Breaking ; ಕೃಷಿ ಹೊಂಡಕ್ಕೆ ಕೆಮಿಕಲ್ ಹಾಕಿ ಸ್ಫೋಟ ಪ್ರಕರಣ, ಡ್ರೋನ್ ಪ್ರತಾಪ್ಗೆ ರಿಲೀಫ್..!
22ರ ಹರೆಯದಲ್ಲಿ 600ಕ್ಕೂ ಅಧಿಕ ಡ್ರೋನ್ಗಳನ್ನು ತಯಾರಿಸಿರುವುದಾಗಿ ಹೇಳಿ ಪ್ರಚಾರವನ್ನು ಪಡೆದು ಆ ನಂತರ ಕರುನಾಡಿನೆಲ್ಲೆಡೆ ಅಪಹಾಸ್ಯಕ್ಕೆ ಗುರಿಯಾದವರು ಡ್ರೋನ್ ಪ್ರತಾಪ್. ಆ ನಂತರ ಬಿಗ್ ಬಾಸ್ ಮನೆಗೆ ಹೋಗಿ ಡ್ಯಾಮೇಜ್ ಆಗಿದ್ದ ಇಮೇಜ್ನ ಸರಿ ಮಾಡಿಕೊಂಡು ಬಂದ ಡ್ರೋನ್ ಪ್ರತಾಪ್, ಮೊನ್ನೆ ಮೊನ್ನೆ ಜನಕಲೋಟಿ ಗ್ರಾಮದ ಬಳಿ ಇರುವ ಕೃಷಿ ಹೊಂಡದಲ್ಲಿ ರಾಸಾಯನಿಕವನ್ನು ಬಳಸಿ ಸ್ಟೋಟ ಮಾಡಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಡ್ರೋನ್ ಪ್ರತಾಪ್ ವಿರುದ್ಧ ಮಧುಗಿರಿ ಮಿಡಿಗೇಶಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ವೈರಲ್ ಆದ ವಿಡಿಯೋ ಆಧಾರದ ಮೇಲೆ ಡ್ರೋನ್ ಪ್ರತಾಪ್ ಅವರನ್ನು ಬಂಧಿಸಿದ್ದರು. ಆ ನಂತರ ಪ್ರಕರಣದ ವಿಚಾರಣೆಯನ್ನು ಮಾಡಿದ್ದ ತುಮಕೂರಿನ ಮಧುಗಿರಿ ಜೆಎಂಎಫ್ಸಿ ಕೋರ್ಟ್ ಡಿಸೆಂಬರ್ 26ರವರೆಗೆ ಡ್ರೋನ್ ಪ್ರತಾಪ್ಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಈಗ ಈ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ಗೆ ರಿಲೀಫ್ ಸಿಕ್ಕಿದೆ. ಮಧುಗಿರಿ ನಾಲ್ಕನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ನಲ್ಲಿ ಡ್ರೋನ್ ಪ್ರತಾಪ್ಗೆ ಜಾಮೀನು ಸಿಕ್ಕಿದೆ.



Click it and Unblock the Notifications











