Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿರಾ ಉಪಚುನಾವಣೆ ಕಣಕ್ಕೆ ಧುಮುಕಲಿದ್ದಾರೆ ಬಿಗ್ಬಾಸ್ ಮಾಜಿ ಸ್ಪರ್ಧಿ
ಬಿಗ್ಬಾಸ್ ಸ್ಪರ್ಧಿ ದಿವಾಕರ್ ಅವರು ಶಿರಾ ಉಪಚುನಾವಣೆ ಕಣಕ್ಕೆ ಇಳಿದಿದ್ದಾರೆ. 'ಶಿರಾ ಕ್ಷೇತ್ರ ಉಪಚುವಾವಣೆಯಲ್ಲಿ ನಾನು ಸ್ಪರ್ಧಿಸಲಿದ್ದೇನೆ' ಎಂದು ಅವರು 'ಫಿಲ್ಮೀಬೀಟ್'ಗೆ ಹೇಳಿದ್ದಾರೆ.
'ಕೆಲವು ಪಕ್ಷಗಳ ಜೊತೆಗೆ ಮಾತಾಡುತ್ತಿದ್ದೀನಿ, ಯಾವ ಪಕ್ಷದ ಚಿಹ್ನೆಯಡಿ ಚುನಾವಣೆಗೆ ನಿಲ್ಲಲಿದ್ದೇನೆ ಎಂಬುದನ್ನು ಇನ್ನು ಐದು ದಿನದಲ್ಲಿ ಘೋಷಿಸಲಿದ್ದೇನೆ. ಪಕ್ಷ ಇಲ್ಲದೇ ಹೋದರೆ ಪಕ್ಷೇತರವಾಗಿಯಾದರೂ ಸರಿ ಚುನಾವಣೆಗೆ ಸ್ಪರ್ಧಿಸುವುದಂತೂ ಖಾಯಂ' ಎಂದಿದ್ದಾರೆ ದಿವಾಕರ್.
'ಶಿರಾ ಕ್ಷೇತ್ರದ ಪರಿಚಯ ನನಗೆ ಇದೆ. ಸೇಲ್ಸ್ಮ್ಯಾನ್ ಆಗಿ ಇಡೀಯ ಕರ್ನಾಟಕವನ್ನೇ ಸುತ್ತು ಹಾಕಿದ್ದೀನಿ. ತುಮಕೂರು, ಶಿರಾಗಳಲ್ಲಿ ಸಹ ಓಡಾಡಿದ್ದೇನೆ, ಜನರ ಜೊತೆ ಬೆರೆತಿದ್ದೇನೆ. ಕೊರೊನಾ ಸಮಯದಲ್ಲಿ ಮಾಸ್ಕ್ ಹಂಚಿಕೆ ಮಾಡಲು ಶಿರಾಗೆ ಬಂದಿದ್ದೆ. ಉದ್ಯೋಗದ ಕಾರಣಕ್ಕೂ ಬಂದಿದ್ದೆ ಇಲ್ಲಿನ ಜನರ ಪರಿಚಯ ನನಗೆ ಇದೆ' ಎಂದರು ದಿವಾಕರ್.
ಖಂಡಿತ ಗೆದ್ದೇ ಗೆಲ್ಲುತ್ತೀನಿ: ದಿವಾಕರ್
'ದೊಡ್ಡ ಪಕ್ಷಗಳ ನಡುವೆ ಸ್ಪರ್ಧಿಸಿ ಸೋಲುವ ಭಯ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ದಿವಾಕರ್, 'ಸೋಲುವ ಭಯ ನನಗೆ ಸ್ವಲ್ಪವೂ ಇಲ್ಲ, ಖಂಡಿತ ಗೆದ್ದೇ ಗೆಲ್ತೀನಿ, ಸಾಕಷ್ಟು ಲೆಕ್ಕಾಚಾರ ಮಾಡಿಕೊಂಡೆ ಚುನಾವಣೆಗೆ ನಿಲ್ಲುವ ನಿರ್ಣಯಕ್ಕೆ ಬಂದಿದ್ದೇನೆ. ನನ್ನ ಕುಟುಂಬ, ಗೆಳೆಯರು, ಹಿರಿಯರೊಡನೆ ಚರ್ಚಿಸಿಯೇ ಈ ನಿರ್ಣಯ ಮಾಡಿದ್ದೇನೆ' ಎಂದರು.
