Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಳೆಯನನ್ನು ಕ್ಷಮಿಸಿ, ನಾನೂ ಕ್ಷಮೆ ಕೇಳುತ್ತೇನೆ: ದಿವಾಕರ್
ಬಿಗ್ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ದಿವಾಕರ್ ಫಿಲ್ಮೀಬೀಟ್ ಫೇಸ್ಬುಕ್ ಲೈವ್ ನಲ್ಲಿ ಇಂದು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.
ಕೊರೊನಾ, ವೈಯಕ್ತಿಕ ಜೀವನ, ಉದ್ಯೋಗ, ಸಿನಿಮಾ, ಗೆಳೆಯರು, ಬಿಗ್ಬಾಸ್ ಎಲ್ಲ ವಿಷಯಗಳ ಬಗ್ಗೆ ಮಾತನಾಡಿದ ದಿವಾಕರ್, ತಮ್ಮ ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಹಾಗೂ ಅವರ ಕೋಲುಮಂಡೆ ಹಾಡಿನ ವಿವಾದದ ಬಗ್ಗೆಯೂ ಮಾತನಾಡಿದರು.
ಆಪ್ತ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲಿದ್ದಾರೆ ದಿವಾಕರ್
'ಕೋಲುಮಂಡೆ' ಹಾಡು ದಿವಾಕರ್ ಗೆ ಇಷ್ಟವಾಯಿತಂತೆ. ಆದರೆ ದೃಶ್ಯ ಸಂಯೋಜನೆಯಲ್ಲಿ ತುಸು ಎಡವಿದ್ದಾರೆ ಎಂದು ನೇರವಾಗಿ ಹೇಳಿದರು ದಿವಾಕರ್. ಜನಕ್ಕೂ ಅದು ಅಷ್ಟಾಗಿ ಇಷ್ಟವಾಗಿಲ್ಲವೆಂಬುದನ್ನು ಒಪ್ಪಿಕೊಂಡರು.
ಬೇಕೆಂದು ಆತ ಹೀಗೆ ಮಾಡಿಲ್ಲ: ದಿವಾಕರ್
'ಚಂದನ್ ಶೆಟ್ಟಿ ನನ್ನ ಆತ್ಮೀಯ ಗೆಳೆಯ ಆತನ ಮನಸ್ಸು ನಾನು ಬಲ್ಲೆ, ಉದ್ದೇಶಪೂರ್ವಕವಾಗಿ, ಯಾರಿಗೋ ಬೇಸರ ತರಿಸಲು ಆತ ಹೀಗೆ ಮಾಡುವವನಲ್ಲ. ಇದು ಅಚಾತುರ್ಯದಿಂದ ಆಗಿಬಿಟ್ಟಿದೆ. ಯಾರೂ ಸಹ ಉದ್ದೇಶಪೂರ್ವಕವಾಗಿ ಸುಡುವ ಬಿಸಿನೀರಲ್ಲಿ ಕೈ ಇಡುತ್ತಾರೆಯೇ' ಎಂದು ಪ್ರಶ್ನಿಸಿದರು ದಿವಾಕರ್.
ಚಂದನ್ ಶೆಟ್ಟಿಯನ್ನು ಕ್ಷಮಿಸಿಬಿಡಿ: ದಿವಾಕರ್
ಚಂದನ್ ಶೆಟ್ಟಿಯಿಂದ ಅರಿಯದೇ ತಪ್ಪು ಆಗಿಬಿಟ್ಟಿದೆ. ಆತನನ್ನು ಕ್ಷಮಿಸಿಬಿಡಿ. ಆತ ಒಳ್ಳೆಯ ಸಂಗೀತಗಾರ, ಸಾಕಷ್ಟು ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ. ಮುಂದೆಯೂ ಕೊಡಲಿದ್ದಾರೆ. ಕನ್ನಡದ ಹಾಡುಗಳು ವಿದೇಶಗಳಲ್ಲಿಯೂ ಗುನುಗುವಂತೆ ಮಾಡಿದ್ದಾನೆ ಆತ. ಹಾಗಾಗಿ ಆತನನ್ನು ಕ್ಷಮಿಸಿಬಿಡಿ ಆತನ ಪರವಾಗಿ ನಾನೂ ಸಹ ಕ್ಷಮೆ ಕೇಳುತ್ತೇನೆ ಎಂದರು ದಿವಾಕರ್.
ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?
ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ
ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಬಗ್ಗೆ ಸಾಕಷ್ಟು ಮಾತನಾಡಿದ ದಿವಾಕರ್, ನಾಳೆ (ಸೆಪ್ಟೆಂಬರ್ 17) ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯೊಂದನ್ನು ತಾವು ನೀಡುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲದೆ, ತಮ್ಮ ಮೂರು ತಿಂಗಳು ಮುದ್ದು ಮಗಳಿಗೆ ಹೆಸರಿಟ್ಟಿದ್ದು ಸಹ ಚಂದನ್ ಎಂಬುದನ್ನು ಹೇಳಿದರು ದಿವಾಕರ್.
Recommended Video
ಕೋಲುಮಂಡೆ ಹಾಡು ವಿವಾದಕ್ಕೆ ಕಾರಣವಾಗಿತ್ತು
ಚಂದನ್ ಶೆಟ್ಟಿಯ ರ್ಯಾಪ್ ಹಾಡು 'ಕೋಲುಮಂಡೆ' ವಿವಾದ ಸೃಷ್ಟಿಸಿತ್ತು. ಹಾಡಿನಲ್ಲಿ ಶರಣೆ ಸಂಕವ್ವನಿಗೆ, ಮಲೆ ಮಾದೇಶ್ವರನಿಗೆ ಅಪಮಾನ ಎಸಗಲಾಗಿದೆ ಎಂದು ಹಲವರು ಆರೋಪಿಸಿದರು. ಈ ಬಗ್ಗೆ ಚಂದನ್ ಶೆಟ್ಟಿ ಕ್ಷಮೆ ಸಹ ಕೇಳಿದರು.
ವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರು