Don't Miss!
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ' ಎಂದಿದ್ದರು ಎಸ್ಪಿ ಬಾಲಸುಬ್ರಹ್ಮಣ್ಯಂ
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಬಳಿ ಒಂದು ಹಾಡಾದರೂ ಹಾಡಿಸಬೇಕು ಎಂದು ನಿರ್ಮಾಪಕ ಸಾಲುಗಟ್ಟಿ ನಿಲ್ಲುತ್ತಿದ್ದರು. ಎಸ್ಪಿಬಿ ಹಾಡಿದ್ರೆ ಕಾಲ್ಶೀಟ್ ಕೊಡೋದು ಎನ್ನುತ್ತಿದ್ದ ನಟರು ಸಹ ಇದ್ದರು. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ನಟರಿಗೂ ಎಸ್ಪಿಬಿ ಹಾಡಿದ್ದಾರೆ.
ಆದ್ರೆ, ಕನ್ನಡದ ಪಾಲಿಗೆ ಎಸ್ಪಿಬಿ ಬಹಳ ವಿಶೇಷ. ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ರವಿಚಂದ್ರನ್, ಪ್ರಭಾಕರ್, ಶಶಿಕುಮಾರ್ ಹೀಗೆ ಎಲ್ಲರಿಗೂ ತಮ್ಮದೇ ಧ್ವನಿ ಎಂಬಂತೆ ಬದಲಾಯಿಸಿಕೊಂಡು ಹಾಡುತ್ತಿದ್ದರು. ನೂರಾರು ಕಲಾವಿದರ ಚಿತ್ರಗಳಿಗೆ ಹಾಡಿರುವ ಎಸ್ಪಿಬಿ ಆ ಇಬ್ಬರು ನಟರ ಬಗ್ಗೆ ವಿಶೇಷವಾದ ಗೌರವ ಹೊಂದಿದ್ದರು. ಯಾರದು? ಮುಂದೆ ಓದಿ...
ನನ್ನ ಸಮಾಧಿಯ ಮೇಲೆ ಹೀಗೆ ಬರೆಯಿರಿ ಎಂದಿದ್ದರು ಎಸ್ಪಿ ಬಾಲಸುಬ್ರಹ್ಮಣ್ಯಂ
ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ
ಎಸ್ಪಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಕುರಿತು ಟಿವಿ ವಾಹಿನಿ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಎಸ್ಪಿಬಿ ಬಹಳ ಇಷ್ಟ ಪಡುತ್ತಿದ್ದ ಹಾಗೂ ಗೌರವಿಸುತ್ತಿದ್ದ ಇಬ್ಬರು ನಟರ ಬಗ್ಗೆ ತಿಳಿಸಿದರು. ''ನನ್ನ ಹಾಡಿಗೆ ಜೀವ ಕೊಡೋದು ವಿಷ್ಣುವರ್ಧನ್ ಮತ್ತು ಕಮಲ್ ಹಾಸನ್ ಇಬ್ಬರೇ'' ಎಂದು ಅನೇಕ ಸಲ ಹೇಳುತ್ತಿದ್ದರಂತೆ.
ವಿಷ್ಣು ಶಾರೀರ ಆಗಿದ್ದ ಎಸ್ಪಿಬಿ
ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಎಸ್ಪಿ ಬಾಲಸುಬ್ರಹ್ಮಣ್ಯಂ ಶಾರೀರ ಆಗಿದ್ದರು. ವಿಷ್ಣು ನಟಿಸುತ್ತಿದ್ದ ಬಹುತೇಕ ಎಲ್ಲ ಚಿತ್ರಗಳಿಗೂ ಎಸ್ಪಿ ಹಾಡಬೇಕಿತ್ತು. ಎಸ್ಪಿಬಿ ಹಾಡಿದರೇ ವಿಷ್ಣುವರ್ಧನ್ ಅವರೇ ಹಾಡಿದಂತೆ ಭಾಸವಾಗುತ್ತಿತ್ತು. ಅಷ್ಟರ ಮಟ್ಟಿಗೆ ಎಸ್ಪಿಬಿ ವಿಷ್ಣುವರ್ಧನ್ಗೆ ಆಪ್ತರಾಗಿದ್ದರು. (ಚಿತ್ರಕೃಪೆ-ಡಾ ವಿಷ್ಣು ಸೇನಾ ಸಮತಿ)
ಕನ್ನಡದ 3 ಹಾಡಿಗೆ ರಾಜ್ಯ ಪ್ರಶಸ್ತಿ, 1 ರಾಷ್ಟ್ರಪ್ರಶಸ್ತಿ ಪಡೆದಿರುವ ಎಸ್ಪಿಬಿ, ಯಾವುದು ಆ ಹಾಡುಗಳು?
ವಿಷ್ಣು ಮನೆಗೆ ಬರುತ್ತಿದ್ದ ಗಾಯಕ
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಆಗಾಗ ವಿಷ್ಣುವರ್ಧನ್ ಅವರ ಮನೆಗೆ ಬರುತ್ತಿದ್ದರಂತೆ. ಎಸ್ಪಿಬಿ ಬಂದಾಗ ವಿಷ್ಣು ಮತ್ತು ಅವರಿಬ್ಬರು ಒಟ್ಟಿಗೆ ಕುಳಿತುಕೊಂಡರೆ ಮುಂಜಾನೆವರೆಗೂ ಮಾತಾಡುವುದು, ಹಾಡುವುದು ಮಾಡ್ತಿದ್ದರಂತೆ. ಇಬ್ಬರು ಸಹೋದರರಂತೆ, ಹೋಗೋ-ಬಾರೋ ಎನ್ನುವಂತೆ ಇರುತ್ತಿದ್ದರು ಎಂದು ಭಾರತಿ ತಿಳಿಸಿದ್ದಾರೆ.
Recommended Video
ಆಪ್ತರಕ್ಷಕ ಹಾಡು ಸ್ಮರಿಸಿಕೊಳ್ಳಬಹುದು
ವಿಷ್ಣುವರ್ಧನ್ ನಟಿಸಿದ್ದ ಕೊನೆಯ ಚಿತ್ರ ಆಪ್ತರಕ್ಷಕ. ಈ ಚಿತ್ರದಲ್ಲಿ ಎಸ್ಪಿಬಿ ನಾಲ್ಕು ಹಾಡು ಹಾಡಿದ್ದರು. ''ಚಾಮುಂಡಿ ತಾಯಿ ಆಣೆ...ನಾನೆಂದು ನಿಮ್ಮವನೆ,,,,,,ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ.....'' ಈ ಹಾಡು ವಿಷ್ಣು ಅಭಿಮಾನಿಗಳಿಗೆ ಮರೆಯಲಾಗದ ಹಾಡಾಯಿತು.