Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೌಸಲ್ಯಾ ಜೊತೆ 'ಬಿಗ್ ಬಾಸ್ ಸೀಸನ್ 6' ವಿನ್ನರ್ ಶಶಿ ಕಲ್ಯಾಣ
'ಬಿಗ್ ಬಾಸ್ ಸೀಸನ್ 6' ರಿಯಾಲಿಟಿ ಶೋ ವಿನ್ನರ್ ಶಶಿ ಕುಮಾರ್ ಈಗ ಕೌಸಲ್ಯಾ ಜೊತೆ ಮದುವೆಯಾಗುತ್ತಿದ್ದಾರೆ. ಏನು ಶಶಿ ಮದುವೆನಾ..! ಅಂತ ಅಚ್ಚರಿ ಪಡಬೇಡಿ, ಇದು ರಿಯಲ್ ಮದುವೆ ಅಲ್ಲ ರೀಲ್ ಮದುವೆ.
ಶಶಿ ಸದ್ಯ 'ಕೌಸಲ್ಯಾ ಕಲ್ಯಾಣ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಗಾಲೇ ಚಿತ್ರೀಕರಣ ಮುಗಿಸಿ ರಿಲೀಸ್ ಪ್ಲಾನ್ ಮಾಡುತ್ತಿದೆ 'ಕೌಸಲ್ಯಾ ಕಲ್ಯಾಣ' ಚಿತ್ರತಂಡ. ಅಂದಹಾಗೆ ಶಶಿ ಬಿಗ್ ಬಾಸ್ ಮನೆಯಿಂದ ವಿನ್ನರ್ ಆಗಿ ಹೊರ ನಂತರ ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೆ 'ಕೌಸಲ್ಯ ಕಲ್ಯಾಣ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಗಲೇ ಚಿತ್ರೀಕರಣ ಸಹ ಮಾಡಿ ಮುಗಿಸಿದ್ದರು ಶಶಿ.
ನಟ ಶ್ರೀಮುರಳಿ ಭೇಟಿ ಮಾಡಿದ ಬಿಗ್ ಬಾಸ್ ವಿನ್ನರ್ ಶಶಿಕುಮಾರ್
ಬಿಗ್ ಬಾಸ್ ಮನೆಯಲ್ಲಿ ರೈತನಾಗಿ ಮಾತ್ರ ಕಾಣಿಸಿಕೊಂಡಿದ್ದ ಶಶಿ ಒಬ್ಬ ನಾಯಕ ಕೂಡ ಆಗಿದ್ದರು ಅನ್ನೋದು 'ಕೌಸಲ್ಯಾ ಕಲ್ಯಾಣ' ಚಿತ್ರದ ಮಾಹಿತಿ ಹೊರಬಿದ್ದ ನಂತರ ಗೊತ್ತಾಗಿದೆ.
ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!
ಅಂದ್ಹಾಗೆ, ಈ ಚಿತ್ರಕ್ಕೆ ನವೀನ್ ಕುಮಾರ್ ಮತ್ತು ಗಿರೀಶ್ ಇಬ್ಬರು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು, ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಈ ಕತೆ ಕನೆಕ್ಟ್ ಆಗುತ್ತಂತೆ. ಇಲ್ಲಿ ಕೌಸಲ್ಯಾ ಆಗಿ ನಟಿ ರಾಘವಿ ಕಾಣಿಸಿಕಂಡಿದ್ದಾರೆ.
ಸದ್ಯ ಟ್ರೈಲರ್ ರಿಲೀಸ್ ಮಾಡುವ ತವಕದಲ್ಲಿರುವ ಚಿತ್ರತಂಡ ಚಿತ್ರವನ್ನು ಐಪಿಎಲ್ ಕ್ರಿಕೆಟ್ ಪಂದ್ಯಗಳು ಮುಗಿದ ಬಳಿಕ ತೆರೆಗೆ ತರುವ ಪ್ಲಾನ್ ಮಾಡತ್ತಿದೆ.