ದಿವಾಕರ್ ಗೆಳೆಯರನ್ನು ಪ್ರಚಾರಕ್ಕೆ ಕರೆತರುವ ಬಗ್ಗೆ ಯೋಚಿಸಿಲ್ಲ: ದಿವಾಕರ್
'ನನ್ನ ಗೆಳೆಯರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಬಿಗ್ಬಾಸ್ ಗೆಳೆಯರನ್ನು ಪ್ರಚಾರಕ್ಕೆ ಕರೆದುಕೊಂಡು ಬರುವ ಬಗ್ಗೆ ಈಗಲೇ ಹೇಳಲಾರೆ. ಆದರೆ ಅವರ ಬೆಂಬಲವಂತೂ ನನಗೆ ಇದ್ದೇ ಇದೆ. ಈಗಿನಿಂದಲೇ ಶಿರಾ ಕ್ಷೇತ್ರದಲ್ಲಿ ಓಡಾಟ ಪ್ರಾರಂಭಿಸುತ್ತೇನೆ. ತಾತ್ಕಾಲಿಕವಾಗಿ ವಾಸ್ತವ್ಯವನ್ನು ಶಿರಾ ಗೆ ವರ್ಗಾವಣೆ ಮಾಡಿಕೊಳ್ಳುತ್ತೇನೆ. ಇಲ್ಲಿನ ಜನರೊಂದಿಗೆ ಬೆರೆಯುತ್ತೇನೆ ಎಂದಿದ್ದಾರೆ ದಿವಾಕರ್.
ಬಿಗ್ಬಾಸ್ ಸ್ಪರ್ಧಿ ಎಂಬ ಕಾರಣಕ್ಕೆ ಮತಹಾಕುವುದು ಬೇಡ: ದಿವಾಕರ್
'ನಾನು ಬಿಗ್ಬಾಸ್ ಸ್ಪರ್ಧಿ, ಸಿನಿಮಾ ಮಾಡಿದ್ದೇನೆ ಎಂಬ ಕಾರಣಕ್ಕೆ ಜನ ಮತ ಹಾಕುವುದು ಬೇಡ. ಅವರಿಗಾಗಿ ನಾನು ಕೆಲಸ ಮಾಡ್ತೀನಿ ಎಂಬ ನಂಬಿಕೆಯಲ್ಲಿ ನನಗೆ ಮತ ಹಾಕಲಿ ಸಾಕು. ಸಾಮಾನ್ಯವ್ಯಕ್ತಿಯಾಗಿ ನನಗೆ ಸಾಮಾನ್ಯ ವ್ಯಕ್ತಿಯ ಕಷ್ಟ ಗೊತ್ತು, ಅವರಿಗೆ ಆಗುತ್ತಿರುವ ತೊಂದರೆಗಳು ಗೊತ್ತು. ಸರ್ಕಾರದಿಂದ ಅವರಿಗೆ ಏನು ಸಿಗಬೇಕೋ ಅದು ಸಿಗುತ್ತಿಲ್ಲ, ಸಾಮಾನ್ಯರ ಹಕ್ಕನ್ನು ಅವರಿಗೆ ಕೊಡಿಸುವ ಉದ್ದೇಶದಿಂದ ನಾನು ಚುನಾವಣೆಗೆ ನಿಂತಿದ್ದೇನೆ' ಎಂದು ತಮ್ಮ ಉದ್ಧೇಶ ಸ್ಪಷ್ಟಪಡಿಸಿದರು.
ಕಾಂಗ್ರೆಸ್-ಜೆಡಿಎಸ್ ನಡುವೆ ಸ್ಪರ್ಧೆ
ಶಿರಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನಾಂಕವಾಗಿದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ ಆಗಿದೆ. ಜೆಡಿಎಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿ ಘೋಷಿಸಬೇಕಿದೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಹೆಚ್ಚು ಪ್ರಭಲವಾಗಿದೆ.