Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಿರ್ಮಾಪಕರಿಗೆ ಭಾರತಿ ಯಾಕೆ ಭಾರವಾದರು?
ಯಜಮಾನ ಗೆದ್ದಿರಬಹುದು. ಹಾಗಂತ ಯಜಮಾನ್ತಿ ಹೆಮ್ಮೆಯಿಂದ ಬೀಗುತ್ತಿಲ್ಲ . ಭಾರತಿ ಇವೆಲ್ಲವನ್ನೂ ಮೀರಿ ನಿಂತಂತೆ ಕಾಣಿಸ್ತಾರೆ. ವಯಸ್ಸಿಗೆ ಮೀರಿದ ವೈರಾಗ್ಯ ಬೆಳೆಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಪಂಡರಾಪುರಕ್ಕೆ ಪ್ರವಾಸ, ಕೆಲವು ವರ್ಷದ ಹಿಂದೆ ಮುಡಿಯನ್ನು ದೇವರಿಗೆ ಅರ್ಪಿಸಿದ್ದೂ ಉಂಟು. ವಿಷ್ಣುವರ್ಧನ್ ಇತ್ತೀಚೆಗೆ ನವರತ್ನ ಹಾರ, ಪರಮಾತ್ಮನ ಕೃಪೆ, ಸೋಲು ಗೆಲವನ್ನು ಮೀರಿದ ನಿರ್ಲಿಪ್ತತೆಯ ಬಗ್ಗೆ ಮಾತನಾಡುತ್ತಿದ್ದರೆ, ಭಾರತಿ ವರ್ಷಗಳ ಹಿಂದೆಯೇ ಈ ಸಾಧನೆ ಮಾಡಿದ್ದಾರೆ. ಆ ಮಟ್ಟಿಗೆ ಭಾರತಿ ಗಂಡನ ತಕ್ಕ ಹೆಂಡತಿ. ಮನೆಯಲ್ಲಂತೂ ಸದಾ ಪೂಜೆ ಪುನಸ್ಕಾರ.
ಮೊನ್ನೆ , ಅಪರೂಪಕ್ಕೆ ಜಿಲ್ಲಾಧಿಕಾರಿ ಚಿತ್ರದ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತಿ ಅಲ್ಲೂ ಕೂಡ ಪೂಜೆ ಬಗ್ಗೆ ಚಿಂತೆಯಲ್ಲಿದ್ದರು. ಮನೆಯಲ್ಲಿ ನವಗ್ರಹ ಪೂಜೆಗೆ ಸಿದ್ಧತೆ ನಡೆಸಬೇಕಿತ್ತು , ಇಲ್ಲಿ ಮುಹೂರ್ತ ವಿಳಂಬವಾಗುತ್ತಲೇ ಇತ್ತು . ಅದಕ್ಕೂ ಕಾರಣವಿತ್ತು . ನಿರ್ಮಾಪಕ, ನಿರ್ದೇಶಕ ಮತ್ತು ನಾಯಕನ ಹೆಸರನ್ನು ಆಧರಿಸಿದ ಸಂಖ್ಯಾ ಶಾಸ್ತ್ರದ ಪ್ರಕಾರ ಮುಹೂರ್ತ ಒಂದು ಗಂಟೆಗೆ ನಡೆದರೇ ಸೂಕ್ತ ಎಂದು ಯಾರೋ ಜ್ಯೋತಿಷಿಗಳು ರೆಹಮಾನ್ಗೆ ಸಲಹೆ ಕೊಟ್ಟಿದ್ದರಂತೆ. ಯಾರು ಏನೇ ಹೇಳಿದರೂ ನಂಬುವ ರೆಹಮಾನ್ ಈ ಮಾತನ್ನೂ ಚಾಚೂ ತಪ್ಪದೆ ಪಾಲಿಸುವ ಹಠ ತೊಟ್ಟಿದ್ದರು.
ಚಡಪಡಿಸುತ್ತಲೇ ಕುಳಿತಿದ್ದ ಭಾರತಿ ಮುಂದೆ ಟೈಮ್ ಪಾಸ್ಗಾಗಿ ಒಂದು ಪ್ರಶ್ನೆ ಬಂತು. ಕನ್ನಡ ಚಿತ್ರರಂಗದ ಪರಿಸ್ಥಿತಿ ಹೇಗಿದೆ ? ಹೇಗೂ ಇಲ್ಲ . ಆದರೆ ನನ್ನಂಥಾ ನಟಿಯನ್ನು ನೆನಪಿಸಿಕೊಳ್ಳೋರು ಕೇರಳದ ನಿರ್ಮಾಪಕರು ಮಾತ್ರ. ಅವರಿಗೆ ನಮ್ಮ ಪಾತ್ರ ಕೊಡಬೇಕು ಅನ್ನೋದು ಗೊತ್ತಿದೆ.
ಮಾತು ಕೊಂಚ ಕಟುವಾಗಿತ್ತು. ಆದರೆ ಅದರಲ್ಲಿ ಸತ್ಯವೂ ಇತ್ತು . ಇತ್ತೀಚೆಗೆ ಧರ್ಮಾದಿಕುಟ್ಟಮ್ ಚಿತ್ರದಲ್ಲಿ ಭಾರತಿ ಅಜ್ಜಿಯಾಗಿ ನಟಿಸಿದ್ದರು. ಮೊಮ್ಮಗಳ ಜೊತೆಗೆ ಕಾಲ ಕಳೆಯುವ ಈ ಪಾತ್ರವನ್ನು ಮಲೆಯಾಳಿಗಳು ಮೆಚ್ಚಿಕೊಂಡಿದ್ದರು. ಆದರೆ ಇಲ್ಲಿ ಭಾರತಿ ಅಮ್ಮನೂ ಅಲ್ಲ , ಅಜ್ಜಿಯೂ ಅಲ್ಲ.