ಕಾಂಬಿನೇಶನ್ ನಲ್ಲಿ ಸೆಟ್ಟೇರಲು ಸಿದ್ದವಾಗಿರುವ ಸಿನಿಮಾ. ಮುಂದಿನ ತಿಂಗಳಲ್ಲು ಮುಹೂರ್ತ ಮಾಡಿ ಚಿತ್ರೀಕರಣ ಶುರು ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ನಿರ್ದೇಶಕ ಚೇತನ್ ಇಂದು ಒಳ್ಳೆ ದಿನ ಎಂದು ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ್ದಾರೆ.
ನಟ ಶ್ರೀ ಮುರಳಿ ಜೊತೆಯಾಗಿ ಇದೇ ಮೊದಲ ಬಾರಿಗೆ ಶ್ರೀಲೀಲಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದು ಭುವನ್ ಗೌಡ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದ್ದು ಸುಪ್ರಿತ್ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.

ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 5 ಗಂಟೆಗೆ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದೆ ಚಿತ್ರತಂಡ. ಚಿತ್ರರಂಗಕ್ಕೆ ಹೊಸ ಕಾಂಬಿನೇಶನ್ ಆಗಿರುವ ಶ್ರೀ ಮುರಳಿ ಮತ್ತು ಶ್ರೀಲೀಲಾ ಜೋಡಿ ಫೋಟೋ ಅಭಿಮಾನಿಗಳ ಮುಂದೆ ಬಂದಿದೆ.

ಸದ್ಯ ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚೇತನ್ ಮತ್ತು ತಂಡ ಪ್ರೀ-ಪ್ರೊಡಕ್ಷನ್ ಕೆಲಸವನ್ನು ಕಂಪ್ಲೀಟ್ ಮಾಡಿದೆ. 'ಬಹದ್ದೂರ್', 'ಭರ್ಜರಿ' ನಂತರ ಚೇತನ್ 'ಭರಾಟೆ' ಮೂಲಕ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹಿಟ್ ನೀಡಲು ತಯಾರಿಯಲ್ಲಿದ್ದಾರೆ.


Click it and Unblock the Notifications











