Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವಿಷ ಕೊಟ್ಟು ಸಾಯಿಸಿ ಸಂತೋಷ ಪಡಿ': 'ವಿಕೃತ'ರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಜಗ್ಗೇಶ್!
Recommended Video
ಸಾಮಾಜಿಕ ಜಾಲತಾಣಗಳಿಂದ ಏನೇನೆಲ್ಲ ಅವಾಂತರಗಳು ಸೃಷ್ಟಿಯಾಗಬಹುದು ಎಂಬುದಕ್ಕೆ ನಿನ್ನೆ ನಡೆದ ಘಟನೆಯೇ ಉತ್ತಮ ಉದಾಹರಣೆ.
ಎಷ್ಟೇ ಸಂಕಷ್ಟ ಎದುರಾದರೂ, ಅದನ್ನೆಲ್ಲ ಮೆಟ್ಟಿನಿಂತು ಎರಡು ವರ್ಷಗಳಿಂದ ಕಷ್ಟಪಟ್ಟು, ಇಷ್ಟಪಟ್ಟು 'ಭರ್ಜರಿ' ಸಿನಿಮಾ ಮಾಡಿದ್ರೆ, ಅದನ್ನೆಲ್ಲ ಒಂದೇ ಕ್ಷಣದಲ್ಲಿ ವ್ಯರ್ಥ ಮಾಡಿಬಿಟ್ಟ ಕಿಡಿಗೇಡಿಯೋರ್ವ.!
ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಬಿಟ್ಟಿ ಪ್ರಸಾರ.!
ಹುಬ್ಬಳ್ಳಿ ಮೂಲದ ಸಂತೋಷ್ ಎಂಬಾತ ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಚಿತ್ರವನ್ನ ಪುಕ್ಕಟೆ ಪ್ರಸಾರ ಮಾಡಿದ್ದಾನೆ. ಇದರಿಂದ ನಿರ್ಮಾಪಕ ಹಾಗೂ ವಿತರಕರಿಗೆ ನಷ್ಟ ಮಾತ್ರ ಅಲ್ಲ, ಇಡೀ ಚಿತ್ರತಂಡದ ಶ್ರಮ ನೀರಿನಲ್ಲಿ ಹೋಮ ಮಾಡಿದ ಹಾಗಾಗಿದೆ. ಇಂತಹ ಬೆಳವಣಿಗೆ ಕಂಡು ನಟ ಜಗ್ಗೇಶ್ ಕಿಡಿಕಾರಿದ್ದಾರೆ. ಮುಂದೆ ಓದಿರಿ....
ಹೊಸ ತಲೆನೋವು
ಈಗಾಗಲೇ ಡಬ್ಬಿಂಗ್, ಪೈರಸಿ ಅಂತಹ ಸಮಸ್ಯೆಗಳಿಂದ ನಲುಗಿರುವ ಚಿತ್ರತಂಡಕ್ಕೆ ಈಗ ಫೇಸ್ ಬುಕ್ ಲೈವ್ ಎಂಬ ಹೊಸ ತಲೆನೋವು ಶುರುವಾಗಿದೆ. ಸಾಮಾಜಿಕ ಜಾಲತಾಣಗಳನ್ನ ದುರ್ಬಳಕೆ ಮಾಡಿಕೊಂಡ ಯುವಕನ ವಿರುದ್ಧ ನಟ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಹೌಹಾರಿದ್ದಾರೆ.
ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ
ವಿಷ ಕೊಟ್ಟು ಸಾಯಿಸಿ
''ಇಂದು ತುಂಬಾ ಕೆಟ್ಟ ಸಂಪ್ರದಾಯ. ಇದರ ಬದಲು ವಿಷಕೊಟ್ಟು ಸಾಯಿಸಿ ಸಂತೋಷ ಪಡಿ. ವಿಕೃತರೇ... ಒಂದು ಸಿನಿಮಾಗೆ ನೂರು ಜನರ ಬೆವರಿದೆ. ನಿರ್ಮಾಪಕರ ಬದುಕಿದೆ. ಅಂಥವರ ಮೇಲೆ ಕಾನೂನು ಕ್ರಮ ಕಡ್ಡಾಯ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಒಂದುವರೆ ಗಂಟೆ ಲೀಕ್ ಆಗಿದೆ
ಹುಬ್ಬಳ್ಳಿ ಮೂಲದ ಸಂತೋಷ್ ಎಂಬ ಯುವಕ ಸುಮಾರು ಒಂದುವರೆ ಗಂಟೆಗಳ ಕಾಲ ಫೇಸ್ ಬುಕ್ ಲೈವ್ ಮಾಡಿ 'ಭರ್ಜರಿ' ಚಿತ್ರವನ್ನ ತನ್ನ ಅಕೌಂಟ್ ನಲ್ಲಿ ಪ್ರಸಾರ ಮಾಡಿದ್ದಾನೆ. ಫೇಸ್ ಬುಕ್ ಲೈವ್ ಮೂಲಕವೇ 856ಕ್ಕೂ ಹೆಚ್ಚು ಮಂದಿ 'ಭರ್ಜರಿ' ಚಿತ್ರವನ್ನ ಬಿಟ್ಟಿಯಾಗಿ ವೀಕ್ಷಿಸಿದ್ದಾರೆ.
ರಾಜ್ಯಾದ್ಯಂತ 'ಭರ್ಜರಿ' ಪ್ರದರ್ಶನ
ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ ಅಭಿನಯಿಸಿರುವ 'ಭರ್ಜರಿ' ಚಿತ್ರ ನಿನ್ನೆ (ಸೆಪ್ಟೆಂಬರ್ 15) ರಂದು ರಾಜ್ಯಾದ್ಯಂತ ತೆರೆಕಂಡಿದೆ. ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ರೆ, 'ಭರ್ಜರಿ'ಯಾಗಿ ನಿರ್ಮಾಣ ಮಾಡಿರುವವರು ಕನಕಪುರ ಶ್ರೀನಿವಾಸ್.