Don't Miss!
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- News Rain Alert: ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧೆಡೆ ವ್ಯಾಪಕ ಮಳೆ ಆರ್ಭಟ
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Lifestyle ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ವಾಹನಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ
ಮೈಸೂರಿನ ಲಲಿತ್ ಮಹಲ್ ಅರಮನೆಯ ಬಳಿ ರಮ್ಯಾ ಅವರು ದಿಗಂತ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ರಮ್ಯಾ ಅವರು ಚಿತ್ರೀಕರಣಕ್ಕಾಗಿ ಅರಮನೆ ಬಳಿಗೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿದ್ದಾರೆ.
ಘಟನೆಯಿಂದ ಕೆಲ ಕಾಲ ವಿಚಲಿತರಾದ ರಮ್ಯಾ ನಂತರ ಕಾರಿನಿಂದ ಇಳಿದು ಕಾರ್ಯಕರ್ತರನ್ನು ಸಮರ್ಥವಾಗಿ ಎದುರಿಸಿದ್ದಾರೆ.
ಏನಾಯ್ತು ಅಲ್ಲಿ? : ಒಂದ್ನಿಮಿಷ..ಒಂದ್ನಿನಿಷ ಇರಿ ಪ್ಲೀಸ್ ಎಂದು ರಮ್ಯಾ ವಾಹನ(caravan)ದ ಬಾಗಿಲಲ್ಲಿ ನಿಂತು ಹಲವು ಬಾರಿ ಮನವಿ ಮಾಡಿದರೂ ಕಾರ್ಯಕರ್ತರು ಓಗೊಡಲಿಲ್ಲ.
'ಇಂಡಸ್ಟ್ರೀಯಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಶೂಟಿಂಗ್ ಮಾಡಬಾರದು ಅಂತಾ ನಮಗೆ ರೂಲ್ ಹಾಕಿಲ್ಲ. ನೀವು ಇಲ್ಲಿ ಬಂದು ಗಲಾಟೆ ಮಾಡಿ ಇಲ್ಲಿರುವ ಕೆಲಸಗಾರರು ಕೆಲಸ ನಿಲ್ಲಿಸಿದರೆ ಅವರಿಗೆ ಯಾರು ದುಡ್ಡು ಕೊಡುತ್ತಾರೆ' ಎಂದು ರಮ್ಯಾ ಪ್ರಶ್ನಿಸಿದರು.
'ಇಡೀ ಭಾರತವೇ ಡೀಸೆಲ್ ಬೆಲೆ ಏರಿಕೆ, ಎಫ್ ಡಿಐ, ಅಡುಗೆ ಅನಿಲ ಸಮಸ್ಯೆ ವಿರುದ್ಧ ಹೋರಾಟಕ್ಕೆ ಇಳಿದಿದೆ. ನೀವು ಕೂಡಾ ಬೆಂಬಲ ನೀಡಬೇಕು. ಚಿತ್ರರಂಗದ 150 ಜನ ದಿನದ ಊಟ ಹೋಗುತ್ತದೆ ಎನ್ನುತ್ತೀರಾ.. ಲಕ್ಷಾಂತರ ಜನಕ್ಕೆ ನೋವಾದರೆ ಸ್ಪಂದಿಸಲು ಆಗುವುದಿಲ್ಲವೇ' ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶಭರಿತವಾಗಿ ಆಗ್ರಹಿಸಿದರು.
ನಾವು ಕಲಾವಿದೆಯಾಗಿ ಅವರು ಬಂದ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡಲು ಬಂದಿದ್ದೇವು. ಆದರೆ, ಆಕೆ ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿ ಕೆರಳಿಸಿದರು ಎಂದು ಕಾರ್ಯಕರ್ತರು ಹೇಳಿದರು.
ಮಾತಿನ ಚಕಮಕಿ ಮುಂದುವರೆಯುತ್ತಿದ್ದಂತೆ ಸ್ಥಳದಲ್ಲಿ ಕೆಲ ಪೊಲೀಸರು ಕಾಣಿಸಿಕೊಂಡು ರಮ್ಯಾ ಅವರನ್ನು ಬೇರೊಂದು ವಾಹನಕ್ಕೆ ಸಾಗಿಸಿ ಸ್ಥಳದಿಂದ ಬೇರೆಡೆಗೆ ಕಳುಹಿಸಿದರು.
ಇಡೀ ಚಿತ್ರತಂಡದವೇ ಅಲ್ಲಿತ್ತು ಆದರೆ, ರಮ್ಯಾ ಅವರನ್ನು ಮಾತ್ರ ಟಾರ್ಗೆಟ್ ಮಾಡಿದ್ದು ಏಕೆ? ಚಿತ್ರರಂಗ ಬಂದ್ ಗೆ ಬೆಂಬಲ ನೀಡುವಂತೆ ಕರೆ ನೀಡದಿರುವಾಗ ಕಲಾವಿದೆಯಾಗಿ ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಇಳಿಯಲು ಸಾಧ್ಯವೇ?
ಕಾಂಗ್ರೆಸ್ ಯುವ ನಾಯಕಿ ರಮ್ಯಾ ಹಾಗೂ ಬಿಜೆಪಿ ಕಾರ್ಯಕರ್ತರ ಹಠಮಾರಿತನಕ್ಕೆ ಇದು ಮತ್ತೊಂದು ನಿದರ್ಶನವಾಗಿತ್ತು.